ಯಾವಾಗ ಮನುಷ್ಯನು ತಾನು ಮಾಡಿದ ಕರ್ಮ ಫಲಗಳನ್ನು ಇದೇ ಜನ್ಮದಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳುತ್ತಾನೆ ಆಗ ಇಡೀ ಜಗತ್ತು ಬದಲಾವಣೆಯತ್ತ ಸಾಗಿಬಿಡುತ್ತದೆ. ಚರಿತ್ರೆಯಲ್ಲಿ ಗೆದ್ದವನಿಗೆ ಗೆದ್ದವನು ಗೆದ್ದವನು ಎನ್ನುವ ಜಾಗವಿದೆ, ಸೋತವನಿಗೆ ಕೂಡ ಇಂತವರೊಂದಿಗೆ ಸೆಣಸಾಡಿ ಸೋತೆ ಎಂಬ ಜಾಗವಿದೆ. ಆದರೆ ನಿಂತುಕೊಂಡು ನೋಡುವವರಿಗೆ, ಆಡಿಕೊಂ ಡು ನಗುವವರಿಗೆ ಚರಿತ್ರೆಯಲ್ಲಿ ಎಲ್ಲಿಯೂ ಕೂಡ ಜಾಗವಿಲ್ಲ. ಕೋ ಪದಿಂದ ಮಾತನಾಡಿದರೆ ಗುಣವನ್ನು ಕಳೆದುಕೊಳ್ಳುತ್ತಾರೆ, ಹೆಚ್ಚಾಗಿ ಮಾ ತನಾಡಿದರೆ ಶಾಂತಿಯನ್ನು ಕಳೆದುಕೊಳ್ಳುತ್ತೇವೆ, ಅನಗತ್ಯವಾಗಿ ಮಾತನಾಡಿದರೆ ಕೆಲಸವನ್ನು ಕಳೆದುಕೊಳ್ಳುತ್ತೇವೆ, ಅಹಂಕಾರದಿಂದ ಮಾತನಾಡಿದರೆ ಪ್ರೀತಿಯನ್ನು ಕಳೆದುಕೊಳ್ಳುತ್ತೇನೆ, ಸುಳ್ಳು ಮಾತ ನಾಡಿದರೆ ಹೆಸರನ್ನು ಕಳೆದುಕೊಳ್ಳುತ್ತೇವೆ, ವೇಗವಾಗಿ ಮಾತನಾಡಿದರೆ ಅರ್ಥವನ್ನು ಕಳೆದುಕೊಳ್ಳುತ್ತೇವೆ, ಪ್ರೀತಿಯಿಂದ ಮಾತನಾಡಿದರೆ ಎಲ್ಲವನ್ನು ಗಳಿಸುತ್ತೇನೆ.
ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಅದರಿಂದ ಯಾವುದೇ ಪ್ರತಿಫಲ ನಿರೀಕ್ಷಿಸಬೇಡಿ ನಿಮ್ಮ ಗುರಿಯನ್ನು ಸಾಧಿಸುವಲ್ಲಿ ನೀವು ವಿಫಲವಾದರೆ ತಂತ್ರವನ್ನು ಬದಲಿಸಿ ಹೊರತು ಗುರಿಯನ್ನಲ್ಲ. ನೀವು ಮಾಡಬೇಕಾದ ಎಲ್ಲವನ್ನು ಮಾಡಿ ಆದರೆ ದುರಾಸೆಯಿಂದ ಅಲ್ಲ, ಅಹಂಕಾರದಿಂದ ಅಲ್ಲ, ಕಾಮದಿಂದ ಅಲ್ಲ, ಅಸೂಯೆಯಿಂದಲೂ ಅಲ್ಲ ಬದಲಾಗಿ ಪ್ರೀತಿ, ಕರುಣೆ, ನಮ್ರತೆ ಮತ್ತು ಭಕ್ತಿಯಿಂದ ಮಾಡಿ ಬದುಕಿನಲ್ಲಿ ಏನೇ ನಡೆದರೂ ಒಳ್ಳೆಯದೇ ವರ್ತಮಾನದಲ್ಲಿ ಏನಾ ಗುತ್ತಿದೆ ಅದೆಲ್ಲವೂ ಉತ್ತಮವಾಗಿಯೇ ನಡೆಯುತ್ತಿದೆ ಮುಂದೆ ಏನಾ ಗುವುದು ಅದು ಕೂಡ ಚೆನ್ನಾಗಿರುತ್ತದೆ ಭವಿಷ್ಯದ ಬಗ್ಗೆ ಚಿಂತಿಸಬೇಡಿ ವರ್ತಮಾನದಲ್ಲಿ ಜೀವಿಸಿ. ಅರ್ಜುನ ಕೃಷ್ಣನನ್ನು ಕೇಳುತ್ತಾನೆ ಎಲ್ಲವೂ ಹಣೆಬರಹದಲ್ಲಿ ಬರೆದ ಹಾಗೆ ನಡೆದರೆ ಪ್ರಯತ್ನಮಾಡಿ ಫಲವೇನು ಎಂದು ಅದಕ್ಕೆ ಶ್ರೀಕೃಷ್ಣನ ಉತ್ತರಿಸುತ್ತಾರೆ ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆಬರಹದಲ್ಲಿ ಬರೆದಿರಬಹುದು ಅಲ್ಲವೆ ಎಂದು.