ಮಹಾನಾಯಕ ಧಾರವಾಹಿ ನಿಲ್ಲಿಸಿ ಅಂತ ಕರೆ ಮಾಡಿದ್ದು ಯಾರು ಗೊತ್ತಾ...ಯಶ್ ಕೊಟ್ಟ ತಿರುಗೇಟಿಗೆ ಎಲ್ಲರೂ ಶಾಕ್..! » Karnataka's Best News Portal

ಮಹಾನಾಯಕ ಧಾರವಾಹಿ ನಿಲ್ಲಿಸಿ ಅಂತ ಕರೆ ಮಾಡಿದ್ದು ಯಾರು ಗೊತ್ತಾ…ಯಶ್ ಕೊಟ್ಟ ತಿರುಗೇಟಿಗೆ ಎಲ್ಲರೂ ಶಾಕ್..!

ನಮಸ್ತೆ ಗೆಳೆಯರೇ ಕನ್ನಡ ಕಿರುತೆರೆಯಲ್ಲಿ ಸದ್ಯ ಮನರಂಜನೆಯ ಧಾರಾವಾಹಿಗಳ ಜೊತೆಗೆ ಪೌರಾಣಿಕ ಧಾರಾವಾಹಿಗಳ ಮೃಷ್ಟಾನ್ನ ಭೋಜನ ದಂತೆ ಸಿಗುತ್ತಲಿದೆ. ಇದೆಲ್ಲದರ ಜೊತೆಗೆ ಕನ್ನಡ ಕಿರುತೆರೆ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದದ್ದು ಮಹಾನಾಯಕ ಅಂಬೇಡ್ಕರ್ ಧಾರಾವಾಹಿ ಹೌದು ದೇಶ ಕಂಡ ಅಪ್ರತಿಮ ನಾಯಕನ ಜೀವನಚರಿತ್ರೆಯನ್ನು ಅದಾಗಲೇ ಹಿಂದಿ ಭಾಷೆಯಲ್ಲಿ ಅದ್ಭುತವಾಗಿ ತೆರೆ ಮೇಲೆ ತರಲಾಗಿದೆ ಹಾಗೂ ಇದು ಕನ್ನಡಕ್ಕೆ ಡಬ್ ಆಗಿದ್ದಕ್ಕೆ ಕಾರಣವೂ ಇದೆಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಆಯಿತು ಕಿರುತೆರೆ ಇಂಡಸ್ಟ್ರಿ ಸ್ತಬ್ಧವಾಯಿತು ಯಾವುದೇ ಸಮಯದಲ್ಲಿ ಶೋಟಿಂಗ್ ಇಲ್ಲ್ದ ಕಾರಣ ಕನ್ನಡ ಕಿರುತೆರೆ ವಾಹಿನಿಗಳಿ ಡಬ್ಬಿಂಗ್ ಧಾರಾವಾಹಿಗಳ ಮೊರೆ ಹೋದವು‌ ಆ ಸಮಯದಲ್ಲಿ ಜೀ ವಾಹಿನಿಯ ಬ್ಯುಸಿನೆಸ್ ಹೆಡ್ ಆದ ರಾಘವೇಂದ್ರ ಹುಣಸೂರು ಅವರು ಮಹಾನಾಯಕ ಧಾರಾವಾಹಿಯನ್ನು ಕನ್ನಡಕ್ಕೆ ತರಬೇಕೆಂದು ಆಸೆ ಪಟ್ಟರು ಅದಕ್ಕೆ ತಕ್ಕಂತೆ ಅವರ ಪ್ರಯತ್ನದಿಂದ ಕನ್ಮಡಕ್ಕೆ ಅದ್ಭುತವಾಗಿ ಡಬ್ ಕೂಡ ಆಯಿತು ಪಾತ್ರಧಾರಿಗಳೆಲ್ಲಾ ನಮ್ಮವರೇ ಎನಿಸುವಷ್ಟು ಚಂದವಾಗಿ ಧ್ವನಿ ನೀಡಲಾಗಿತ್ತುಆದರೆ ಧಾರಾವಾಹಿ ತನ್ಮ ಪ್ರಸಾರವನ್ನು ಸಹ ಆರಂಭಿಸಿತು ಯಾರೂ ಊಹಿಸದ ದಾಖಲೆಯ ರೇಟಿಂಗ್ ಪಡೆದು ಮಹಾನಾಯಕ ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಎಲ್ ಇ ಡಿ ಪರದೆಯಲ್ಲಿ ಬಹಳಷ್ಟು ಹಳ್ಳಿಗಳಲ್ಲಿ ಮಹಾನಾಯಕ ಧಾರಾವಾಹಿಯನ್ನು ಜನರು ನೋಡಿದರುಇನ್ನು ಧಾರಾವಾಹಿ ಯಶಸ್ಸು ಕಾಣುತ್ತಿದ್ದಂತೆ ಮೂಲೆಮೂಲೆಗೂ ತಲುಪಿತು ಬಹಳಷ್ಟು ಪ್ರಖ್ಯಾತಿ ಪಡೆಯಿತು ಇಂತಹ ಸಮಯದಲ್ಲಿ ರಾಘವೇಂದ್ರ ಹುಣಸೂರು ಅವರಿಗೆ ಕೆಲ ದಿನಗಳು ಮಧ್ಯ ರಾತ್ರಿಯ ಸಮಯದಲ್ಲಿ ಧಾರಾವಾಹಿ ಪ್ರಸಾರ ಮಾಡದಂತೆ ಮೊಬೈಲ್ ಕರೆಗಳು ಬಂದವು ಆದರೆ ಯಾವುದಕ್ಕೂ ಜಗ್ಗದ ರಾಘವೇಂದ್ರ ಹುಣಸೂರು ಅವರು ಬಹಿರಂಗವಾಗಿಯೇ ಈ ವಿಚಾರವನ್ನು ಪೋಸ್ಟ್ ಮಾಡಿದರು


ಈ ಧಾರಾವಾಹಿಯಿಂದ ಸಮಾಜದಲ್ಲಿ ಜನರ ಮೇಲೆ ಪರಿಣಾಮ ಬೀರುತ್ತದೆ ಎನ್ನುವವರು ಮೊದಲು ಹೋಗಿ ಆಸ್ಪತ್ರೆಗೆ ತೋರಿಸಿಕೊಳ್ಳಿ ನಿಮ್ಮ ರೋಗ ಆದಷ್ಟು ಬೇಗ ಗುಣವಾಗಲಿ ಮಹಾನಾಯಕ ನನ್ನ ವ್ಯಯಕ್ತಿಕ ಪ್ರೀತಿಯೂ ಹೌದು‌ ಈ ಧಾರಾವಾಹಿಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದರು ತಿಳಿಸಿದ್ದರುಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ರಾಘವೇಂದ್ರ ಹುಣಸೂರು ಅವರಿಗೆ ಕನ್ನಡದ ಸೂಪರ್ ಸ್ಟಾರ್ ಒಬ್ಬರು ಫೋನ್ ಮಾಡಿದರು ಚಿನ್ನಾ ನೀನ್ ಏನೂ ತಲೆ ಕೆಡ್ಸ್ಕೋಬೇಡ ಅದೇನಾಗುತ್ತೋ ಆಗ್ಲಿ ನೋಡೇ ಬಿಡೋಣ. ನಾನ್ ನಿನ್ನ ಜೊತೆ ಇರ್ತೀನಿ ಧಾರಾವಾಹಿ ಪ್ರಸಾರ ಮಾಡು ಎಂದು ರಾಘವೇಂದ್ರ ಹುಣಸೂರು ಅವರಿಗೆ ಧೈರ್ಯ ತುಂಬಿದರು. ಆ ನಟ ಮತ್ಯಾರೂ ಅಲ್ಲ ರಾಕಿಂಗ್ ಸ್ಟಾರ್ ಯಶ್ ರಾಘವೇಂದ್ರ ಹುಣಸೂರು ಅವರಿಗೆ ಈ ರೀತಿ ಫೋನ್ ಕಾಲ್ ಗಳು ಬಂದಿದೆ ಎಂಬ ವಿಚಾರ ತಿಳಿದ ಕೂಡಲೇ ಫೋನ್ ಮಾಡಿ ನಿನ್‌ ಜೊತೆ ನಾನಿರ್ತೀನಿ ನೋಡೇ ಬಿಡೋಣ ಧಾರಾವಾಹಿ ಪ್ರಸಾರ ಮಾಡು ಎಂದಿದ್ದರು.ಈ ವಿಚಾರವನ್ನು ಮೊನ್ನೆಯಷ್ಟೇ ನಡೆದ ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಾಘವೇಂದ್ರ ಹುಣಸೂರು ಅವರು ಹಂಚಿಕೊಣ್ಡರು ಅದೇ ಸಮಯದಲ್ಲಿ ಅತಿಥಿಯಾಗಿ ಆಗಮಿಸಿದ್ದ ಯಶ್ ಅವರು ಮಾತನಾಡಿ ಅಂತಹ ಮಹಾನ್ ನಾಯಕನ ಧಾರಾವಾಹಿಯನ್ನು ಪ್ರಸಾರ ಮಾಡಬೇಡಿ ಅಂತ ಹೇಳೋ ಮಾತಿಗೆ ಹೆದರಿ ಪ್ರಸಾರ ನಿಲ್ಲಿಸಿದರೆ ಆ ಮಹಾನ್ ವ್ಯಕ್ತಿಯ ಬದುಕಿಗೆ ಏನು ಅರ್ಥ ಇರುತ್ತದೆ ಅಂತಹ ಗೊಡ್ಡು ಬೆದರಿಕೆಗಳನ್ನು ಕಾಲ ಕೆಳಗೆ ಹಾಕಿ‌ ಮುಂದೆ ಹೋಗ್ತಾ ಇರ್ಬೇಕು ಎಂದು ಖಡಕ್ ಆಗಿ ನುಡಿದರು ನಿಜಕ್ಕೂ ಅಂದು ರಾಘವೇಂದ್ರ ಹುಣಸೂರು ಅವರಿಗೆ ಅದ್ಯಾರು ಫೋನ್ ಮಾಡಿದ್ದರೋ ಅವರಿಗೆ ಯಶ್ ಅವರು ವೇದಿಕೆ ಮೇಲೆಯೇ ಸರಿಯಾಗಿ ತಿರುಗೇಟು ನೀಡಿದರು. ನೋಡಿದ್ರಲ್ಲ ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ಅವರ ಹೃದಯ ಪೂರಕವಾದಂತಹ ಮಾತುಗಳನ್ನು ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">