ಊಟಕ್ಕಿಂತ ಮುಂಚೆ ಇದನ್ನು ಬಾಯಲ್ಲಿ ಹಾಕಿ ಚಪ್ಪರಿಸಿ ಕೊಬ್ಬು ಮಂಜಿನಂತೆ ಕರಗಿ ಹೋಗುತ್ತದೆ.ದೇಹದ ತೂಕ ಇತ್ತೀಚಿನ ದಿನದಲ್ಲಿ ಎಲ್ಲರಿಗೂ ಕೂಡ ಕಾಡುತ್ತಿರುವಂತಹ ಒಂದು ಕಾಯಿಲೆ ಅಂತ ಹೇಳಿದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಕೂಡ ಅತಿಯಾದ ಬೊಜ್ಜಿನ ಸಮಸ್ಯೆಯನ್ನು ಅನುಭವಿಸುತ್ತಾರೆ ಅಷ್ಟೇ ಅಲ್ಲದೆ ಈ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಬಯಸುತ್ತಾರೆ. ಆದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಭರದಲ್ಲಿ ದೇಹಕ್ಕೆ ಅಡ್ಡಪರಿಣಾಮಗಳು ಉಂಟಾಗುವಂತೆ ಮಾಡಿಕೊಳ್ಳುತ್ತಾರೆ. ಅಂದರೆ ಅತಿಯಾದ ವ್ಯಾಯಾಮ, ಉಪವಾಸ ಇರುವುದು, ಡಯೆಟ್ ಪದ್ಧತಿ ಅನುಸರಿಸುವುದು ಈ ರೀತಿಯಾದಂತಹ ಕೃತ್ಯಗಳನ್ನು ಮಾಡುವುದರಿಂದ ದೇಹಕ್ಕೆ ಅಡ್ಡಪರಿಣಾಮಗಳು ಉಂಟಾಗುತ್ತದೆ. ಹಾಗಾಗಿ ಈ ಎಲ್ಲಾ ಪದ್ಧತಿಗಳನ್ನು ಬಿಟ್ಟು ಆಯುರ್ವೇದದಲ್ಲಿ ಇರುವಂತಹ ಒಂದೇ ಒಂದು ಸೂತ್ರವನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಹದ ತೂಕದ ಬಾಧೆಯನ್ನು ಇಂದೆ ನಿವಾರಣೆ ಮಾಡಿಕೊಳ್ಳಬಹುದು.
ಹಾಗಾದರೆ ಆ ಸೂತ್ರ ಯಾವುದು ಯಾವ ಪದಾರ್ಥವನ್ನು ನಾವು ಪ್ರತಿನಿತ್ಯ ಸೇವಿಸಿದರೆ ದೇಹದ ತೂಕ ಕಡಿಮೆಯಾಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಪ್ರತಿನಿತ್ಯ ಊಟ ಮಾಡುವುದಕ್ಕಿಂತ ಮುಂಚೆ ನೀವು ಸ್ವಲ್ಪ ಹಸಿ ಶುಂಟಿಗೆ ಸ್ವಲ್ಪ ಸೈಂಧವ ಲವಣವನ್ನು ಹಾಕಿ ಇದನ್ನು ಬಾಯಲ್ಲಿ ಹಾಕಿ ಊಟಕ್ಕಿಂತ ಮುಂಚೆ ಅರ್ಧ ಗಂಟೆಯ ಮುಂಚೆ ಚಪ್ಪಲಿಸಬೇಕು. ಈ ರೀತಿ ಮಾಡುವುದರಿಂದ ಲಾಲರಸ ಉತ್ಪತ್ತಿಯಾಗುತ್ತದೆ ಇದು ನಮ್ಮ ಜಠರಕ್ಕೆ ಹೋಗಿ ಸೇರಿದಾಗ ಹಸಿವು ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ನಾವು ಇದಕ್ಕೂ ಮುಂಚೆ ತಿಂದಂತಹ ಪದಾರ್ಥಗಳು ಜೀರ್ಣವಾಗಿರುತ್ತದೆ. ಇದರಿಂದ ದೇಹದಲ್ಲಿ ಯಾವುದೇ ಕಾರಣಕ್ಕೂ ಕೊಬ್ಬು ಸಂಗ್ರಹಣೆ ಆಗುವುದಿಲ್ಲ ಈ ಒಂದು ಸಣ್ಣ ಕೆಲಸ ಮಾಡಿ ನೋಡಿ.