ಈಗಿನ ಕಾಲದಲ್ಲಿ ಬಿಕ್ಷುಕರಿಗೆ ಒಂದು ರೂಪಾಯಿ ಕೊಡಲು ಹಿಂದೆ ಮುಂದೆ ನೋಡ್ತಾರೆ. ಅಂತದರಲ್ಲಿ ಒಬ್ಬ ಯುವಕ ಬಿಕ್ಷುಕಿ ಒಬ್ಬಳಿಗೆ ಎಂತಹ ಕೆಲಸ ಮಾಡಿದ್ದಾನೆ, ಎಂದು ನೀವು ನೋಡಿದ್ರೆ ಶಾಕ್ ಆಗ್ತೀರಾ. ಇದು ನಡೆದಿರುವುದು ಕಾನ್ಪುರದಲ್ಲಿ ಅನಿಲ್ ಎಂಬ ಒಬ್ಬ ವ್ಯಕ್ತಿ ಡ್ರೈವರ್ ಕೆಲಸ ಮಾಡುತ್ತಿದ್ದ. ಕೊರೋನ ಕಾಯಿಲೆ ಕಾರಣದಿಂದ ದೇಶ ಲಾಕ್ ಡೌನ್ ಸಮಯದಲ್ಲಿ ಅನಿಲ್ ತನ್ನ ಮಾಲಿಕ ಹೇಳಿದಂತೆ ರಸ್ತೆಬದಿಯಲ್ಲಿ ಊಟ ಇಲ್ಲದೆ ಒದ್ದಾಡುತ್ತಿರುವ ಜನರಿಗೆ ಪ್ರತಿನಿತ್ಯ ಊಟ ತಂದುಕೊಡುತ್ತಿದ್ದ. ಒಂದು ದಿನ ಹೀಗೆ ಊಟ ಹಂಚುವ ಸಂದರ್ಭದಲ್ಲಿ ನೀಲಂ ಎಂಬ ಭಿಕ್ಷುಕಿಗೆ ಅನಿಲ್ ಪರಿಚಯವಾಗುತ್ತೆ. ಪ್ರತಿದಿನ ಬಿಕ್ಷುಕಿಗೆ ಅನಿಲ್ ಊಟ ತಂದುಕೊಡುತ್ತಿದ್ದ.
ಇವರಿಬ್ಬರ ಪರಿಚಯವಾಯಿತು ನೀಲಂ ತಾನು ಏಕೆ ಬಿಕ್ಷುಕಿಯಾದೆ ಎಂದು ಕೇಳಿದಾಗ, ಆಕೆ ಈ ರೀತಿಯಾಗಿ ಹೇಳಿಕೊಂಡಳು. ತನ್ನ ತಂದೆ ತುಂಬಾ ವರ್ಷಗಳ ಹಿಂದೆ ಸತ್ತು ಹೋದರು ನನ್ನ ತಾಯಿ ಲಕ್ವಾ ಹೊಡೆದಿದೆ. ನಾನು ಮತ್ತು ನನ್ನ ತಾಯಿ ಅಣ್ಣನ ಮನೆಯಲ್ಲಿ ಕೆಲದಿನ ವಾಸಿಸುತ್ತಿದ್ದೆವು ಆದರೆ ಅತ್ತಿಗೆ ಮತ್ತು ಅಣ್ಣ ಮನೆಯಿಂದ ಆಚೆ ಓಡಿಸಿಬಿಟ್ಟರು. ಅದರಿಂದ ನಾನು ನನ್ನ ತಾಯಿಯನ್ನು ಸಾಕಲು ಈ ರಸ್ತೆ ಮೇಲೆ ಭಿಕ್ಷೆ ಬೇಡುತ್ತೇನೆ ಎಂದು ಹೇಳಿದಳು. ಈ ಕಥೆ ಕೇಳಿದ ಅನಿಲ್ ಗೆ ಕರುಣೆ ಮತ್ತು ಪ್ರೀತಿ ಹುಟ್ಟಿತು. ಲಾಕ್ ಡೌನ್ ನ 60 ದಿನಗಳು ಭೇಟಿಯಾಗುತ್ತಿದ್ದರು. ಅನಿಲ್ ನೀಲಂನನ್ನು ಭಿಕ್ಷೆ ಬೇಡುವುದನ್ನು ಬಿಡು, ನಾನು ನಿನ್ನನ್ನು ಮದುವೆಯಾಗುತ್ತೇನೆ. ನಿಮ್ಮ ಪೂರ್ಣ ಜವಾಬ್ದಾರಿ ನನ್ನದು ಎಂದು ಹೇಳಿದ.ಈ ಕೆಳಗೆ ಕಾಣುವ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.