ಹಿಮಾಚಲ ಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಸಂಪ್ರಿತ್ ಸಿಂಗ್ ಎಂಬ ವ್ಯಕ್ತಿ ಇದ್ದ. ಈತ ತನ್ನ ಹೊಲದಲ್ಲಿ ವ್ಯವಸಾಯ ಮಾಡುತ್ತಾ ರೈತನಾಗಿ ಜೀವನ ಮಾಡುತ್ತಿರುತ್ತಾರೆ. ಒಂದು ದಿನದಲ್ಲಿ ಟ್ರ್ಯಾಕ್ಟರ್ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಅಲ್ಲಿ ಸರಸ ಹಾಡುತ್ತಿರುತ್ತದೆ. ಹಾವಿನ ಸರಸವನ್ನು ಸಂಪ್ರೀತ್ ನೋಡಿರುವುದಿಲ್ಲ. ತನ್ನ ಪಾಡಿಗೆ ತಾನು ಟ್ರ್ಯಾಕ್ಟರ್ ಮೂಲಕ ತನ್ನ ಭೂಮಿ ಉಳುತ್ತಿರುತ್ತಾನೆ. ಹೀಗೆ ಸರಸ ಆಡುತ್ತಾ ಆಡುತ್ತಾ ಎರಡು ಹಾವುಗಳು ಟ್ಯಾಕ್ಟರ್ ಬರುತ್ತಿದ್ದ ಕೆಸರುಗದ್ದೆಯ ಮೇಲೆ ಬಂದು ಬಡುತ್ತವೆ. ಅವರಿಗೆ ಗೊತ್ತಾಗುವುದಿಲ್ಲ. ಸರಸದಲ್ಲಿ ಮಗ್ನರಾಗಿದ್ದ ಹಾವುಗಳಿಗೆ ತಾವು ಕೆಸರುಗದ್ದೆಯಲ್ಲಿ ಇದೀವಿ, ಹಾಗೆ ಸಂಪ್ರೀತ್ ಕೆಸರುಗದ್ದೆಯ ಮೇಲೆ ಟ್ರ್ಯಾಕ್ಟರ್ ಕೆಲಸ ಮಾಡುತ್ತಿದ್ದಾನೆ ಎಂಬ ಅರಿವಿರಲಿಲ್ಲ.
ಕೆಲ ಕ್ಷಣದ ಬಳಿಕ ಟ್ರ್ಯಾಕ್ಟರ್ ಕರೆಕ್ಟಾಗಿ ಕಂಡು ಹಾವಿನ ತಲೆಯ ಮೇಲೆ ಹರಿದು ಹೋಗಿ ಬಿಡುತ್ತೆ. ಗಂಡು ಹಾವು ವಿಲ ವಿಲ ಒದ್ದಾಡಿ ಸತ್ತು ಹೋಗುತ್ತದೆ. ಅದು ಸಂಪ್ರಿತ್ ಗೆ ಗೊತ್ತಾಯ್ತಾ ಕೂಡಲೇ ಟ್ರ್ಯಾಕ್ಟರ್ ಇಂದ ಕೆಳಗಿಳಿದು ಆಗಿರುವುದನ್ನು ನೋಡಿ ತುಂಬಾ ಬೇಸರ ಪಟ್ಟುಕೊಳ್ಳುತ್ತಾನೆ. ಮೊದಲೇ ಶಿವಭಕ್ತನಾಗಿದ್ದ ಸಂಪ್ರಿತ್, ಹಾವುಗಳನ್ನು ಕೂಡ ದೇವರಂತೆ ಪೂಜಿಸುತವ ವ್ಯಕ್ತಿಯಾಗಿದ್ದ. ಆಗಿದ್ದು ಆಗಿಹೋಗಿದೆ ಎಂದು. ಕೊನೆಗೆ ಹಾವಿನ ಶವವನ್ನು ಅಲ್ಲೇ ಪಕ್ಕದ ಜಮೀನಿನಲ್ಲಿ ಮಣ್ಣು ಮಾಡಿ ಮನೆಗೆ ವಾಪಸ್ ಬಂದುಬಿಡುತ್ತಾನೆ. ಆದರೆ ಎಲ್ಲ ಘಟನೆಗಳನ್ನು ಗಂಡು ಹಾವಿನ ಜೊತೆ ಸರಸ ಆಡುತ್ತಿದ್ದ ಮತ್ತೊಂದು ಹೆಣ್ಣು ದೂರದಿಂದಲೇ ನೋಡುತ್ತಿತ್ತು. ಇದನ್ನು ಕಣ್ಣಾರೆ ನೋಡಿದ್ದ ಆ ಹಾವು ಅಂದಿನಿಂದ ಅವನ ಮೇಲೆ ದ್ವೇಷ ಸಾಧಿಸಲು ಶುರುಮಾಡಿತು.