ನಾವು ಸದಾಕಾಲ ಶಕ್ತಿಯುತವಾಗಿ ಹುಮ್ಮಸ್ಸಿನಿಂದ ಕೆಲಸ ಮಾಡಬೇಕು ಅಂತ ಅಂದುಕೊಳ್ಳುತ್ತೇವೆ ಹಾಗೂ ನಮ್ಮ ದೇಹದಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಇದೆ ಅಂತ ಭಾವಿಸುತ್ತೇವೆ. ಆದರೆ ಯಾವಾಗ ನಮಗೆ ಕೆಲಸ ಮಾಡುವುದಕ್ಕೆ ಆಯಾಸ ಆಗುತ್ತದೆ ಸುಸ್ತು ಅನಿಸುತ್ತದೆ ಆಗ ನಮಗೆ ತಿಳಿಯುತ್ತದೆ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿದೆ ಹಾಗಾಗಿ ಈ ರೀತಿಯ ಸಮಸ್ಯೆಗಳು ಏರ್ಪಡುತ್ತಿದೆ ಅಂತ. ಸ್ವಲ್ಪ ದೂರ ನಡೆದರೂ ಕೂಡ ಕಾಲುಗಳಲ್ಲಿ ಶಕ್ತಿ ಇಲ್ಲದೆ ಇರುವಂತೆ ಭಾಸವಾಗುತ್ತದೆ ಹಾಗೂ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಕೈಗಳಲ್ಲಿ ಸೆಳೆತ ಉಂಟಾಗುತ್ತದೆ. ಈ ರೀತಿಯ ಸಮಸ್ಯೆಗಳು ನಮ್ಮ ಮಾನಸಿಕ ಸ್ಥಿತಿಯ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಇಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಪ್ರತಿನಿತ್ಯ ಒಂದು ಗ್ಲಾಸ್ ಈ ಒಂದು ಮನೆಮದ್ದನ್ನು ನೀವು ಸೇವಿಸಬೇಕಾಗುತ್ತದೆ.
ಒಂದು ಬಟ್ಟಲಿಗೆ ಅರ್ಧ ಗ್ಲಾಸ್ ನೀರನ್ನು ಹಾಕಿ ಇದು ಕರ್ಜೂರ ಹಾಗೂ ಹತ್ತು ಬಾದಾಮಿಯನ್ನು ರಾತ್ರಿ ಪೂರ್ತಿ ನೆನೆಸಿಕೊಳ್ಳಬೇಕು. ತದನಂತರ ಬೆಳಗ್ಗೆ ಬಾದಾಮಿ ಮೇಲೆ ಇರುವಂತಹ ಸಿಪ್ಪೆಗಳನ್ನು ಹಾಗೂ ಕರ್ಜೂರದ ಒಳಗೆ ಇರುವ ಬೀಜವನ್ನು ತೆಗೆದು ಮಿಕ್ಸಿ ಜಾರಿಗೆ ಹಾಕಿ. ತದನಂತರ ಎರಡು ಚಿಟಿಕೆ ಅರಿಶಿಣ, ಕಾಲು ಟೇಬಲ್ ಸ್ಪೂನ್ ಏಲಕ್ಕಿ ಪುಡಿಯನ್ನು ಹಾಗೂ ಒಂದು ಟೇಬಲ್ ಸ್ಪೂನ್ ಹಸುವಿನ ಹಾಲನ್ನು ಹಾಕಿ ಇವೆಲ್ಲವನ್ನು ಕೂಡ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ತದನಂತರ 2 ಗ್ಲಾಸ್ ಹಾಲನ್ನು ಹಾಕಿ ಮತ್ತೊಮ್ಮೆ ಗ್ರೈಂಡ್ ಮಾಡಿಕೊಳ್ಳಿ ನಂತರ ಈ ಮಿಶ್ರಣವನ್ನು ಗ್ಲಾಸ್ ಗೆ ಹಾಕಿಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಮಿಕ್ಸ್ ಮಾಡಿ ಬೆಳಗಿನ ಸಮಯ ಸೇವಿಸಿ.
ಏಳು ದಿನ ಇದನ್ನು ಸೇವಿಸಿ ಕೈಕಾಲು ನೋವು ನರಗಳ ಬಲಹೀನತೆ ರಕ್ತಹೀನತೆ ಸಮಸ್ಯೆ ಎಲ್ಲವೂ ಕೂಡ ಕಡಿಮೆ ಆಗುತ್ತದೆ…
People needs
[irp]