ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿಯಲ್ಲಿ ನಾವೆಷ್ಟೇ ಮುಂದೆ ಹೋಗುತ್ತಿ ದ್ದರು ನಾವು ನಮ್ಮ ಜೀವನ ಅಷ್ಟೇ ಹಿಂದೆ ಉಳಿಯುತ್ತ ಇದ್ದೆವೆ. ಹಿಂದಿನ ಕಾಲದಲ್ಲಿ ಜನರು ನೂರು ವರ್ಷದವರೆಗೆ ಯಾವುದೇ ತೊಂದರೆಗಳಿಲ್ಲದೆ ಗಟ್ಟಿ ಮುಟ್ಟಾಗಿ ಬದುಕುತ್ತಿದ್ದರೂ. ಆದರೆ ಇತ್ತೀಚಿನ ದಿನಗಳಲ್ಲಿ 30 ವರ್ಷದಲ್ಲಿ ಶುಗರ್, ಬಿಪಿ, ಕ್ಯಾನ್ಸರ್ ನಂತಹ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ನಾವು ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಒಂದಲ್ಲ ಒಂದು ರೀತಿಯಾದಂತಹ ಗಿಡ ಮರಗಳು ನೊಡುತ್ತಿದ್ದೆವೂ ಅದರಲ್ಲೂ ಕೂಡ ಬೇವಿನ ಮರ ಪೇರಳೆ ಮರಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಗಳಲ್ಲಿ ಗಿಡ ಮರಗಳನ್ನು ಬಿಟ್ಟು ಸ್ಕೂಟರ್ ಮತ್ತು ಕಾರುಗಳನ್ನು ನಿಲ್ಲಿಸುವುದಕ್ಕೆ ಜಾಗ ಕೊಟ್ಟಿರುತ್ತಾರೆ. ಇರುವಂತಹ ಮರ ಗಿಡಗಳನ್ನು ಕಡಿದು ಸಂಧಿ ಮೂಲೆ ಮೂಲೆಗಳಲ್ಲಿ ಕೂಡ ಮನೆಗಳನ್ನು ಕಟ್ಟುತ್ತಿದ್ದೇವೆ. ಇನ್ನು ನಿಮಗೆ ಏನಾದರೂ ಪಿಂಪಲ್ಸ್ ಇದ್ದರೆ ಮೊದಲು ಬೇವಿನ ಎಲೆಯ ಪೇಸ್ಟ್ ಅನ್ನು ಹಚ್ಚಬೇಕು.
ಡಯಾಬಿಟಿಸ್ ಇದ್ದರೆ ಪೇರಲೇ ಎಲೆಗಳನ್ನು ಸೇವಿಸ ಬೇಕು ಎಂಬುದನ್ನು ನಮ್ಮ ಹಿರಿಯರು ಸೂಚಿಸುತ್ತಾರೆ ನಾವು ಎಷ್ಟು ಹಸಿರಿನಿಂದ ದೂರವಾಗುತ್ತಿದ್ದೇವೆ ಅಷ್ಟು ಅನರೋಗ್ಯ ನಮ್ಮನ್ನು ಕಾಡುತ್ತಿದೆ. ದಿನಕ್ಕೆ ಒಂದು ಗಂಟೆ ನಾವು ಹಸಿರು ತುಂಬಿದ ವಾತಾವರಣ ನೋಡುವುದರಿಂದ ಕಣ್ಣಿನ ಧೃಷ್ಟಿ ಹೆಚ್ಚಾಗುತ್ತದೆ ಇದು ಹಲವು ರಿಸರ್ಚ್ ಗಳ ಮೂಲಕವೂ ಕೂಡ ಸಾಬೀತು ಆಗಿದೆ. ಇನ್ನು ಪಿಂಪಲ್ಸ್, ಡಯಾಬಿಟಿಸ್, ಕೆಮ್ಮು, ನೆಗಡಿ ಹೀಗೆ ಪ್ರತಿಯೊಂದು ಅನಾರೋಗ್ಯಕ್ಕೂ ಕೂಡ ಮರ ಗಿಡಗಳು ಔಷಧಿ ಕೊಡಬಲ್ಲವು. ಅಂತಹ ಒಂದು ಮರದ ಬಗ್ಗೆ ಇಂದು ನಾವು ನಿಮಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ ಪೇರಲೆ ಅಂದರೆ ಸೀಬೆ ಮರದ ಎಲೆಯಲ್ಲಿ ಬಹಳಷ್ಟು ಉಪಯುಕ್ತ ವಾದಂತಹ ಔಷಧೀಯ ಗುಣಲಕ್ಷಣಗಳನ್ನು ಹೊಂದಿದೆ. ಖಾಲಿಹೊಟ್ಟೆಯಲ್ಲಿ ಸೀಬೆ ಮರದ ಎಲೆಗಳನ್ನು ತಿಂದರೆ ಹಲವು ಕಾಯಿಲೆಗಳನ್ನು ಇದು ದೂರ ಮಾಡುತ್ತದೆ.