ಇತ್ತಿಗಷ್ಟೇ ವಿಜಯ ರಂಗ ರಾಜು ಅಂತ ಒಬ್ಬ ತೆಲುಗು ನಟ ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನೀವು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು ಈಗ ಈ ವಿಜಯ್ ರಂಗ ರಾಜು ಅವರ ವಿರುದ್ಧ ವಿಷ್ಣುವರ್ಧನ್ ಅಭಿಮಾನಿಗಳು ಆಗಿರಬಹುದು ಅಥವಾ ಕನ್ನಡ ಚಿತ್ರರಂಗದ ಅಭಿಮಾನಿಗಳು ಆಗಿರಬಹುದು ಯಾವ ರೀತಿ ತಿರುಗಿಬಿದ್ದಿದ್ದಾರೆ ಎಂಬುದನ್ನು ಕೂಡ ನೀವು ಸೋಷಿಯಲ್ ಮಿಡಿಯಾದಲ್ಲಿ ನೋಡಬಹುದು ಅದರ ಮೂಲಕ ತಮ್ಮ ಅಸಮಾಧಾನವನ್ನು ಹೊರಗೆ ಹಾಕುತ್ತಾರೆ ಅನ್ನುವುದನ್ನು ನೀವು ನೋಡಿರುತ್ತೀರಿ. ಆದರೆ ಈಗ ಕಿಚ್ಚ ಸುದೀಪ್ ಅವರು ತಮ್ಮ ಖಡಕ್ ಮಾತಿನಿಂದ ರಂಗರಾಜು ಅವರಿಗೆ ಖಡಕ್ ಮಾತಿನಿಂದ ಖಡಕ್ ವಾರ್ನಿಂಗ್ ನೀಡಿದ್ದಾರೆ ಅಷ್ಟಕ್ಕೂ ಕಿಚ್ಚ ಸುದೀಪ್ ಅವರು ನೀಡಿದ ಆ ವಾರ್ನಿಂಗ್ ಏನು ಎಂದು ತಿಳಿಯಲು ಒಂದು ಲೇಖಬ ಸಂಪೂರ್ಣವಾಗಿ ಓದಿ. ಡಾಕ್ಟರ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ವಿಜಯ ರಂಗರಾಜು ಅವರು ತುಂಬಾ ಕೆಟ್ಟದಾಗಿ ಮಾತನಾಡಿದ್ದರೆ.
ಇದು ನಿಜಕ್ಕೂ ತುಂಬಾ ಬೇಸರದ ವಿಷಯ ಇದರಿಂದಾಗಿ ಎಲ್ಲಾ ಅಭಿಮಾನಿಗಳು ತುಂಬಾ ದುಃಖ, ಬೇಜಾರು ಹಾಗೂ ಕೋಪಗೊಂಡಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಎಲ್ಲಾ ಕಲಾವಿದರನ್ನು ಪ್ರೀತಿಸುತ್ತಿದ್ದ ಗೌರವದಿಂದ ನೆಡೆಸಿಕೊಳ್ಳುತ್ತಿದ್ದರು ಎಷ್ಟೊ ಜನಕ್ಕೆ ಅವರ ಕಷ್ಟದ ಸಮಯದಲ್ಲಿ ಸಹಾಯ ಮಾಡಿದರೆ ಅಷ್ಟೇ ಅಲ್ಲದೆ ಈ ಸಹಾಯ ನಾನು ಮಾಡಿರುವುದಹ ಅಂತ ಯಾರಿಗೂ ಹೇಳಬೇಡಿ ದಯವಿಟ್ಟು ಅಂತ ಕೂಡ ಹೇಳಿಕೊಂಡಿದ್ದಾರೆ. ಅಂತಹ ವ್ಯಕ್ತಿಯ ಬಗ್ಗೆ ಇಂದು ರಂಗರಾಜು ಈ ರೀತಿಯಾಗಿ ಮಾತನಾಡಿದ್ದು ನಿಜಕ್ಕೂ ಬೇಸರದ ವಿಷಯ ರಂಗರಾಜು ಹೇಳಿಕೊಂಡಿದ್ದಾರೆ ಡಾಕ್ಟರ್ ವಿಷ್ಣುವರ್ಧನ್ ಅವರ ಕಾಲರ್ ಪಟ್ಟಿಯನ್ನು ನಾನು ಹಿಡಿದಿದ್ದೇನೆ ಅಂತ. ಅವರಿಗೆ ಅಷ್ಟು ಧೈರ್ಯ ಇದೆಯಾ.? ಇದ್ದಿದ್ದರೆ ಈ ವಿಚಾರವನ್ನು ಅವರು ವಿಷ್ಣುವರ್ಧನ್ ಅವರು ಬದುಕಿರುವಾಗಲೇ ಹೇಳಿಕೊಳ್ಳಬಹುದು ಆದರೆ ಈಗ ವಿಷ್ಣುವರ್ಧನ್ ಅವರು ನಮ್ಮನ್ನು ಶಾರೀರಿಕವಾಗಿ ಬಿಟ್ಟು 11 ವರ್ಷಗಳಾದ ಮೇಲೆ ಅಲ್ಲೆಲ್ಲೋ ಕುಳಿತುಕೊಂಡು ಈ ರೀತಿ ಹೇಳುತ್ತಿದ್ದಾರೆ ಎಂದರೆ ಅವರಿಗೆ ನಿಜವಾಗಿಯೂ ಧೈರ್ಯವಂತನಾ.