ಈ ಬೆಟ್ಟವನ್ನು ಜಲೇಂದ್ರ ಪರ್ವತ ಎಂದು ಕರೆಯುತ್ತಾರೆ ಗಜಾಸುರಬ ಅಸುರರನ್ನು ವಿಶ್ವೇಶ್ವರನು ಇಲ್ಲಿ ಕಾಲ ಭೈರವನ ರೂಪದಲ್ಲಿ ಸಂಹಾರ ಮಾಡಿದಕ್ಕೆ ಇಲ್ಲಿಗೆ ಜಾಲೇಂದ್ರ ಎಂಬ ಹೆಸರು ಬಂದಿದೆ. ಆಮೆಯ ಆಕಾರದ ಬೆಟ್ಟದ ತಪ್ಪಲಿನಲ್ಲಿ ಇರುವ ಈ ಊರೇ ಗಜೇಂದ್ರ ಗಡ ಓ ಪಟ್ಟಣದ ಉತ್ತರ ದಿಕ್ಕಿಗೆ ಹೊರಟರೆ ಹಚ್ಚ ಹಸಿರಾಗಿದ ಬೆಟ್ಟವು ಸೀರೆ ಹುಟ್ಟು ಮುಗಿಲು ಮುಟ್ಟುವಂತೆ ನಿಂತ ದೇವಸ್ಥಾನ ಒಂದು ಕಣ್ಣಿಗೆ ಬೀಳುತ್ತದೆ ಅದೇ ಕಾಲ ಕಾಲೇಶ್ವರ ದೇವಸ್ಥಾನ. ಇಲ್ಲಿ ದೊಡ್ಡದಾದ ಹಾಸು ಗಲ್ಲಿನ ಸುಮಾರು 200 ಮೆಟ್ಟಿಲುಗಳನ್ನು ಹೊಂದಿದೆ ಇದನ್ನು ಏರಿದರೆ ಆಯಾಸ ಏನಿಸುವುದಿಲ್ಲ ಬದಲಿಗೆ ನಮ್ಮನ್ನು ಗತಕಾಲದ ಕಡೆ ಕೊಂಡೊಯ್ಯುವ ಬೆರಗು ಮೂಡಿಸುತ್ತದೆ. ಇಲ್ಲಿನ ಭಕ್ತಾದಿಗಳೆಲ್ಲಾ ಈ ಕಾಲಕಾಲೇಶ್ವರ ಹೆಸರು ಕೇಳಿದ ತಕ್ಷಣವೆ ಮನಸ್ಸು ಅರಳಿ ಕಮಲದಂತೆ ಆಗುತ್ತದೆ.
ಈ ಭಾಗದ ಜನರಿಗೆ ಕಾಲಕಾಲೇಶ್ವರ, ಕಾಳಪ್ಪ, ಅಥವಾ ಕಾಳಮರಳಯ್ಯ ಎಂಬ ಹೆಸರಿನಿಂದ ಪರಿಚಿತನಾಗಿದ್ದಾನೆ. ಈ ದೇವಲಯದ ಚರಿತ್ರೆ ಕೂಡ ಅಷ್ಟೇ ರೋಚಕವಾಗಿದೆ ದಕ್ಷಿಣದ ಕಾಶಿ ಎಂದೇ ಕರೆಯಲಾಗಿರುವ ಇಲ್ಲಿನ ಸ್ವಯಂ ಶ್ರೀ ಕಲ್ಲೇಶ್ವರ ದೇವಾಲಯ ವಿಭಾಗದ ಕಾರ್ಯ ಕಲಾಪಗಳು ಬಹಳ ವಿಶೇಷವಾಗಿದೆ. ಇದು ಐತಿಹಾಸಿಕ ಸ್ಥಳ ಜಿಲ್ಲಾ ಕೇಂದ್ರವಾದ ಗದಗ ಜಿಲ್ಲೆಯಿಂದ ಸುಮಾರು 54 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯದಲ್ಲಿ ಎಲ್ಲವೂ ಶಿಲಾಮಯದಿಂದ ಕೂಡಿದೆ ತನ್ನ ವಿಶಿಷ್ಟ ಅಂಶಗಳಿಂದ ಇದು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಭಕ್ತಿ ಭಾವವನ್ನು ಅರ್ಪಿಸುತ್ತದೆ. ಪ್ರಸ್ತುತ ಈ ಭವ್ಯ ಸ್ಮಾರಕವನ್ನು ಮೆಲುಕು ಹಾಕುವಂತೆ ಮಾಡುತ್ತದೆ ಇದೇ ಕಾರಣಕ್ಕಾಗಿ ಹಲವು ಕನ್ನಡ ಮತ್ತು ದಕ್ಷಿಣ ಭಾರತದ ಚಲನಚಿತ್ರಗಳು ಕೂಡ ಚಿತ್ರೀಕರಣಗೊಂಡಿದೆ.