ಮಲಬದ್ಧತೆ ಹೇಳುವುದಕ್ಕೆ ಸಣ್ಣ ತೊಂದರೆ ಅಂತ ಹೇಳಬಹುದು ಆದರೆ ಇದರಿಂದ ನಮಗೆ ಗೊತ್ತಿಲ್ಲದೆ ಏನೇನೋ ತೊಂದರೆಗಳು ದೇಹದಲ್ಲಿ ಪ್ರಾರಂಭವಾಗುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಅದರಲ್ಲಿರುವ ಕಲ್ಮಶಗಳು ಆಗಿಂದಾಗೆ ಹೊರಗೆ ಹೋಗುತ್ತಿದ್ದಾರೆ ಮಾತ್ರ ನಮ್ಮ ದೇಹ ಸರಿಯಾಗಿ ಕೆಲಸ ಮಾಡುವುದಕ್ಕೆ ಸಾಧ್ಯ. ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಸರಿಯಾಗಿ ಹೊರಗೆ ಹೋಗುತ್ತಿಲ್ಲ ಅಂದರೆ ಅದನ್ನು ಮಲಬದ್ಧತೆ ಎಂದು ಕರೆಯುತ್ತೇವೆ. ನಮ್ಮ ಆಹಾರದಲ್ಲಿ ನಾರಿನ ಅಂಶವಿರುವ ಪದಾರ್ಥಗಳನ್ನು ಸೇವಿಸುವುದು ಬಹಳ ಮುಖ್ಯ ಹಾಗಾಗಿ ಸಬ್ಬಸಿಗೆ ಸೊಪ್ಪಿನಿಂದ ಚಟ್ನಿ ಮಾಡಿಕೊಂಡು ಸೇವಿಸಿದರೆ ಬಹಳನೇ ಒಳ್ಳೆಯದು. ಸಬ್ಬಸ್ಸಿಗೆ ಸೊಪ್ಪನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇವನೆ ಮಾಡಬಹುದು ಅಥವಾ ವಾರದಲ್ಲಿ ಒಮ್ಮೆಯಾದರೂ ನಮ್ಮ ಆಹಾರದಲ್ಲಿ ಬಳಸಿದರೆ ತುಂಬಾನೆ ಒಳ್ಳೆಯದು. ಮೊದಲಿಗೆ ಒಂದು ಪಾತ್ರೆಗೆ ನೀರು, ಅರಶಿನ, ಉಪ್ಪು, ಹಾಗೂ ಸಬ್ಬಸಿಗೆ ಸೊಪ್ಪು ಹಾಕಿ 15 ನಿಮಿಷ ನೆನೆಸಿ ನಂತರ ಇದನ್ನು ಮೂರರಿಂದ ನಾಲ್ಕು ಬಾರಿ ತೊಳೆದುಕೊಳ್ಳಿ.
ಒಂದು ಪ್ಯಾನ್ ಗೆ ಒಂದು ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿ ಒಂದು ಟೇಬಲ್ ಸ್ಪೂನ್ ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಅದನ್ನು ತೆಗೆದು ಇಡಿ. ನಂತರ ಅದೇ ಎಣ್ಣೆಗೆ ಸಬ್ಬಸಿಗೆ ಸೊಪ್ಪನ್ನು ಹಾಕಿ ಹಸಿವಾಸನೆ ಹೋಗುವ ತನಕ ಚೆನ್ನಾಗಿ ಫ್ರೈ ಮಾಡಿ ಇದು ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಸೊಪ್ಪನ್ನು ಹಾಕಿ ಅರ್ಧ ಕಪ್ ತೆಂಗಿನ ತುರಿ, ಮೂರರಿಂದ ನಾಲ್ಕು ಒಣಮೆಣಸಿನಕಾಯಿ, ಸ್ವಲ್ಪ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನುಣ್ಣಗೆ ಮಾಡಿಕೊಳ್ಳಿ. ನಂತರ ಫ್ರೈ ಮಾಡಿಕೊಂಡಿರುವ ಉದ್ದಿನಬೇಳೆಯನ್ನು ಹಾಕಿ ಅದನ್ನು ಗ್ರೌಂಡ್ ಮಾಡಿಕೊಂಡು ಒಂದು ಪ್ಯಾನ್ ಗೆ ಎಣ್ಣೆಯನ್ನು ಹಾಕಿ ಸಾಸಿವೆ, ಕರಿಬೇವಿನ ಸೊಪ್ಪು, ಉದ್ದಿನಬೇಳೆ, ಹಾಕಿ ಗ್ರೌಂಡ್ ಮಾಡಿಕೊಂಡಿರುವ ಮಿಶ್ರಣವನ್ನು ಹಾಕಿ ಫ್ರೈ ಮಾಡಿ ಅನ್ನದೊಂದಿಗೆ ಸವಿಯಿರಿ.