ಜ್ಞಾನ ಚಂದ್ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕುತ್ತಾನೆ ಸೋಶಿಯಲ್ ಮೀಡಿಯಾದಲ್ಲಿ ತನಗೆ ಜೀವನದಲ್ಲಿ ಹನುಮಂತನು ಮಾಡಿದ ಸಹಾಯವನ್ನು ವಿವರಿಸುತ್ತಾನೆ. ಆತನಿಗೆ ಹನುಮಂತನ ಮೇಲೆ ಅಪಾರವಾದ ಭಕ್ತಿ ಇರುತ್ತದೆ ಒಂದು ದಿನ ಆತನ ಪಕ್ಕದ ಊರಿನಲ್ಲಿ ಹನುಮಂತನ ಪೂಜೆ ನಡೆಯುತ್ತ ಇರುತ್ತದೆ. ಆಗ ಆತ ಅಲ್ಲಿ ನಿರೀಕ್ಷಿಸದೆ ಪೂಜೆಗೆ ಎಂದು ಹೋಗುತ್ತಾನೆ ಪೂಜೆ ನಡೆದ ಮೇಲೆ ಅಲ್ಲೆ ಇರುತ್ತನೆ ಅದು ಆತನ ಸ್ವಂತ ಊರು ಅಲ್ಲ. ಆದರೆ ತನ್ನ ಊರಿನಿಂದ ಸ್ವಲ್ಪ ದೂರವಿರುವ ಪ್ರದೇಶದಲ್ಲಿ ಇರುವ ಊರು ಆಗಿದೆ. ಆತ ಅಲ್ಲಿ ಹನುಮಂತನ ಪೂಜೆಯಲ್ಲಿ ತಲ್ಲೀನನಾಗಿ ಪೂಜೆ ಮುಗಿದ ನಂತರ ನೀಡಿದ ಪ್ರಸಾದ ಮತ್ತು ಭೋಜನವನ್ನು ಸ್ವೀಕರಿಸಿ ತನ್ನ ಸೈಕಲ್ ಮೂಲಕ ಅಲ್ಲಿಂದ ತೆರಳುತ್ತಾನೆ. ಆದರೆ ಅಲ್ಲಿಯ ತನಕ ಆತ ಅಂದುಕೊಳ್ಳದ ಒಂದು ಘಟನೆ ಸಂಭವಿಸುತ್ತದೆ ಹೌದು ಆತ ಊರಿಗೆ ವಾಪಸ್ಸಾಗುವ ವೇಳೆಗೆ ಸಂಜೆಯಾಗಿತ್ತು.ಅದು ಮಳೆಗಾಲ ಅದರಿಂದ ಹೆಚ್ಚು ಮಳೆ ಕೂಡ ಬೀಳುತ್ತಿತ್ತು ಅದು ಮಣ್ಣಿನ ರಸ್ತೆ ಆಗಿದ್ದರಿಂದ ರೋಡ್ ಎಲ್ಲಾ ಹಾಳಾಗಿತ್ತು. ಆದರೂ ಆ ರೋಡ್ ಮೇಲೆ ನಿಧನವಾಗಿ ಸೈಕಲ್ ನಲ್ಲಿ ಬರುವಾಗ ಕಾಲುಜಾರಿ ಸೈಕಲ್ ನಿಂದ ಸ್ಲಿಪ್ ಆಗಿ ಒಂದು ನಿರ್ಜನ ಪ್ರದೇಶದಲ್ಲಿ ಬೀಳುತ್ತಾನ. ತಕ್ಷಣ ಅದರ ಪಕ್ಕದಲ್ಲಿದ್ದ ಒಂದು ಗಿಡವನ್ನು ಹಿಡಿದುಕೊಂಡು ಮೇಲೆ ಏಳಳು ಪ್ರಯತ್ನ ಪಡುತ್ತಾನೆ
ಆದರೂ ಮೇಲೆ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಇಲ್ಲಿಂದ ನಿಜವಾದ ಘಟನೆ ಬರುವುದು ಅದೇನೆಂದರೆ ಆತನ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳುತ್ತಾನೆ ನಮ್ಮನ್ನು ಇಲ್ಲಿ ರಕ್ಷಣೆ ಮಾಡುವವರು ಯಾರು ಇಲ್ಲ ನಾನು ಬದುಕಬೇಕು ಅಂದರೆ ಇನ್ನೂ ಆ ದೇವರ ಪೂಜೆಗೆ ಹೋಗಬೇಕು ಅಂದರೆ ಆ ದೇವರು ನಿನ್ನನ್ನು ಕಾಪಾಡಲಿ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ.ನಂತರ ಹನುಮಂತನನ್ನು ಜೋರಾಗಿ ಕರೆಯುತ್ತಾರೆ ನಂತರ ನೋಡಿದಾಗ ಅಲ್ಲಿ ಒಬ್ಬ ಸನ್ಯಾಸಿ ಬರುತ್ತಾನೆ. ಆತನ ಪರಿಸ್ಥಿತಿಯನ್ನು ನೋಡಿ ಈತನನ್ನು ರಕ್ಷಣೆ ಮಾಡಿ ಆತನ ಮನೆವರೆಗೂ ಕೂಡ ಕರೆದುಕೊಂಡು ಬರುತ್ತಾನೆ. ಸನ್ಯಾಸಿ ಆತನನ್ನೂ ರಕ್ಷಣೆ ಮಾಡಿದ್ದು ಒಂದು ಕಡೆಯಾದರೆ ತನ್ನ ಜೊತೆ ಮನೆಯ ವರೆಗೂ ಜೊತೆಯಲ್ಲಿ ಬಂದಿದ್ದ ಆಶ್ಚರ್ಯ. ಇದನ್ನು ಗಮನಿಸಿದ ವ್ಯಕ್ತಿ ಸತ್ಯವಾಗಿಯೂ ಇದು ಹನುಮಂತನ ಕೆಲಸ ಏಕೆಂದರೆ ಅಷ್ಟು ಕತ್ತಲಾದ ಸಮಯದಲ್ಲಿ ಜೋರು ಮಳೆ ಬರುವ ಸಂದರ್ಭದಲ್ಲಿ ಆ ನಿರ್ಜನ ಪ್ರದೇಶದಲ್ಲಿ ಈ ಸನ್ಯಾಸಿ ಏನು ಮಾಡುತ್ತಿದ್ದ. ಅಲ್ಲಿ ಬಂದು ನನ್ನನ್ನು ರಕ್ಷಣೆ ಮಾಡಿ ಮನೆಯವರೆಗೂ ಕರೆದುಕೊಂಡು ಬಂದಿದ್ದಾರೆ ಇದನ್ನು ಯೋಚನೆ ಮಾಡಿ ನೋಡಿದರೆ ಹನುಮಂತನು ಆ ಸನ್ಯಾಸಿಯ ವೇಷದಲ್ಲಿ ಬಂದು ನನ್ನನ್ನು ರಕ್ಷಣೆ ಮಾಡಿದ ಎಂದು ತುಂಬಾ ಸಂತೋಷ ಪಡುತ್ತಾನೆ. ನಂತರ ಪ್ರತಿ ದಿನವೂ ಕೂಡ ಇನ್ನು ಮುಂದೆ ನಾನು ಹನುಮಂತನಿಗೋಸ್ಕರ ಬದುಕುತ್ತೇನೆ ಎಂದು ಹನುಮನ ಭಕ್ತಿಯಲ್ಲಿ ಲೀನಾಗುತ್ತಾನೆ.