ಪಂಕಜ್ ಕುಮಾರ್ ಎಂಬ ಒಬ್ಬ ವ್ಯಕ್ತಿ ತಿರುನಲ್ ವೇಲಿ ಎಂಬ ಗ್ರಾಮದಲ್ಲಿ ವಾಸಮಾಡುತ್ತಿದ್ದಾನೆ. ಈತನ ವಯಸ್ಸು 21 ಈತ ಕಾಲೇಜು ವಿದ್ಯಾರ್ಥಿಯಾಗಿದ್ದ ಪ್ರತಿದಿನ ಬಸ್ ನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದ. ಹೀಗೆ ಒಂದು ದಿನ ಕಾಲೇಜಿಗೆ ಹೋಗಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಬಸ್ ನಲ್ಲಿ ಜಾಸ್ತಿ ಜನಗಳು ಇರಲಿಲ್ಲ. ಆಗ ಪಂಕಜ್ ಕೂತಿದ್ದ ಪಕ್ಕದ ಸೀಟ್ ನಲ್ಲಿ ಒಬ್ಬ ವ್ಯಕ್ತಿ ಒಂದು ಗಂಡು ಮಗುವನ್ನು ಎತ್ತಿಕೊಂಡು ಕೂತಿದ್ದ. ಮುಂದೆ ಸಾಗುತ್ತಲೇ ಜನಗಳು ಬಸ್ ನಲ್ಲಿ ಜಾಸ್ತಿಯಾದರೂ, ಇಷ್ಟೊತ್ತು ಸುಮ್ಮನೆ ಕುಳಿತಿದ್ದ ಮಗು ಜನ ಜಾಸ್ತಿ ಆಗುತ್ತಿರುವುದು ನೋಡಿ ಪಾಪ ಮಗುವಿಗೆ ಏನೆನಿಸಿತೋ ಏನೋ ಇದ್ದಕ್ಕಿದ್ದ ಹಾಗೆ ಜೋರಾಗಿ ಅಳಲು ಪ್ರಾರಂಭಮಾಡಿತು.
ಮಗು ಜೊತೆ ತಂದೆ ಮಾತ್ರ ಬಂದಿದ್ದರಿಂದ ಮಗು ಅಳುವುದನ್ನು ಆತನಿಂದ ನಿಲ್ಲಿಸಲಾಗಲಿಲ್ಲ. ಸಮಯ ಕಳೆದಂತೆ ಆ ಮಗು ಅಳುವನ್ನು ಇನ್ನು ಜಾಸ್ತಿ ಮಾಡುತ್ತಿತ್ತು, ಮಗುವನ್ನು ಎಷ್ಟೇ ಸಮಾಧಾನ ಮಾಡಿದರು ಅಳು ನಿಲ್ಲಿಸಲಿಲ್ಲ. ಆಗ ಅದೇ ಬಸ್ ನಲ್ಲಿದ್ದ ಮಹಿಳೆಯೊಬ್ಬಳು ಮುಂದೆ ಬಂದು ಮಕ್ಕಳು ಎಂದರೆ ಹೀಗೆ ಇರುತ್ತಾರೆ ಸರ್. ನಾವು ಮಕ್ಕಳನ್ನು ಭಯ ಪಡಿಸಬಾರದು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಎಂದು ಮಗುವನ್ನು ಎತ್ತಿಕೊಂಡಳು ಆದರೆ ಮಗು ಮೊದಲಿಗೆ ಆಕೆಯ ಹತ್ತಿರ ಹೋಗಲು ನಿರಾಕರಿಸಿತು. ನಂತರ ಮಗುವನ್ನು ಎತ್ತಿ ಮುದ್ದಾಡಲು ಪ್ರಾರಂಭಿಸಿ ಒಂದು ಕಿಟಕಿ ಪಕ್ಕದ ಸೀಟಿನಲ್ಲಿ ಕೂತು ಒಗ್ಗಿಸಿಕೊಂಡಳು ಕೆಲವೇ ಕ್ಷಣಗಳಲ್ಲಿ ಮಗು ಅಳುವನ್ನು ನಿಲ್ಲಿಸಿ ಬಿಟ್ಟಿತು.