ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗಟ್ಟಿಮೇಳ ಧಾರಾವಾಹಿ ಎಂದರೆ ಎಲ್ಲರಿಗೂ ಕೂಡ ಅಚ್ಚು ಮೆಚ್ಚು. ಈ ಧಾರವಹಿಯಲ್ಲಿ ಬರುವಂತಹ ಅಮೂಲ್ಯ ವೇದಾಂತ ಪಾತ್ರ ಎಷ್ಟು ಪ್ರಮುಖ್ಯತೆಯನ್ನು ವಹಿಸಿಕೊಂಡಿದ್ದು ಅಷ್ಟೇ ಪ್ರಾಮುಖ್ಯತೆಯನ್ನು ವಿಕ್ಕಿ ಎಂಬ ಪಾತ್ರವು ಕೂಡ ಪಡೆದುಕೊಂಡಿದೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಎಲ್ಲಾ ಧಾರಾವಾಹಿಗಳಿಗಿಂತ ಅತಿ ಹೆಚ್ಚು ಟಿ.ಆರ್.ಪಿ ಯನ್ನು ಹೊಂದಿರುವ ಧಾರಾವಾಹಿ ಎಂದರೆ ಅದು ಗಟ್ಟಿಮೇಳ ಧಾರಾವಾಹಿ ಅಂತನೇ ಹೇಳಬಹುದು. ಏಕೆಂದರೆ ಕಳೆದ ಹತ್ತು ತಿಂಗಳಿನಿಂದಲೂ ಕೂಡ ಈ ಒಂದು ಧಾರವಾಹಿಗೆ ತುಂಬಾನೇ ಟಿ.ಆರ್.ಪಿ ಬಂದಿದೆ. ಇನ್ನೂ ಈ ಧಾರವಾಹಿಯಲ್ಲಿ ವಿಕ್ಕಿ ಎಂಬ ಪಾತ್ರದಲ್ಲಿ ನಟಿಸುತ್ತಿರುವ ಅಂತಹ ನಟನಿಗೆ ಒಂದು ಸುವರ್ಣ ಅವಕಾಶ ಬಂದಿದೆ ಅಂತ ಹೇಳಬಹುದು ಹೌದು ಯಾಕೆಂದರೆ ಅವರು ಈಗ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಈ ವಿಚಾರವನ್ನು ಕೇಳಿ ಕೆಲವು ಅಭಿಮಾನಿಗಳಿಗೆ ಅನುಮಾನ ಬಂದಿರ ಬಹುದು ಏಕೆಂದರೆ ಕಳೆದ ಬಾರಿ ಸಂದರ್ಶನವೊಂದರಲ್ಲಿ ಅವರು ಮಾತನಾಡುವಾಗ ನಾನು ಎಂದಿಗೂ ಕೂಡ ಪ್ರೀತಿ ಮಾಡುವುದಿಲ್ಲ ಅಂದಿದ್ದರು. ಈಗ ಇದೇನಪ್ಪ ಇದ್ದಕ್ಕಿದ್ದ ಹಾಗೆ ಪ್ರೀತಿಯಲ್ಲಿ ಬಿದಿದ್ದಾರೆ ಎಂಬ ವಿಚಾರವನ್ನು ಕೇಳಿ ನಿಮಗೆ ಆಶ್ಚರ್ಯವಾಗುವಾಗ ಬಹುದು ಹೌದು ಆದರೆ ಇದು ನಿಜವಲ್ಲ ಆದರೆ ಬದಲಿಗೆ ಒಂದು ಪ್ರೇಮ ಕಥೆಯಾಗಿದೆ. ಹೌದು ನಟ ವಿಕ್ಕಿ ಅಲಿಯಾಸ್ ಅಭಿಷೇಕ್ ಅವರಿಗೆ ಸಿನಿಮಾ ಒಂದರಲ್ಲಿ ಅಭಿನಯಿಸುವ ಅಂತಹ ಅವಕಾಶ ದೊರೆತಿದೆ. ಈ ಸಿನಿಮಾದಲ್ಲಿ ಅವರು ಪ್ರೇಮಿಯಾಗಿ ಕಾಣಿಸಿಕೊಂಡಿದ್ದರೆ ಪ್ರೇಮಕಥೆಯೊಂದಕ್ಕೆ ಶರಣ್ಯ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಈ ವಿಚಾರವನ್ನು ಸ್ವತಃ ವಿಕ್ಕಿ ಮತ್ತು ಶರಣ್ಯ ಅವರೇ ಹಂಚಿಕೊಂಡಿದ್ದಾರೆ. ಈ ಸಿನಿಮಾಗೆ ನಿಖರವಾದ ಹೆಸರನ್ನು ಇನ್ನೂ ಕೂಡ ಇಟ್ಟಿಲ್ಲ ಹಾಗಾಗಿ ಮುಂದಿನ ತಿಂಗಳು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.