ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯವಾದ ಸಿಂಗಿಂಗ್ ಶೋ ಸರಿಗಮಪ ಸೀಸನ್ 17 ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆದುಕೊಂಡು ಬಂದಿತ್ತು. ಈ ಶೋ ಕರ್ನಾಟಕಕ್ಕೆ ಉತ್ತಮವಾದ ಪ್ರತಿಭೆಗಳನ್ನು ಕೊಡುತ್ತದೆ ಹಾಗೂ ಈ ಶೋ ನೋಡಲು ತುಂಬಾ ಜನ ಅಭಿಮಾನಿಗಳು ಇದ್ದಾರೆ .ಆದರೆ ಸರಿಗಮಪ ಸೀಸನ್ 17 ಗ್ರಾಂಡ್ ಫಿನಾಲೆ ಮುಗಿದಿದೆ ಈಗ ವಿಜೇತರು ಯಾರು ಎಂದರೆ ಶ್ರೀನಿಧಿ ಶಾಸ್ತ್ರಿಯವರು ವಿಜೇತರಾಗಿದ್ದಾರೆ ಇವರು ಹಾಡುವ ಹಾಡು ತುಂಬಾ ಚೆನ್ನಾಗಿತ್ತು ಹಾಗೂ ತೀರ್ಪುಗಾರರನ್ನು ಮನವೊಲಿಸುವಂತೆ ಇವರ ತುಂಬಾ ಚೆನ್ನಾಗಿ ಹಾಡುತ್ತಿದ್ದರು ಪ್ರತಿಯೊಂದು ಎಪಿಸೋಡ್ ನಲ್ಲಿ ತುಂಬಾ ಚೆನ್ನಾಗಿ ಹಾಡುತ್ತಿದ್ದರು. ಹಾಗೂ ಮೊದಲನೇ ರನ್ನರ್-ಅಪ್ ಆಗಿದ್ದವರು ಅಶ್ವಿನ್ ಶರ್ಮ ಇವರಿಗೆ 5 ಲಕ್ಷ ನಗದು ಬಹುಮಾನ ಕೊಡಲಾಗಿದೆ ಎರಡನೇ ರನ್ನರ್ ಅಪ್ ಆಗಿ ಕಂಬದ ರಂಗಯ್ಯ ವರಿಗೆ ಎರಡುವರೆ ಲಕ್ಷ ನಗದು ಹಣ ಕೊಡಲಾಗಿದೆ. ಮೊದಲನೇ ಬಹುಮಾನ ಶ್ರೀನಿಧಿ ಶಾಸ್ತ್ರಿ ಅವರಿಗೆ ಹತ್ತು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ಕೊಡಲಾಯಿತು ಆದರೆ ಸರಿಗಮಪ ಸೀಸನ್ 17ರ ವಿಜೇತರನ್ನು ನೋಡಿ ವೀಕ್ಷಕರಿಗೆ ತುಂಬಾ ಬೇಜಾರು ಎನಿಸಿದೆ.
ಸರಿಗಮಪ ಸೀಸನ್ 17 ಗ್ರಾಂಡ್ ಫಿನಾಲೆ ಒಟ್ಟು ಐದು ಜನ ಬಂದಿರುತ್ತಾರೆ ಗ್ರಾಂಡ್ ಫಿನಾಲೆಯಲ್ಲಿ ಎರಡು ಸುತ್ತು ಗಳಿದ್ದವು ಅದರಲ್ಲಿ ಮೊದಲನೇ ಸುತ್ತು ಐದು ಜನ ಹಾಡುಗಳನ್ನು ಹಾಡಿ ಇಬ್ಬರು ಎಲಿಮಿನೇಷನ್ ಆಗುತ್ತಾರೆ. ಅವರು ಯಾರು ಎಂದರೆ ಶರಧಿ ಪಾಟೀಲ್ ಮತ್ತು ಕಿರಣ್ ಪಾಟೀಲ್ ನಂತರ ಮೂರನೇ ಸುತ್ತಿಗೆ ಅಶ್ವಿನ್ ಶರ್ಮ ಕಂಬದ ರಂಗಯ್ಯ ಹಾಗೂ ಶ್ರೀನಿಧಿ ಶಾಸ್ತ್ರಿ ಬರುತ್ತಾರೆ ಅದರಲ್ಲಿ ಶ್ರೀನಿಧಿ ಶಾಸ್ತ್ರಿ ವಿಜೇತ ರಾಗುತ್ತಾರೆ ಆದರೆ ಇದನ್ನು ನೋಡಿದ ಅಭಿಮಾನಿಗಳು ಈ ತೀರ್ಪಿನ ಬಗ್ಗೆ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಸರ್ವೆ ಪ್ರಕಾರ ಜನರು ಓಟ್ ಮಾಡಿರುವುದು ಕಂಬದ ರಂಗಯ್ಯ ಅವರಿಗೆ ಆದರೆ ಅವರನ್ನು ವಿಜೇತರಾಗಿ ಮಾಡಲಿಲ್ಲ ಎಂದು ತುಂಬಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಲಕ್ಷಾಂತರ ಜನರ ಅಭಿಮಾನಿಗಳನ್ನು ಹೊಂದಿದ್ದರು ಎಂದು ಅಭಿಮಾನಿಗಳು ಜೀ ಕನ್ನಡ ಪೇಜ್ ನಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದು ನಿಜಕ್ಕೂ ಮೋಸ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ ನಿಮಗೂ ಒಂದು ವೇಳೆ ಮೋಸ ಎನಿಸಿದರೆ 1 ಕಮೆಂಟ್ ಮಾಡಿ.