ಮನುಷ್ಯರು ಅತಿಯಾಗಿ ಭಯಪಡುವ ಪ್ರಾಣಿಗಳಲ್ಲಿ ಹಾವುಗಳಿಗೆ ಪ್ರಾಮುಖ ಸ್ಥಾನವಿದೆಹ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಎಷ್ಟೋ ಜನ ಬೆಚ್ಚಿ ಬೀಳುತ್ತಾರೆ. ಜನಗಳಿಗೆ ಹಾವುಗಳ ಮೇಲೆ ಎಷ್ಟು ಭಯವಿದೆ ಅಷ್ಟೇ ಭಕ್ತಿ ಕೂಡ ಇದೆ. ಅದರಲ್ಲಿ ನಾಗರಹಾವನ್ನು ದೇವರು ಎಂದು ಎಷ್ಟೋ ಜನ ಭಾವಿಸುತ್ತಾರೆ ನಾಗರ ಹಾವುಗಳಿಗಾಗಿ ಪ್ರತಿವರ್ಷ ನಾಗರ ಪಂಚಮಿಯಂದು ಹುತ್ತಕ್ಕೆ ಹಾಲನ್ನು ಕೂಡ ಹಾಕುತ್ತಾರೆ. ಅಂದುದು ನಾಗರ ಪಂಚಮಿ ದಿನ ಪ್ರತಿವರ್ಷದಂತೆ ಈ ವರ್ಷವೂ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಗ್ರಾಮವೊಂದರಲ್ಲಿ ಹಿಂದಿನಂತೆ ಹುತ್ತಕ್ಕೆ ಎಲ್ಲರ ಜನಗಳು ಬಂದು ಹಾಲು ಎರೆಯುತ್ತಿದ್ದರು. ಅದೇ ರೀತಿಯಲ್ಲಿ ವರ್ಷದ ಹಿಂದೆ ಮದುವೆಯಾಗಿದ್ದ ಆರು ತಿಂಗಳ ಗರ್ಭಿಣಿಯಾಗಿರುವ ಜ್ಯೋತಿ ಕೂಡ ಹುತ್ತಕ್ಕೆ ಹಾಲು ಹಾಕಲು ಬರುತ್ತಾಳೆ.
ಜ್ಯೋತಿ ಹಳ್ಳಿಗೆ ಮದುವೆಯಾಗಿ ಬಂದಿದ್ದರೂ ಕೂಡ ತುಂಬಾ ಧೈರ್ಯ ಇರುವ ಮಹಿಳೆಯಾಗಿದ್ದಳು ಜ್ಯೋತಿ ವಿದ್ಯಾವಂತ ಕೂಡ ಆಗಿದ್ದಳು, ಆದ್ದರಿಂದ ಈ ರೀತಿ ಹಾವಿಗೆ ಹಾಲು ಎರೆಯುವುದು ಮೂಢ ನಂಬಿಕೆಗಳನ್ನು ನಂಬುತ್ತಿರಲಿಲ್ಲ. ಆದರೆ ಮನೆಯ ಹಿರಿಯರು ಹೊಸದಾಗಿ ಮದುವೆ ಆಗಿರುವವರು ನಾಗರ ಪಂಚಮಿಯ ದಿನ ಹುತ್ತಕ್ಕೆ ಹಾಲು ಹಾಕುವುದರಿಂದ ತುಂಬಾ ಒಳ್ಳೆಯದಾಗುತ್ತದೆ, ಎಂದು ಹೇಳಿ ಬಲವಂತಮಾಡಿ ಹುತ್ತಕ್ಕೆ ಹಾಲು ಹಾಕುವಂತೆ ಜ್ಯೋತಿಯನ್ನು ಕಳುಹಿಸಿದ್ದರು. ಆ ಹುತ್ತ ಇದ್ದಿದ್ದು ಒಂದು ಹೊಲದಲ್ಲಿ ಜ್ಯೋತಿ ಮತ್ತು ಸ್ನೇಹಿತರು ಹುತ್ತದ ಹತ್ತಿರ ಬಂದು ಹಾಲು ಹಾಕುವಷ್ಟರಲ್ಲಿ ಹುತ್ತದ ಒಳಗಂದ ಸುಮಾರು ಏಳು ಅಡಿ ಉದ್ದದ ನಾಗರಹಾವು ಮೇಲೆ ಎದ್ದು ಬಿಟ್ಟಿತ್ತು ಕೋಪದಿಂದ. ನಾಗರಹಾವನ್ನು ನೋಡಿದ ಮಹಿಳೆಯರು ಜೋರಾಗಿ ಹಾವು ಎಂದು ಕಿರುಚಿ ಹೋಗಲು ಪ್ರಾರಂಭಿಸಿದರು.