ತೆಂಗಿನಕಾಯಿ ಏಕೆ ಹೊಡೆದು ಪೂಜೆ ಮಾಡಬೇಕು ಎಂದು ನೋಡುವು ದಾದರೆ ತೆಂಗಿನಕಾಯಿಯ ನಾರಿನ ಕೆಳಗೆ ಮೂರು ಕಣ್ಣುಗಳು ಇರುತ್ತದೆ ಅದು ಪರಮೇಶ್ವರನ ಸ್ವರೂಪ ಹಾಗೆ ಪರಮೇಶ್ವರನ ಅನುಗ್ರಹ ಪಡೆ ಯಲು ತೆಂಗಿನ ಕಾಯಿ ಹೊಡೆದು ಪೂಜೆ ಮಾಡುತ್ತಾರೆ. ನಮ್ಮ ಹಿಂ ದೂ ಸಂಪ್ರದಾಯದ ಪ್ರಕಾರ ಶುಭಕಾರ್ಯಗಳಿಗೆ ಯಾವುದೇ ಕಾರ್ಯ ಕ್ರಮ ಮಾಡಿದರೂ ತೆಂಗಿನಕಾಯಿ ಇಲ್ಲದೆ ಪೂಜೆ ಮಾಡಲು ಸಾಧ್ಯವೇ ಇಲ್ಲ. ಮನೆಯಲ್ಲಿ ತೆಂಗಿನಕಾಯಿ ಕೆಟ್ಟುಹೋದರೆ ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ ಅದು ನೈಸರ್ಗಿಕವಾಗಿದುದು ನಾವು ಎಳೆಯ ತೆಂಗಿನ ಕಾಯಿಯನ್ನು ಕಿತ್ತರೆ ಅದು ಕೆಡುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಸಮಯದಲ್ಲಿ ನೀವು ಮತ್ತೊಮ್ಮೆ ಮುಖವನ್ನು ತೊಳೆದು ಕೊಂಡು ದೇವರ ಮುಂದೆ ಸಂಕಲ್ಪ ಮಾಡಿಕೊಂಡು ದೇವರಿಗೆ ಕಾಯಿ ಯನ್ನು ಹೊಡೆಯಬೇಕು.
ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ತೆಂಗಿನಕಾಯಿ ಹೊಡೆಯುವಾಗ ಕೆಟ್ಟಿದ್ದರೆ ಭಯಪಡುವ ಅಗತ್ಯವಿಲ್ಲ. ಒಂದು ತೆಂಗಿನಕಾಯಿಯಲ್ಲಿ ಎರ ಡು ತಿರುಳು ಇದ್ದರೆ ಅಂದರೆ ಜೋಡಿ ಕಾಯಿ ಇದ್ದರೆ ಅದು ಮನೆಯ ಲ್ಲಿ ಗರ್ಭಿಣಿಯರು ಇದ್ದರೆ ಅವರಿಗೆ ಅವಳಿ ಜವಳಿ ಮಕ್ಕಳಾಗುತ್ತದೆ ಎಂಬ ಸೂಚನೆ ನೀಡುತ್ತದೆ. ಹಾಗೆಯೇ ತೆಂಗಿನಕಾಯಿ ಒಳಗಡೆ ಹೂ ವು ಬಂದರೆ ಮನೆಯಲ್ಲಿ ಸಂತನಾಗುವ ಸೂಚನೆ ಅಥವಾ ಯಾವುದಾ ದರೂ ಶುಭಕಾರ್ಯ ನಡೆಯುವ ಮುನ್ಸೂಚನೆಯನ್ನು ಕೊಡುತ್ತದೆ. ಹಾಗೆ ನಾವು ಮನೆಯಲ್ಲಿ ಕಳಶಕ್ಕೆ ತೆಂಗಿನಕಾಯಿಯನ್ನು ಇಟ್ಟಿರುತ್ತೇವೆ ಇದನ್ನು ನಾವು ತಿಂಗಳಿಗೊಮ್ಮೆ ತೆಗೆದು ಬೇರೆ ಕಾಯಿಯನ್ನು ಇಡುತ್ತೇವೆ ಅಂತಹ ಸಂದರ್ಭದಲ್ಲಿ ತೆಂಗಿನಕಾಯಿ ಮೊಳಕೆ ಬಂದರೆ ನಿಮ್ಮ ಮನೆ ಯಲ್ಲಿ ಹಾಕಬಹುದು ಇಲ್ಲವಾದರೆ ದೇವಸ್ಥಾನ ಅಥವಾ ಮಠಗಳಿಗೆ ತೆಗೆದುಕೊಂಡು ಹೋಗಿ ಕೊಡುತ್ತಾರೆ ನಿಮಗೆ ಒಳ್ಳೆಯದಾಗುತ್ತದೆ.