ಪ್ರತಿಯೊಬ್ಬರ ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ಹಿರಿ ಯರು ಹೇಳುತ್ತಾರೆ. ಚಿತ್ರರಂಗದ ಹಲವು ಕಲಾವಿದರು ಸಿನಿಮಾ ರಂಗದಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ ಇನ್ನು ಕೆಲವರು ಪ್ರೀತಿಮಾಡಿ ಎಂಗೇಜ್ಮೆಂಟ್ ಮಾಡಿಕೊಂಡು ನಂತರ ಬ್ರೇಕಪ್ ಮಾಡಿಕೊಂಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶ ಮತ್ತು ನಿರ್ಮಾಪಕ ವರುಣ್ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ನಿಶ್ಚಿ ತಾರ್ಥಕ್ಕೆ ತಮಿಳಿನ ಖ್ಯಾತ ನಟ ಧನುಷ್ ಬಂದಿದ್ದರು ಆಗ ತ್ರಿಶ ಅವರ ನಡವಳಿಕೆ ಇಷ್ಟ ಆಗದಕಾರಣ ನಿರ್ಮಾಪಕ ವರುಣ್ ವಿವಾಹ ಕ್ಯಾನ್ಸಲ್ ಮಾಡಿಕೊಳ್ಳುತ್ತಾರೆ. ನಟಿ ನಯನತಾರಾ ಅವರನ್ನು ಪ್ರೀತಿಸಿದ ನಟ ಪ್ರಭುದೇವ ಅವರು ಮದುವೆಯ ಕಾರಣಕ್ಕಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಇಬ್ಬರು ನಿಶ್ಚಿತಾರ್ಥವಾದರು ಆದರೆ ಕಾರಣಾಂತರಗಳಿಂದ ವಿವಾಹ ಆಗದೆ ಇಬ್ಬರು ದೂರಾಗುತ್ತಾರೆ.
ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಬಿಸಿನೆಸ್ ಮ್ಯಾನ್ ಆನಂದ್ ಗೌಡ ಅವರು ಪೋಷಕರ ಸಮ್ಮುಖದಲ್ಲಿ ನಿಶ್ಚಿತಾರ್ಥವಾದರು ಹಾಗೆಯೇ ಮದುವೆ ಸಿದ್ಧತೆ ನಡೆಯುತ್ತಿತ್ತು ಆದರೆ ಪೂಜಾಗಾಂಧಿ ಅವ ರ ತಾಯಿ ಆನಂದ್ ಗೌಡ ಅವರ ಬಳಿ ಹೆಚ್ಚಿನ ಹಣವನ್ನು ಕೇಳುತ್ತಿ ದ್ದಾರೆ ಎಂಬ ಕಾರಣಕ್ಕೆ ಆನಂದ್ ಮದುವೆ ಕ್ಯಾನ್ಸಲ್ ಮಾಡುತ್ತಾರೆ. ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ರಿಷಿಕಾ ಸಿಂಗ್ ಸಂದೀಪ್ ಎಂಬುವವರ ಜೊತೆ ಎಂಗೇಜ್ಮೆಂಟ್ ಮಾಡಿ ಕೊಂಡಿರುತ್ತಾರೆ ಆದರೆ ಹುಡುಗನ ತಾಯಿ ಮತ್ತು ರಿಷಿಕ ಸಿಂಗ್ ಅವರ ಮಧ್ಯೆ ವೈಮನಸ್ಸು ಉಂಟಾಗಿ ವಿವಾಹವು ಮುರಿದು ಬೀಳುತ್ತದೆ. ಬಿಗ್ ಬಾಸ್ ಸ್ಪರ್ಧಿಗಳಾದ ಅನುಪಮ ಗೌಡ ಮತ್ತು ಜಗನ್ ಅವರು ಪರಸ್ಪರ ಪ್ರೀತಿಸಿ ಉಂಗುರವನ್ನು ಬದಲಾಯಿಸಿಕೊಂಡರು ಎಂಬ ಸುದ್ದಿ ಇದೆ ಆದರೆ ಇವರು ಈಗ ದೂರವಾಗಿ ಜಗನ್ ಬೇರೆ ಹುಡುಗಿಯ ಜೊತೆ ವಿವಾಹವನ್ನು ಆಗಿದ್ದಾರೆ.