ಶಾಮ್ ಪ್ರಸಾದವೆಂದು ಹೋಟೆಲ್ ಡೆಲಿವರಿ ನೀಡುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ದಿನವಿಡಿ ಕೆಲಸದಲ್ಲಿ ತುಂಬಾ ಕಷ್ಟ ಪಡುತ್ತಾ ಡೆಲಿವರಿ ಕೆಲಸ ಮಾಡುತ್ತಾ ಶಾಮ್ ಪ್ರಸಾದ್ ಯಾವಾಗಲೂ ರಸ್ತೆಮೇಲೆ ಇರಬೇಕಾಗುತ್ತೆ. ಆ ಏರಿಯಾ ಈ ಏರಿಯಾ ಅಂತ ಊಟ ಡೆಲಿವರಿ ಕೊಡಲು ಶಾಮ್ ಪ್ರಸಾದ ಓಡಾಡುತ್ತಲೇ ಇರುತ್ತಾನೆ. ಟ್ರಾಫಿಕ್, ಮಳೆ, ದೂಳು, ಚಳಿ ಯಾವುದು ಈ ಕಲಸಕ್ಕೆ ಅಡ್ಡಿ ಆಗಲ್ಲ. ಎಷ್ಟೇ ಕಷ್ಟವಾದರೂ ಹೇಳಿದ ಸಮಯಕ್ಕೆ ಸರಿಯಾಗಿ ಕಷ್ಟಮರ್ ಗಳಿಗೆ ಊಟವನ್ನು ತಲುಪಿಸಲೇಬೇಕು. ಸಂತಸದ ಜೀವನದಲ್ಲಿ ಕಷ್ಟಪಟ್ಟು ಅಷ್ಟೋ ಇಷ್ಟೋ ಸಂಪಾದನೆ ಕೂಡ ಆಗುತ್ತಿತ್ತು ಹೀಗೆ ಪ್ರತಿದಿನ ಶಾಮ್ ಪ್ರಸಾದ ರೋಡ್ ಮೇಲೆ ತಿರುಗಾಡುತ್ತಿರುತ್ತಾನೆ. ಯಾವಾಗ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಲು ಆಗಲ್ಲ.
ಒಂದು ದಿನ ವಿಪರೀತ ಮಳೆ ಆ ಮಳೆಯಲ್ಲೇ ಶ್ಯಾಂಪ್ರಸಾದ್ ಬೈಕ್ ಓಡಿಸಿಕೊಂಡು ಹೋಗುತ್ತಿದ್ದೆ. ಒಂದು ಕಡೆ ಜೋರು ಮಳೆ ಮತ್ತು ಮತ್ತೊಂದು ಕಡೆ ಟ್ರಾಫಿಕ್, ಟ್ರಾಫಿಕ್ ಎಲ್ಲ ಕ್ಲಿಯರ್ ಆದನಂತರ ಆ ಮಳೆಯಲ್ಲಿ ತನ್ನ ಗಾಡಿಯಲ್ಲಿ ಒಂದು ಡೆಲಿವರಿ ನೀಡಲು ಹೋಗುತ್ತಿದ್ದ. ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ, ಬಿದ್ದ ರಭಸಕ್ಕೆ ತಲೆಗೆ ಹಾಕಿದ ಎಲ್ಮೆಟ್ ಹಾರಿಹೋಯಿತು. ಶಾಮ್ ಪ್ರಸಾದ್ ಕೆಳಗೆ ಬಿದ್ದು ಹಾಗೆ ರೋಡ್ ನಲ್ಲಿ ಜಾರಿಕೊಂಡು ಹೋಗುತ್ತಿದ್ದ. ರಸ್ತೆ ಮೇಲೆ ಬಿದ್ದ ಶ್ಯಾಂಪ್ರಸಾದ್ ಹಿಂದೆ ತಿರುಗಿ ನೋಡಿದರೆ ಶಾಕ್ ಒಂದು ದೊಡ್ಡ ಲಾರಿ ಶಾಮ್ ಪ್ರಸಾದ್ ತಲೆ ಮೇಲೆ ಬರುತ್ತಿತ್ತು. ಲಾರಿ ನೋಡಿದ ಆತ ನಾನು ಬದುಕಲ್ಲ ಎಂದು ಅರ್ಥಮಾಡಿಕೊಂಡು. ಕೂಡಲೆ ಹನುಮಂತನ ನೆನಪು ಮಾಡಿಕೊಂಡು ನನ್ನನ್ನು ಕಾಪಾಡು ಎಂದು ಮನಸ್ಸಿನಲ್ಲಿ ಪ್ರಾರ್ಥಿಸಿಕೊಂಡ ಕೂಡಲೇ ಚಮತ್ಕಾರ ನಡೆದುಹೋಯಿತು.