ನಮ್ಮ ಮನೆಯಲ್ಲಿ ತಿಳಿಯದೊ, ತಿಳಿಯದೆಯೋ ಈ ಒಂದು ಕೆಲಸಗಳನ್ನು ಮಾಡುತ್ತಲೇ ಇರುತ್ತೇವೆ ಅದರಿಂದ ನಮ್ಮ ಮನೆಗೆ ದಾರಿದ್ರ್ಯ ಬರುತ್ತೆ ಬಡತನಕ್ಕೆ ಕಾರಣವಾಗುತ್ತದೆ. ಹಾಗಾದರೆ ಆ ತಪ್ಪುಗಳು ಯಾವುದೆಂದು ನಾವಿಲ್ಲಿ ತಿಳಿಸುತ್ತೇವೆ. ಮೊದಲನೆಯದಾಗಿ ನಾವು ಸಂಪಾದನೆ ಮಾಡಿದ್ದಕ್ಕಿಂತ ಹೆಚ್ಚು ಖರ್ಚು ಮಾಡುವುದು, ಬಹಳ ಮಂದಿ ಏನು ಮಾಡುತ್ತಾರೆ ಎಂದರೆ ಎಷ್ಟು ಹಣ ಬಂದರೂ ಕೂಡ ಖರ್ಚು ಮಾಡಿ ಇನ್ನುಸಾಲ ಮಾಡುವವರು ಕೂಡ ಇದ್ದಾರೆ. ನಿಮಗೆ ಕಷ್ಟಗಳು ಬಂದಾಗ ನಿಮ್ಮ ಸಹಾಯಕ್ಕೆ ಯಾರೂ ಬರುವುದಿಲ್ಲ ಇದರಿಂದ ಇನ್ನೂ ಸಾಕಷ್ಟು ಕಷ್ಟಗಳು ಎದುರಿಸಬೇಕಾಗುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಆದಾಯ ಎಷ್ಟು ಬರುತ್ತೆ ಅದರಲ್ಲಿ ಸ್ವಲ್ಪ ಹಣವನ್ನು ಉಳಿಸಿ ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತೆ.
ಎರಡನೆಯದಾಗಿ ಮನೆಯಲ್ಲಿ ಕಿತ್ತು ಹೋಗಿರುವ ಬಾಚಣಿಗೆಯನ್ನು ಉಪಯೋಗಿಸುವುದರಿಂದ ಕೂಡ ದಾರಿದ್ರ್ಯ, ಬಡತನ ಬರುತ್ತೆ ಎಂದು ಹೇಳಲಾಗುತ್ತದೆ. ಮೂರನೆಯದಾಗಿ ನಾವು ನಮ್ಮ ಮುಖವನ್ನು ಹಾಸಿಗೆಗೆ ಎದುರಾಗಿ ಮಲಗುವುದು ಇದು ಕೂಡ ದಾರಿ ಇದಕ್ಕೆ ಕಾರಣವಾಗಿ ನಿಮ್ಮ ಮನೆಯಲ್ಲಿ ನೆಗೆಟಿವಿಟಿ ಬರುತ್ತದೆ ಈ ರೀತಿ ಮಲಗುವವರಿಗೆ ಸೋಮಾರಿತನ ಬಂದೇ ಬರುತ್ತೆ. ನಾಲ್ಕನೇದಾಗಿ ನೀವು ಅನುಕೂಲವಾಗಿ ಇದ್ದರೂ ಕೂಡ ತುಂಬಾ ಜನ ಹರಿದಿರುವ ಬಟ್ಟೆಯನ್ನು ಹಾಕುತ್ತಾರೆ ಇದರಿಂದ ಕೂಡ ಸಾಕಷ್ಟು ದಾರಿದ್ರ್ಯ ಬರುತ್ತೆ ಅಂತ ಹೇಳಲಾಗುತ್ತೆ, ಹಾಗಾಗಿ ಹರಿದ ಬಟ್ಟೆಗಳನ್ನು ಹಾಕದಿದ್ದರೆ ಒಳ್ಳೆಯದು. ಐದನೆಯದಾಗಿ ಯಾರಿಗಾದರೂ ಜುಟ್ಟು ಕಟ್ಟಬೇಕಾದರೆ ನಿಂತು ಕಟ್ಟಬಾರದು ವಿಶೇಷವಾಗಿ ತಾಯಂದಿರು ಮಕ್ಕಳಿಗೆ ಜುಟ್ಟು ಕಟ್ಟುವಾಗ ನಿಂತು ಕಟ್ಟಬಾರದು. ಕುಳಿತುಕೊಂಡು ಇಂತಹ ಕೆಲಸವನ್ನು ಮಾಡಬೇಕು.