ಚಿರಂಜೀವಿ ಸರ್ಜಾ ಪುನರ್ ಆಗಮನದಿಂದ ಈಗ ಕುಟುಂಬಕ್ಕೆ ನೆಮ್ಮದಿ ಸಿಕ್ಕಿದೆ ಕುಟುಂಬದಲ್ಲಿ ಹೊಸ ಆರಂಭ ಸೃಷ್ಟಿಯಾಗಿದೆ. ಚಿರಂಜೀವಿ ಸರ್ಜಾ ಅಗಲಿದ ಸಮಯದಲ್ಲಿ ಸಾಕಷ್ಟು ನೋವು ಹಾಗೂ ಕಣ್ಣೀರು ಹಾಕಿದ ಅರ್ಜುನ್ ಸರ್ಜಾ ಅವರು ಈಗ ಪುಟ್ಟ ಚಿರುವನ್ನು ನೋಡಿ ಸಕ್ಕತ್ ಖುಷಿ ಪಟ್ಟಿದ್ದಾರೆ. ಮೇಘಾನ ಅವರಿಗೆ ಮಗುವಾದ ವಿಷಯ ಕೇಳಿ ಕ್ಷಣವೇ ಚೆನೈ ನಿಂದ ಓಡಿ ಬಂದಿದ್ದಾರೆ ಆಸ್ಪತ್ರೆಯಲ್ಲಿ ಮಗುವನ್ನು ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ. ಹಾಗೆ ಮಗುವಿಗೆ ಎರಡು ಉಡುಗೊರೆಯನ್ನು ಕೂಡ ಅರ್ಜುನ್ ಸರ್ಜಾ ಅವರು ಮಗುವಿಗೆ ನೀಡಿದ್ದಾರೆ. ಮೊದಲು ಮೇಘಾನ ಚಿರಂಜೀವಿ ಸರ್ಜಾ ಅವರ ಮನೆಯಲ್ಲಿ ಸೀಮಂತ ಶಾಸ್ತ್ರವನ್ನು ಮಾಡಿಸಿಕೊಂಡಿದ್ದರು ಆ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಅವರು ಶೂಟಿಂಗ್ ನಲ್ಲಿ ಬ್ಯುಸಿ
ಇದ್ದ ಕಾರಣ ಅಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಚಿರಂಜೀವಿ
ಸರ್ಜಾ ಅವರ ಹುಟ್ಟಿದ ದಿನ ಮಾಡಿದ ಸೀಮಾಂತ ಕಾರ್ಯಕ್ರಮಕ್ಕೆ ಅರ್ಜುನ್ ಸರ್ಜಾ ಹಾಜರಾಗಿದ್ದರು ವೆಲ್ ಕಮ್ ಚಿರು ಅಂತ ಹಾಡು ಹೇಳುವ ಮೂಲಕ ಆತನಿಗೆ ವಿಶ್ ಮಾಡಿದ್ದರು. ಹಾಗೆ ಎಲ್ಲರ ಆಸೆಯಂತೆ ಚಿರು ಈಗ ಮತ್ತೆ ಹುಟ್ಟಿ ಬಂದಿದ್ದಾನೆ ಮೂವತ್ತೈದು ವರ್ಷದ ಹಿಂದೆ ಚಿರಂಜೀವಿ ಸರ್ಜಾ ಹುಟ್ಟಿದಾಗ ಅರ್ಜುನ್ ಸರ್ಜಾ ಚೆನ್ನೈನಿಂದ ಮಗುವನ್ನು ನೋಡಲು ಓಡಿ ಬಂದಿದ್ದರಂತೆ ಅದೇ ರೀತಿ ಈಗ ಚಿರಂಜೀವಿ ಸರ್ಜಾ ಅವರ ಮಗುವನ್ನು ನೋಡಲು ಮತ್ತೆ ನಾನು ಚೆನ್ನೈನಿಂದ ಬೆಂಗಳೂರಿಗೆ ಓಡಿ ಬಂದಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.