ತಂದೆ ಕೊಡಿಸಿದ 20 ವರ್ಷ ಹಳೆಯ ಸ್ಕೂಟರ ನಲ್ಲಿ ಭಾರತದ ಎಲ್ಲ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ “ಆಧುನಿಕ ಶ್ರವಣಕುಮಾರ” ಎಂದೇ ಖ್ಯಾತವಾಗಿರುವ ಕೃಷ್ಣ ಕುಮಾರ್ ಅದೊಂದು ದಿನ ತಾಯಿ ಯೊಂದಿಗೆ ಮಾತನಾಡುವಾಗ ಯಾವ ಕ್ಷೇತ್ರವನ್ನು ನೀನು ನೋಡಿದ್ದೀ ಯಾ ಎಂದು ಕೇಳಿದರು ಆಗ ನಿರಾಸೆ ಮನೋಭಾವನೆಯಿಂದ ಹೇಳಿದ ತಾಯಿ ನಾನು ಬೇಲೂರು ಹಳೇಬೀಡನ್ನೆ ನೋಡಿಲ್ಲ ಇನ್ನು ತೀರ್ಥಕ್ಷೇತ್ರೆ ಎಲ್ಲಿ ಎಂದು ಹೇಳಿದ್ದರಂತೆ ಅಂದೆ ನಿರ್ಧಾರ ಮಾಡಿದ ಕೃಷ್ಣ ಕುಮಾರ್ ತನ್ನ ತಂದೆ ಕೊಡಿಸಿದ ಸ್ಕೂಟರ್ ನಲ್ಲೆ ತಾಯಿಯನ್ನು ಕೂರಿಸಿಕೊಂಡು ಇಡೀ ಭಾರತ ಸುತ್ತಿ ವಾಪಸಾಗಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟ ದಿಂದ ಆರಂಬವಾದ ಈ ಯಾತ್ರೆ ಮೊದಲು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ, ಕರ್ನಾಟಕ, ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ.
ಭಾರತದ 20ಕ್ಕು ಹೆಚ್ಚು ರಾಜ್ಯಗಳಲ್ಲಿ ಹಾಗು ನೆರೆ ರಾಷ್ಟ್ರಗಳಾದ ಮ ಯನ್ಮಾರ್, ನೇಪಾಳ ಹಾಗೂ ಭೂತಾನ್ ನಲ್ಲಿ ಸಾಗಿ ಬಂದಿದ್ದಾರೆ. ಕೃಷ್ಣಕುಮಾರ್ ಅವರು ತಮ್ಮ ತಂದೆ ಕೊಡಿಸಿದ ಸ್ಕೂಟರ್ನಲ್ಲಿ ಅವರ 70 ವರ್ಷದ ತಾಯಿಯನ್ನು ಕೂರಿಸಿಕೊಂಡು ಸುಮಾರು 56000 ಕಿ ಲೋಮೀಟರ್ ಪ್ರಯಾಣವನ್ನು ಮುಗಿಸಿ ಬಂದಿದ್ದಾರೆ. ಪ್ರತಿ ತೀರ್ಥ ಯಾತ್ರೆಗೆ ಬಹಳ ಸುಗಮವಾಗಿ ಸಾಗಿತ್ತು ಇವರು ಆರೋಗ್ಯವಾಗಿ ಮನೆಗೆ ಸೇರಿದ್ದಾರೆ. ಇಂದಿನ ಕಾಲದಲ್ಲಿ ಇಂತಹ ಮಕ್ಕಳು ಸಿಗುವುದು ಅಪರೂಪವೇ ಸರಿ. ಉತ್ತಮ ಮಾರ್ಗದರ್ಶನ ಅವರು ಬೆಳೆದು ಬಂದಂತಹ ದಾರಿ ಇದೆಲ್ಲವೂ ಒಬ್ಬ ಮನುಷ್ಯನ ವ್ಯಕ್ತಿತ್ವವನ್ನು ರೂಪುಗೊಳ್ಳಲು ಸಹಾಯ ಮಾಡುತ್ತದೆ ಅಂತಹ ಒಂದು ಉತ್ತಮ ವ್ಯಕ್ತಿತ್ವವನ್ನು ಕೃಷ್ಣಕುಮಾರ್ ಅವರು ಹೊಂದಿದ್ದಾರೆ.