ಕುಕ್ಕೆ ಸುಬ್ರಮಣ್ಯದಲ್ಲಿದೆ ತೆರೆಯಲಾಗದ ರಹಸ್ಯ ಪೆಟ್ಟಿಗೆ,ಈ ಪೆಟ್ಟಿಗೆಯ ಶಕ್ತಿ ಎಂತದ್ದು ಗೊತ್ತಾ ? ನೀವು ಇಲ್ಲಿತನಕ ಅರಿಯದ ಸತ್ಯ ಇದು » Karnataka's Best News Portal

ಕುಕ್ಕೆ ಸುಬ್ರಮಣ್ಯದಲ್ಲಿದೆ ತೆರೆಯಲಾಗದ ರಹಸ್ಯ ಪೆಟ್ಟಿಗೆ,ಈ ಪೆಟ್ಟಿಗೆಯ ಶಕ್ತಿ ಎಂತದ್ದು ಗೊತ್ತಾ ? ನೀವು ಇಲ್ಲಿತನಕ ಅರಿಯದ ಸತ್ಯ ಇದು

ಸಂಪುಟ ನರಸಿಂಹ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ಒಮ್ಮೆಯಾದರೂ ಈ ದೇವಾಲಯಕ್ಕೆ ಭೇಟಿ ನೀಡಿ ಇಲ್ಲಿನ ಪವಾಡಗಳನ್ನು ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತದೆ…ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತ ದೇಶದಲ್ಲಿಯೇ ತುಂಬಾ ಖ್ಯಾತಿ ಪಡೆದಂತಹ ಹಾಗೂ ಬಹಳಷ್ಟು ಭಕ್ತಾದಿಗಳು ತುಂಬಾನೇ ನಂಬಿಕೆಯಿಂದ ನಡೆದುಕೊಳ್ಳುವಂತಹ ಪುಣ್ಯಕ್ಷೇತ್ರವಾಗಿದೆ. ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದಂತಹ ಪ್ರಸಿದ್ಧವಾದಂತಹ ಪುರಾತನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗ ದೋಷ, ಕಾಳ ದೋಷ, ರಾಹು ಮತ್ತು ಕುಜ ದೋಷಗಳ ಪರಿಹಾರಕ್ಕೆಂದು ಲಕ್ಷಾಂತರ ಭಕ್ತಾದಿಗಳು ಈ ಒಂದು ಪುಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವಂತಹ ಪ್ರತಿಯೊಬ್ಬ ಭಕ್ತಾದಿಗಳು ಕೂಡ ಇಲ್ಲಿರುವಂತಹ ಶ್ರೀ ಕುಮಾರಧಾರ ನದಿಯಲ್ಲಿ ಪವಿತ್ರ ತೀರ್ಥ ಸ್ಥಾನವನ್ನು ಮಾಡಿ ಇಲ್ಲಿರುವಂತಹ ಮುಖ್ಯವಾದಮಂತಹ ಶ್ರೀ ಆದಿ ಸುಬ್ರಹ್ಮಣ್ಯ ದೇವಾಲಯ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿಯನ್ನು ನೀಡುತ್ತಾರೆ.

ಇಲ್ಲಿಗೆ ಬಂದಂತಹ ಭಕ್ತಾದಿಗಳು ಈ ಎರಡು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಮಾಡಿ ತಮ್ಮ ಜೀವನವನ್ನು ಪವನ ಮಾಡಿಕೊಳ್ಳುತ್ತಾರೆ. ಆದರೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋದಂತಹ ಭಕ್ತಾದಿಗಳು ಮತ್ತೊಂದು ದೇವಾಲಯಕ್ಕೆ ಬೇಕಾಗಿರುತ್ತದೆ. ಆದರೆ ಹೆಚ್ಚಿನ ಭಕ್ತಾದಿಗಳಿಗೆ ಈ ದೇಗುಲದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಾಗಾಗಿ ಇಂದು ನಿಮಗೆ ಈ ಒಂದು ದೇವಾಲಯದ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ. ನೀವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದಾಗ ನಾವು ತಿಳಿಸುವಂತಹ ದೇವಾಲಯಕ್ಕೆ ಭೇಟಿ ನೀಡಿ. ಈ ರೀತಿ ಭೇಟಿ ನೀಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಕೂಡ ಪರಿಹಾರವನ್ನು ಕಂಡುಕೊಳ್ಳಬಹುದು ಅಷ್ಟೇ ಅಲ್ಲದೆ ನಿಮ್ಮ ಇಷ್ಟಾರ್ಥಗಳು ಕೂಡ ಈಡೇರುತ್ತದೆ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾವು ಹೇಳುವಂತಹ ಈ ದೇವಾಲಯವೂ ಕೂಡ ತುಂಬಾ ಪ್ರಸಿದ್ಧವಾದ ದೇವಾಲಯವಾಗಿದೆ.

WhatsApp Group Join Now
Telegram Group Join Now


crossorigin="anonymous">