ನಮಲ್ಲಿ ಶಕ್ತಿ, ನಮ್ಮ ದೇಹಕ್ಕೆ ಅಟ್ಯಾಕ್ ಆಗಿರುವ ವೈರೆಸಗಳನ್ನ ನಾಶ ಮಾಡುವ ಗುಣ ಹೂಂದಿರುವ ವಸ್ತು ಯಾವುದೆಂದರೆ ಅದು ಅಮೃತ ಬಳ್ಳಿ.ನಿಮಗೆ ಹೆಸರಿನಲ್ಲೆ ಗೊತ್ತಾಗುತ್ತಿದೆ ಎಷ್ಟು ಶಕ್ತಿ ಇದೆ ಅಂತ ಅಮೃತ ಕುಡಿದಷ್ಟೆ ಶಕ್ತಿ ನಮಗೆ ಈ ಅಮೃತ ಬಳ್ಳಿಯಲ್ಲಿ ಸಿಗುತ್ತದೆ. ಅಂದರೆ ನಮ್ಮ ದೇಹದ ಪ್ರತಿಯೊಂದು ಕಣ ಕಣದಲ್ಲು ಹೊಸ ಚೈತನ್ಯವನ್ನು ಕೊಡುವ ಶಕ್ತಿ ಮತ್ತು ಹೊರಗಿನಿಂದ ಯಾವುದೇ ವೈರಸ್, ಬ್ಯಾಕ್ಟೀರಿಯಾ ಅಟ್ಯಾಕ್ ಅದರು ಅದನ್ನು ಸರಿಯಾದ ಪ್ರಮಾಣದಲ್ಲಿ ಒಡೆದು ಬಡೆದು ಓಡಿಸುವಂತಹ ಶಕ್ತಿ ಈ ಅಮೃತ ಬಳ್ಳಿಗಿದೆ.ಅಮೃತ ಬಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅಂತಹ ಶಕ್ತಿಯನ್ನು ನಮ್ಮ ರೋಗ ನಿರೋಧಕ ಶಕ್ತಿಯನ್ನು ನಮ್ಮ ದೇಹದಲ್ಲಿ ನಾವು ಬೆಳೆಸಿಕೊಳ್ಳಬಹುದು. ಅಮೃತ ಬಳ್ಳಿ ಯ ಪ್ರತಿಯೊಂದು ಅಂಗವು ಕೂಡ ಔಷಧೀಯ ಗುಣಗಳನ್ನು ಹೊಂದಿದೆ.
ಅದರಲ್ಲೂ ಈಗ ವೈರಸ್ ಇಂದ ಬರುವ ಕಾಯಿಲೆಯನ್ನು ಬಹಳ ಬೇಗ ನಾಶ ಮಾಡುವಂತಹ ಗುಣ ಈ ಅಮೃತ ಬಳ್ಳಿಗಿದೆ.ಇದನ್ನು
ಕುಡಿಯುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಉಂಟಾಗಿ ಈ ವೈರಸ್ ನ್ನು ನಾಶ ಮಾಡುವಂತಹ ಶಕ್ತಿ ಅಮೃತ ಬಳ್ಳಿ ಗಿದೆ.
ಅಮೃತ ಬಳ್ಳಿ ಯ ಕಷಾಯವನ್ನು ಮಾಡುವುದು ಹೇಗೆ ಅಂದರೆ ಮೊದಲು ಒಂದು ಬೌಲ್ ಗೆ ಎರಡು ಗ್ಲಾಸ್ ನೀರನ್ನು ಹಾಕಿಕೊಂಡು ಇದಕ್ಕೆ ಅಮೃತ ಬಳ್ಳಿಯನ್ನು ಹಾಕಬೇಕು.ಅಮೃತ ಬಳ್ಳಿಯನ್ನು ಕತ್ತರಿಸಿದರೆ ಅದರಲ್ಲಿ ಬರುವ ಬಳ್ಳಿಯನ್ನು ಚೆನ್ನಾಗಿ ತೊಳೆದು2-3 ಪೀಸ್ ಮಾಡಿ ನೀರಿನಲ್ಲಿ ಹಾಕಿ ಕುದಿಸಬೇಕು.ಅದು 2 ಗ್ಲಾಸ್ ನೀರು 1 ಗ್ಲಾಸ್ ಆಗುವವರೆಗು ಕುದಿಸಬೇಕು ನಂತರ ಇದನ್ನು ಸೊಸಿಕೊಂಡು ಇದಕ್ಕೆ ಸ್ಪಲ್ಪ ಬೆಲ್ಲವನ್ನು ಮಿಕ್ಸ್ ಮಾಡಿ ಕುಡಿಯಬೇಕು ಇದನ್ನು ಬೆಳ್ಳಿಗೆ ಎಂದ ತಕ್ಷಣ ಕಾಲಿ ಹೊಟ್ಟೆಯಲ್ಲಿ ಕುಡಿಯಬೇಕು.