ಈ ಭೂಮಿ ಮೇಲೆ ನಡೆಯುವ ಕೆಲವು ವಿಚಿತ್ರ ಘಟನೆಗಳನ್ನು ನಂಬಬೇಕೋ ಬೇಡವೋ ಎಂಬುದು ಅರ್ಥವಾಗುವುದಿಲ್ಲ ಆದರೂ ಅವು ಸತ್ಯ ಘಟನೆಗಳು ಆಗಿರುತ್ತದೆ ಎಂಬುದೇ ಆಶ್ಚರ್ಯಕರ ವಿಷಯ. ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ವರ್ಷದ ಹಿಂದೆ ಒಂದು ಘಟನೆ ನಡೆದಿದೆ ಚಿತ್ತೂರಿನ ಗ್ರಾಮವೊಂದರಲ್ಲಿ ಹಳ್ಳಿಯ ಜನರು ಕುಡಿಯುವ ನೀರಿನ ಬಾವಿ ಒಂದಿತ್ತು ಈ ಬಾವಿಯ ನೀರನ್ನು ಆ ಊರಿನ ಗ್ರಾಮಸ್ಥರು ಕುಡಿಯಲು ಮತ್ತು ಅಡುಗೆ ಮಾಡಲು ಬಳಸುತ್ತಿದ್ದರು. ಒಂದು ದಿನ ಆ ಬಾವಿಯಲ್ಲಿ ನೀರು ಸೆದಳು ಮಹಿಳೆಯೊಬ್ಬಳು ಬಾವಿಯೊಳಗೆ ಅಗ್ಗದ ಜೊತೆಗೆ ಬಿಂದಿಗೆಯನ್ನು ಹಾಕಿದಳು ಬಿಂದಿಗೆ ಹಾಕಿ ಬಾವಿಯೊಳಗೆ ಬಗ್ಗಿ ನೋಡಿದ ಮಹಿಳೆಗೆ ಶಾಕ್ ಆಗುತ್ತದೆ. ಆ ಬಾವಿಯೊಳಗೆ ನಾಗರಹಾವು ಒಂದು ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿತ್ತು ನಾಗರ ಹಾವು ಬಾವಿಯ ಒಳಗೆ ಬಿದ್ದಿರುವುದನ್ನು ನೋಡಿದ ಮಹಿಳೆ.
ಹಾವು, ಹಾವು ಎಂದು ಜೋರಾಗಿ ಕಿರಚಾಡಿದಳು. ಆ ಮಹಿಳೆ ಕಿರುಚಾಡಿದ ಶಬ್ಧವನ್ನು ಕೇಳಿದ ಅಕ್ಕ ಪಕ್ಕದ ಜನರು ಓಡಿ ಬಂದರು ಏನಾಯಿತು ಎಂದು ನೋಡಿದಾಗ ಪಾಪ ನಾಗರ ಹಾವು ಬಾವಿಗೆ ಬಿದ್ದು ಸಾವು ಬದುಕಿನ ನಡುವೆ ನರಳಾಡುತ್ತ ಇತ್ತು. ಅಲ್ಲಿದ ಜನರುಗಳು ಹಾವು ವಿಲ ವಿಲನೆ ಒದ್ದಾಡುತ್ತಿರುವುದನ್ನು ಮೇಲೆ ನಿಂತುಕೊಂಡು ಸುಮ್ಮನೆ ನೋಡುತ್ತಿದ್ದರೆ ಹೊರತು ಆ ಹಾವನ್ನು ಹೇಗಾದರೂ ಮಾಡಿ ಕಾಪಾಡಬೇಕು ಎಂದು ಅಲೋಚನೆ ಮಾಡಲಿಲ್ಲ. ಆದರೆ ಅದೇ ಗ್ರಾಮಕ್ಕೆ ಸೇರಿದ ನರಸಿಂಹ ಎಂಬ ವ್ಯಕ್ತಿಯು ದಿಡೀರನೆ ಬಾವಿಯೊಳಗೆ ಬಿದ್ದು ಆ ಹಾವನು ರಕ್ಷಿಸಬೇಕು ಎಂದು ಪ್ರಯತ್ನ ಪಟ್ಟ ಆದರೆ ಮೇಲೆ ನಿಂತಿದ್ದುಂತಹ ಜನರು ಬೇಡ ನರಸಿಂಹ ಹಾವನ್ನು ಕಾಪಾಡಲು ಹೋಗಬೇಡ ಎಂದು ಎಲ್ಲರೂ ಕರೆದುಕೊಳ್ಳುತ್ತಾರೆ.