ದೇವರು ಆಂಜನೇಯ ಭಗವಂತ ಶ್ರೀರಾಮ ಪರಮಭಕ್ತರು ಅಂಜನೇಯ ಈ ಭೂಲೋಕದ ಮೇಲೆ ಇನ್ನೂ ಕೂಡ ಜೀವಂತವಾಗಿದ್ದಾರೆ. ಎನ್ನುವುದಕ್ಕೆ ಹಲವು ನಿಜವಾಗಿ ನಡೆದಂತಹ ಘಟನೆಗಳು ನಮ್ಮ ಮುಂದೆ ಸಾಕ್ಷಿಯಾಗಿ ಉಳಿದುಕೊಂಡಿವೆ. ಉದಾಹರಣೆಗೆ ಅಮಿತ್ ಉತ್ತರಪ್ರದೇಶದಲ್ಲಿ ವಾಸಮಾಡುತ್ತಿದ್ದ ಹನುಮಂತನ ಪರಮಭಕ್ತ. ಪ್ರತಿದಿನ ತನ್ನ ಮನೆಯಿಂದ ಹೊರಡುವಾಗ ದೇವರ ಮನೆಯಲ್ಲಿ ಹನುಮಂತನ ಫೋಟೋಗೆ ಕೈಮುಗಿದು ಪೂಜೆ ಮಾಡಿ ನಂತರ ಕೆಲಸ ಮಾಡಲು ತನ್ನ ಮನೆಯಿಂದ ಹೊರಗೆ ಬರುತ್ತಿದ್ದ. ಅಮಿತ್ ಒಂದು ದೊಡ್ಡ ಊದುಬತ್ತಿ ತಯಾರು ಮಾಡುವ ಫ್ಯಾಕ್ಟರಿ ಓನರ್ ಆಗಿ ಕೆಲಸ ಮಾಡುತ್ತಿದ್ದ. ಅಮಿತ್ ಫ್ಯಾಕ್ಟರಿಯಲ್ಲಿ ನೂರು ಜನ ಕೆಲಸಗಾರರು ಕೆಲಸ ಮಾಡುತ್ತಿದ್ದರು. ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ತುಂಬಾ ಖುಷಿಯಾಗಿದ್ದ.
ಫ್ಯಾಕ್ಟರಿಗೆ ಬೇಕಾದರೂ ಆರ್ಡರ್ ಗಳನ್ನು ತರಲು ಯಾವಾಗಲೂ ಕೂಡ ತನ್ನ ಕಾರಿನಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಏಕಾಂಗಿಯಾಗಿ ಹೋಗುತ್ತಿದ್ದ. ಇದೇ ರೀತಿ ಒಂದು ದಿನ ಆರ್ಡರ್ ತರಲು ಉತ್ತರಪ್ರದೇಶದಿಂದ ಹರಿಯಾಣ ರಾಜ್ಯಕ್ಕೆ ಹೋಗುತ್ತಿದ್ದ. ರಸ್ತೆಯ ಮಾರ್ಗದಲ್ಲಿ ಅಮಿತ್ ಹಲವು ಕಡೆ ರೈಲ್ವೆ ಟ್ರ್ಯಾಕ್ ಗಳು ಅಡ್ಡವಾಗಿ ಸಿಕ್ಕಿದವು ಅಮಿತ ಆಗಲೇ ತನ್ನ ಮನೆಯಿಂದ ನಾಲ್ಕೈದು ಗಂಟೆಗಳ ಪ್ರಯಾಣ ಮಾಡಿದ್ದ. ಆರ್ಡರ್ ಕೊಡ್ತೀನಿ ಅಂದಿದ್ದ ಪಾರ್ಟಿ ಸಡನ್ನಾಗಿ ಕಾಲ್ ಮಾಡಿ ಆದಷ್ಟು ಬೇಗ ಬನ್ನಿ ನಾನು ಎಲ್ಲಿ ಹೋಗಬೇಕು. ಬೇಗ ಬರೆದಿದ್ದರೆ ಆರ್ಡರ್ ಸಿಗುವುದಿಲ್ಲ ಎಂದು ಹೇಳಿಬಿಟ್ಟ. ಆರ್ಡರ್ ನೀಡಿರುವವರ ಮಾತು ಕೇಳಿ ಶಾಕ್ಆಗಿ ಕಾರ್ ಸ್ಪೀಡ್ ಆಗಿ ಓಡಿಸುತ್ತಿದ್ದ. ಅವನು ಸರಿಯಾಗಿ ಊಟ ತಿಂಡಿ ಮಾಡದ ಕಾರಣ ಸುಸ್ತಾಗಿ ಡ್ರೈವ್ ಮಾಡುತ್ತಿದ್ದ.