ಪ್ರತಿಭೆ ಅನ್ನೋದು ಇದ್ರೆ ಯಾವುದೇ ಭಾಷೆಯಾಗಲಿ ಯಾವುದೇ ಊರಲ್ಲಿ ಅಲ್ಲಿ ಬದುಕಬಹುದು ಅನ್ನೋದಕ್ಕೆ ಕನ್ನಡದ ಪ್ರತಿಭಾನ್ವಿತ ನಟಿ ರೇಖಾದಾಸ್ ಉತ್ತಮ ಉದಾಹರಣೆ. ಕೆಲವರಿಗೆ ಗೊತ್ತಿಲ್ಲ ರೇಖಾದಾಸ್ ಅವರು ಮೂಲತಹ ನೇಪಾಳದವರು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದ ರೇಖದಸ್ ಅವರಿಗೆ ಬದುಕು ಕಟ್ಟಿಕೊಟ್ಟಿದ್ದು ಕನ್ನಡ ಸಿನಿಮಾರಂಗ. ಇದುವರೆಗೂ ಸುಮಾರು 300ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಆಗಿನ ಕಾಲದಲ್ಲಿ ಉಮಾಶ್ರೀ ನಂತರ ಅತಿ ಹೆಚ್ಚು ಖ್ಯಾತಿ ಹೊಂದಿದ್ದ ಕಾಮಿಡಿ ನಟಿ ಎಂದರೆ ಅದು ರೇಖಾದಾಸ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾಗ ನಟ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಒಂದು ಮಗು ಹುಟ್ಟಿದ ತಕ್ಷಣ ಡಿವರ್ಸ್ ಕೊಟ್ಟ ಓಂ ಪ್ರಕಾಶ್ ನಂತರ ರೇಖಾದಾಸ್ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.
ಅವರ ಕಷ್ಟ ಹೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ ನಟ ನಿರ್ದೇಶಕ ಓಂಪ್ರಕಾಶ್ ತುಂಬಾ ಕೋಪಿಷ್ಟ ಆಗಿದ್ದು ಡ್ರಿಂಕ್ಸ್ ಜೊತೆಗೆ ಸ್ಮೋಕರ್ ಕೂಡ ಆಗಿದ್ದರು. ಹೀಗಾಗಿ ರೇಖಾದಾಸ್ ಅವರನ್ನು ಪ್ರೀತಿಸಿ ಕೈಗೆ ಮಗು ಕೊಟ್ಟ ವೈಯಕ್ತಿಕ ಕಾರಣನೀಡಿ ಬಿಟ್ಟು ಹೋಗುತ್ತಾರೆ. ಇತ್ತ ಕಣ್ಣೀರು ಹಾಕುತ್ತಾ ಸಿಕ್ಕ ಸಣ್ಣಪುಟ್ಟ ಸಿನಿಮಾಗಳಲ್ಲಿ ನಟನೆ ಮಾಡಿ ಮಗಳನ್ನು ಓದಿಸಿ ಬೆಳೆಸಿ ದೊಡ್ಡವರನ್ನಾಗಿ ಮಾಡಿ ಇದೀಗ ಕಷ್ಟದ ಜೀವನವನ್ನು ಅನುಭವಿಸುತ್ತಿದ್ದಾರೆ. ರೇಕಾದಸ್ ಮತ್ತು ಓಂ ಪ್ರಕಾಶ್ ಗೆ ಹುಟ್ಟಿದ ಮಗಳೇ ಶ್ರಾವ್ಯ ಆಕೆ ಕೂಡ ಕೆಲವು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಆದರೆ ಪಾಪ ಯಾವ ಸಿನಿಮಾಗಳು ಇವರ ಕೈಹಿಡಿಯಲಿಲ್ಲ ಇತ್ತೀಚಿಗೆ ಒಂದು ಖಾಸಗಿ ವಾಹಿನಿಯಲ್ಲಿ ತಾವು ಅನುಭವಿಸಿದ ನರಕ ಯಾತನೆಯನ್ನು ಬಿಚ್ಚಿಟ್ಟು ಕಣ್ಣೀರು ಹಾಕಿದರು.