ಮೇಘನಾ ಹಾಗು ಚಿರು ಮಗುವಿನ ಆಗಮದ ನಂತರ ಮತ್ತೊಂದು ಸಿಹಿ ಸುದ್ದಿ ಕೊಟ್ಟ ಧ್ರುವ ಹಾಗು ಪ್ರೇರಣಾ... » Karnataka's Best News Portal

ಮೇಘನಾ ಹಾಗು ಚಿರು ಮಗುವಿನ ಆಗಮದ ನಂತರ ಮತ್ತೊಂದು ಸಿಹಿ ಸುದ್ದಿ ಕೊಟ್ಟ ಧ್ರುವ ಹಾಗು ಪ್ರೇರಣಾ…

ಚಿರು  ಸಾವನ್ನಪಿದ ನಂತರ ದ್ರುವ ಸರ್ಜಾ ಜೀವನದಲ್ಲಿ ನಗುವು ಮಾಯವೇ ಆಗಿತ್ತು ಆದರೆ ಚಿರು ಮಗುವಿನ ಆಗಮನದಿಂದ ಖುಷಿಯಲ್ಲಿರುವ ಸರ್ಜಾ ಕುಟುಂಬ ಇದೀಗ ಹೊಸದೊಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು ಕಳೆದ 5 ತಿಂಗಳಿಂದ ಸರ್ಜಾ ಕುಟುಂಬದಲ್ಲಿ ಮತ್ತು ಮೇಘನಾ ರಾಜ್ ಅವರ ಕುಟುಂಬದಲ್ಲಿ ಯಾವುದೇ ಸಂತೋಷ ಇರಲಿಲ್ಲ ಯಾವುದೇ ಶುಭ ಸಮಾರಂಭಗಳು ಇರಲಿಲ್ಲ. ಹಾಗು ದ್ರುವ ರವರು ಸಿನಿಮಾದಿಂದ ದೂರ ಉಳಿದಿದ್ದರು ಎಂದೆ ಹೇಳಬಹುದು. ಎಲ್ಲರೂ ಅಂದುಕೊಂಡಂತೆ ಅಕ್ಟೋಬರ್ 22 ರಂದು ಜೂನಿಯರ್ ಚಿರುವಿನ ಆಗಮನ ಆಗಿದೆ ಎರಡು ಕುಟುಂಬಗಳಲ್ಲಿ ಹೊಸ ಚೇತನ ಮೂಡಿದೆ ಇದೆಲ್ಲದರ ನಡುವೆ ದ್ರುವ ಸರ್ಜಾ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಹಾಗಾದರೆ ದ್ರುವ ಸರ್ಜಾ ಹಂಚಿಕೊಂಡಿರುವ ಹೊಸ ಸುದ್ದಿ ಏನು,

ಅಣ್ಣನ ಮಗು ಮನೆಗೆ ಬರುತ್ತಿದ್ದಂತೆ ತಮ್ಮ ಎಲ್ಲಾ ಹೊಸ ಪ್ರಾಜೆಕ್ಟ್ ಗಳ ವಿಷಯಗಳನ್ನು ತಿಳಿಸಿದ್ದಾರೆ. ದಿನಗಳ ಹಿಂದೆಯಷ್ಟೇ ದೇವಸ್ಥಾನದಲ್ಲಿ ದ್ರುವ ಸರ್ಜಾ ಅವರು ದುಬಾರಿ ಚಿತ್ರದ ಮುಹೂರ್ತವನ್ನು ನೆರವೇರಿಸಿದರು ಪೊಗರು ಸಿನಿಮಾದ ನಿರ್ದೇಶಕ ನಂದ ಕಿಶೋರ್ ಅವರು ನಿರ್ದೇಶಿಸುತ್ತಿರುವ ಹೊಸ ಸಿನಿಮಾ ದುಬಾರಿ ಸಿನಿಮಾ ತಯಾರಾಗುತ್ತಿದೆ. ಸದ್ಯದಲ್ಲೇ ಘರ್ಜಿಸಲು ಬರುತ್ತಿದ್ದೇನೆ ಎಂದು ಹೊಸ ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳ ಮಹಾ ಪೂರವೇ ಹರಿದುಬರುತ್ತಿದೆ ಜೊತೆಗೆ ದೊಡ್ಡ ಯಶಸ್ಸು ಕಾಣಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಚಿರಂಜೀವಿ ಸರ್ಜಾ ಸಾವನಪ್ಪಿದ ದಿನದಿಂದ ದುಃಖದಲ್ಲಿದ್ದ ಕುಟುಂಬಕ್ಕೆ ಈಗ ತಕ್ಕಮಟ್ಟಿಗೆ ಖುಷಿಯ ದಿನಗಳು ಬರತೊಡಗಿದೆ.

WhatsApp Group Join Now
Telegram Group Join Now
[irp]


crossorigin="anonymous">