ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಕುಟುಂಬದಲ್ಲಿ ಈಗ ಸಂತಸದ ವಾತಾವರಣ ಮನೆ ಮಾಡಿದೆ. ಹೌದು ಚಿರಂಜೀವಿ ಸರ್ಜಾ ನಿಧನದ ನಂತರ ದಿನದಿಂದ ಅಪಾರ ಕಷ್ಟಗಳನ್ನು ಸಹಿಸಿಕೊಂಡು, ಒತ್ತಡದಲ್ಲಿದ್ದ ಕುಟುಂಬಕ್ಕೆ ಇದೀಗ ಮರಿ ಚಿರುವಿನ ಆಗಮನದಿಂದ ಸಂತೋಷ ಮನೆಮಾಡಿದೆ. ಈ ಮೂಲಕ ಕುಟುಂಬದಲ್ಲಿ ಹೊಸ ಉರುಪು ಮೂಡಿದೆ ಎಂದರೆ ತಪ್ಪಾಗಲಾರದು. ಇನ್ನು ಚಿರು ಸರ್ಜಾ ರವರನ್ನು ಹೋಲುವಂತೆ ಅವರ ಮಗುವಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದ ಜ್ಯೋತಿಷ್ಯರು, ಪಂಡಿತರು ಹೇಳಿದ್ದೇನು, ಚಿರು ಅವರು ಪುನರ್ಜನ್ಮ ಪಡೆದಿದ್ದಾರ ಎಂಬುದನ್ನು ತಿಳಿಸುತ್ತೇವೆ. ಎಲ್ಲಾ ಅಭಿಮಾನಿಗಳು ಕೂಡ ಜೂನಿಯರ್ ಚಿರು ಅವರನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಬರಮಾಡಿಕೊಂಡಿದ್ದರು. ಮೂಲಗಳಿಂದ ತಿಳಿದುಬಂದ ಮಾಹಿತಿಯೆಂದರೆ ಸರ್ಜಾ ಮತ್ತು ಮೇಘನ ಕುಟುಂಬದವರು ಸಹ ಮಗುವನ್ನು ಚಿರು ಎಂದೇ ಕರೆಯುತ್ತಿದ್ದಾರಂತೆ.
ಏಕೆಂದರೆ ಚಿರು ಮತ್ತು ಮೇಘನಾ ಕುಟುಂಬದವರು ಸಹ ಮಗುವಲ್ಲಿ ಚಿರಂಜೀವಿ ಸರ್ಜಾ ರವರನ್ನು ಕಾಣುತ್ತಿದ್ದಾರೆ. ಇದಕ್ಕೆ ವಿದ್ವಾಂಸರು ಮತ್ತು ಜ್ಯೋತಿಷ್ಯರು ಹೇಳುವುದೇನೆಂದರೆ ಪುರಾಣದ ಪ್ರಕಾರ ದೇಹವೆಂಬುದು ಆತ್ಮದ ಬಟ್ಟೆಯಾಗಿದೆ. ಅಂತಹ ಬಟ್ಟೆಯನ್ನು ಮಲಿನಗೊಳಿಸಿದೆ ಶುದ್ಧವಾಗಿ ಕಳಿಸಿಕೊಟ್ಟರೆ ಪುನರ್ಜನ್ಮ ಪಕ್ಕ ಎಂದು ಹೇಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಚಿರು ಮೈಮೇಲೆ ಇರುವ ಮಚ್ಚೆಗಳು ಹಾಗೂ ಮಗು ಮೈಮೇಲೆ ಇರುವ ಮಚ್ಚೆಗಳು ಸಾಕಷ್ಟು ಹೋಲುತ್ತವೆ ಹಾಗೂ ಇದಕ್ಕೆ ಸಂಬಂಧಪಟ್ಟ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಚ್ಚೆಗಳನ್ನು ನೋಡಿ ಭವಿಷ್ಯ ಭೂತವನ್ನು ಹೇಳುವುದು ಇದನ್ನು ವೈಜ್ಞಾನಿಕ ಜ್ಯೋತಿಷ್ಯ ಎಂದು ಕೂಡ ಕರೆಯುತ್ತಾರೆ. ಹೌದು ಮುಖ್ಯವಾಗಿ ಕ್ರ್ಕೈಸ್ತ ಧರ್ಮದ ಪ್ರಕಾರ 49 ದಿನಗಳ ನಂತರ ಪುನರ್ಜನ್ಮ ಹೊಂದುತ್ತಾರೆ. ಗರುಡ ಪುರಾಣದ ಪ್ರಕಾರ ಕಡಿಮೆ ತಪ್ಪು ಮಾಡಿರುವ ವ್ಯಕ್ತಿ 3-4 ತಿಂಗಳುಗಳಲ್ಲಿ ಪುನರ್ಜನ್ಮ ಪಡೆಯುತ್ತಾರೆ.