ಹಿಂದೂ ಪುರಾಣಗಳ ಪ್ರಕಾರ ಹೊಸ ವರ್ಷ ಆರಂಭವಾಗುವುದು ಚೈತ್ರ ಮಾಸದಿಂದ, ಚೈತ್ರ ಮಾಸದ ಮೊದಲ ದಿನವೇ ಯುಗಾದಿ ಹಬ್ಬದ ಆಚರಣೆ ಮಾಡುತ್ತಾರೆ. ಈ ದಿನ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಬೇವು ಬೆಲ್ಲವನ್ನು ತಿನ್ನುವುದು ನಮ್ಮ ಸಂಪ್ರದಾಯವಾಗಿದೆ. ಈ ವಿಶೇಷವಾದ ದಿನ ದೇವರ ಮನೆಯಲ್ಲಿ ಮುಖ್ಯವಾಗಿ ಕೆಲವು ವಸ್ತುಗಳನ್ನು ಇಟ್ಟು ಪೂಜೆ ಮಾಡಿದರೆ ಇಡೀ ವರ್ಷ ನೆಮ್ಮದಿ, ಸುಖ ಸಂತೋಷದಿಂದ ಸಕಲ ಅಷ್ಟ ಆಶ್ಚರ್ಯಗಳು ನಿಮ್ಮ ಜೀವನದಲ್ಲಿ ಕೂಡಿ ಬರುತ್ತದೆ. ಆ ವಸ್ತುಗಳು ಯಾವುದು ವಿಶೇಷವಾಗಿ ಈ ಎರಡು ವಸ್ತುಗಳನ್ನು ಯಾಕೆ ತರಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ನಾವು ತಿಳಿಸುವ ಎಲ್ಲಾ ವಸ್ತುಗಳನ್ನು ತರಲೇಬೇಕು ಅಂತ ಕಡ್ಡಾಯವಿಲ್ಲ. ಆದರೆ ಸಾಧ್ಯವಾದಷ್ಟು ವಸ್ತುಗಳನ್ನು ಇಟ್ಟು ಭಕ್ತಿಯಿಂದ ಕೈ ಮುಗಿದು ಪೂಜೆ ಮಾಡಿದರೆ ನಿಮಗೆ ಅದರ ಫಲ ದೊರೆಯುತ್ತದೆ. ಮೊದಲನೇದಾಗಿ ಒಂದು ತಾಂಬೂಲ ತಟ್ಟೆಯಲ್ಲಿ ಬಾಳೆಹಣ್ಣು, ಎಲೆ, ಅಡಿಕೆ, ಹಲಸಿನ ಹಣ್ಣು, ಮಾವಿನ ಹಣ್ಣು,
ಮೂರು ವಿಧವಾದಂತಹ ಹಣ್ಣು, ಸ್ವಲ್ಪ ಚಿಲ್ಲರೆ ಕಾಸು ಮತ್ತು ನೋಟು ಈ ಎರಡನ್ನು ಇಟ್ಟು ಮನೆಯಲ್ಲಿರುವ ಬೆಳ್ಳಿ ಮತ್ತು ಬಂಗಾರವನ್ನು ಸ್ವಚ್ಛ ಮಾಡಿ ಇಡಬೇಕು. ಇನ್ನೂ ಮುಖ್ಯವಾಗಿ ಇಡಬೇಕಾದ ಎರಡು ವಸ್ತುಗಳು ಯಾವುದೆಂದರೆ ಮೊದಲನೆಯದಾಗಿ ಅರಿಶಿಣದ ಕೊಂಬು, ಎರಡನೆಯದಾಗಿ ಒಂದು ಚಿಕ್ಕ ಕನ್ನಡಿ ಈ ಎರಡು ಕೂಡ ತುಂಬಾ ಮುಖ್ಯ. ಇದನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಬೇಕು ಅಥವಾ ಹಿಂದಿನ ದಿನವೇ ನೀವು ಇದನ್ನೆಲ್ಲ ಸಿದ್ಧತೆ ಮಾಡಿಕೊಂಡು ಹಬ್ಬದ ದಿನ ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡುವುದು ಇನ್ನೂ ವಿಶೇಷ. ಹಬ್ಬದ ದಿನ ಮನೆಗೆ ತರಬೇಕಾದ ಮಹಾಲಕ್ಷ್ಮಿ ಅಂಶ ಯಾವುದೆಂದರೆ ಮೊದಲನೇದಾಗಿ ಕಲ್ಲು ಉಪ್ಪು, ಎರಡನೆಯದಾಗಿ ಅರಶಿಣ ಇವೆರಡನ್ನು ಚಿಕ್ಕ ಲೋಟಕ್ಕೆ ತುಂಬಿ ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ ಮಧ್ಯಾಹ್ನದ ವೇಳೆ ಇದನ್ನು ಅಡುಗೆಗೆ ಬಳಸಿಕೊಳ್ಳಿ.
ಯುಗಾದಿ ದಿನ ಈ ಎರಡು ವಸ್ತುಗಳನ್ನು ಮನೆಗೆ ತಂದು ಇಡಿ… ಮನೆಯಲ್ಲಿ ಆಗುವ ಬದಲಾವಣೆ ನೋಡಿ..!
People needs
[irp]