ಕೊರೋನ ಅಂತ್ಯ ಯಾವಾಗ ಬಾಲ ಜ್ಯೋತಿಷಿ ಸ್ಪೋಟಕ ಭವಿಷ್ಯ ನಿಜ್ವಾಗ್ಲೂ ಅಚ್ಚರಿಯಾದ್ರು ಏನು ... » Karnataka's Best News Portal

ಕೊರೋನ ಅಂತ್ಯ ಯಾವಾಗ ಬಾಲ ಜ್ಯೋತಿಷಿ ಸ್ಪೋಟಕ ಭವಿಷ್ಯ ನಿಜ್ವಾಗ್ಲೂ ಅಚ್ಚರಿಯಾದ್ರು ಏನು …

ಕೊರೋನ ಎಂಬ ಮಹಾಮಾರಿ ಪ್ರಪಂಚದಾದ್ಯಂತ ಹರಡಿದ್ದು ಪ್ರತಿದಿನ ಸಾವಿರಾರು ಜನ ಸಾವಿಗೆ ಗುರಿ ಆಗುತ್ತಿದ್ದಾರೆ. ಬಾಲ ಜ್ಯೋತಿಷಿ ಅಭಿಘ್ಯ ಆನಂದ್ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ವೈರಸ್ ಬರುವ ಬಗ್ಗೆ ಇಡೀ ವಿಶ್ವಕ್ಕೆ ಸೂಚನೆ ನೀಡಿದ್ದರು. ಆಗ ಯಾರು ಅಭಿಘ್ಯ ಮಾತುಗಳನ್ನು ನಂಬಿರಲಿಲ್ಲ, ಆದರೆ ಆರು ತಿಂಗಳುಗಳ ಬಳಿಕ ಅಭಿಘ್ಯ ಹೇಳಿದ ಭವಿಷ್ಯ ನಿಜವಾಯಿತು. ಇಡೀ ಪ್ರಪಂಚಕ್ಕೆ ಕೊರೋನ ವೈರಸ್ ಹರಡಿದೆ ಈ ಕೊರೋನ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ನಮ್ಮ ಕೇಂದ್ರ ಸರ್ಕಾರವು ಭಾರತದಾದ್ಯಂತ ಲಾಕ್ ಡೌನ್ ಜಾರಿಗೆ ತಂದಿದೆ. ಇದೆ ಏಪ್ರಿಲ್ 14ರಂದು ಲಾಕ್ ಡೌನ್ ಅಂತ್ಯವಾಗಿ ಹಿಂದಿನಂತೆ ನಾರ್ಮಲ್ ಆಗುತ್ತೆ ಎಂದು ದೇಶದ ಜನ ಭಾವಿಸಿದ್ದರು. ಆದರೆ ಮೋದಿಜಿ ಅವರು ಮತ್ತೊಮ್ಮೆ ಮೇ ತಿಂಗಳು ಲಾಕ್ ಡೌನ್ ವಿಸ್ತರಣೆ ಮಾಡಿದ ಕಾರಣ ಪೊಲೀಸ್ ಮತ್ತು ವೈದ್ಯರು ಇದರ ವಿರುದ್ಧವಾಗಿ ಹೋರಾಟ ಮಾಡಿದರು.


ಅಬ್ಬಬ್ಬಾ ಈ ಲಾಕ್ ಡೌನ್ ಯಾವಾಗ ಮುಗಿಯುತ್ತೆ ಕೊರೋನ ವೈರಸ್ ಯಾವಾಗ ಅಂತ್ಯ ಆಗುತ್ತೆ. ಎಂದು ಬೇಡಿಕೊಳ್ಳುತ್ತಿದ್ದಾರೆ, ಇಂತಹ ಸಮಯದಲ್ಲಿ ಖ್ಯಾತ ಬಾಲ ಜ್ಯೋತಿಷಿ ಅಭಿಘ್ಯ ಆನಂದ್ ಅವರು ಈ ಕೊರೋನ ಅಂತ್ಯ ಯಾವಾಗ ಎಂಬುದರ ಬಗ್ಗೆ ಸ್ಪೋಟಕ ಭವಿಷ್ಯ ಹೇಳಿದ್ದಾರೆ. ಮೇ 29ರ ನಂತರ ವೈರಸ್ ಹರಡುವುದು ಕಡಿಮೆಯಾಗುತ್ತೆ, ಆದರೆ ಅದು ಕೇವಲ ಎರಡು ದಿನಗಳಿಗೆ ಮಾತ್ರವಂತೆ. ಇವರ ಪ್ರಕಾರ ಜೂನ್ ತಿಂಗಳಿಂದ ಈ ವೈರಸ್ ಹರಡುವಿಕೆ ಕಡಿಮೆಯಾಗುತ್ತೆ. ಅನಂತರ ಜುಲೈ ಮೊದಲನೆಯ ವಾರದಿಂದ ಇಳಿಮುಖ ಕಾಣುತ್ತೆ. ಜುಲೈ ತಿಂಗಳಲ್ಲಿ ಒಂದು ಹೊಸ ಜೀವನ ಆರಂಭವಾಗಿ ಎಲ್ಲರೂ ತಮ್ಮ ಕೆಲಸಗಳಿಗೆ ಮರಳುತ್ತಾರೆ. ಡಿಸೆಂಬರಿನಲ್ಲಿ ರೋಗಕ್ಕೆ ಔಷಧಿ ಕಂಡುಹಿಡಿಯುವ ಸಾದ್ಯತೆ ಇದೆ.

WhatsApp Group Join Now
Telegram Group Join Now


crossorigin="anonymous">