ನಾಲ್ಕು ತಿಂಗಳ ಗರ್ಭಿಣಿ ಅಮೃತ ಅವರು ಇದೀಗ ಸಮನ್ವಯ ಬಗ್ಗೆ ಎಲ್ಲರಲ್ಲೂ ಕೂಡ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಸಮನ್ವಿ ಎಲ್ಲರನ್ನು ಬಿಟ್ಟು ಹೋಗಿ ಇಂದಿಗೆ ಮೂರು ದಿನ ಆಯಿತು ಆದರೂ ಕೂಡ ಹೀಗೆ ನಮ್ಮನ್ನು ಬಿಟ್ಟು ಹೋದಂತಹ ನೋವು ಈಗಲೂ ಕೂಡ ನಮ್ಮನ್ನು ಕಾಡುತ್ತಿದೆ. ಇನ್ನೂ ಸಮನ್ವಿಯ ಅವರ ತಾಯಿ ಆದಂತಹ ಅಮೃತ ನಾಯ್ಡು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳು ಆದಂತಹ ವಾಟ್ಸಪ್, ಇನ್ಸ್ಟಾಗ್ರಾಂ, ಹಾಗೂ ಫೇಸ್ಬುಕ್ ಖಾತೆಗಳಲ್ಲಿ ತಮ್ಮ ಅಭಿಮಾನಿಗಳಲ್ಲಿ ಒಂದು ವಿನಂತಿ ಕೋರಿದ್ದಾರೆ. ಹೌದು ನಟಿ ಅಮೃತ ನಾಯ್ಡು ಅವರು ಅಭಿಮಾನಿಗಳಲ್ಲಿ ಯಾವ ಬೇಡಿಕೆಯನ್ನು ಇಟ್ಟಿದ್ದಾರೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಅವರ ವಾಟ್ಸಪ್ ಸ್ಟೇಟಸ್ ಈ ರೀತಿ ಇದೆ ನೋಡಿ ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಿಗೂ ನನ್ನದೊಂದು ಪ್ರಾರ್ಥನೆ.
ಈಗ ನಾಲ್ಕು ತಿಂಗಳ ಗರ್ಭಿಣಿ ಹಾಗೂ ನನ್ನ ಮುದ್ದು ಕಂದಮ್ಮ ಸಮನ್ವಿಗಾಗಿ ಈ ತಾಯಿ ಜೀವ ಕಾಯುತ್ತಿದೆ ದಯಮಾಡಿ ಒಂದು ಸಹಾಯ ಮಾಡಿ ಆ ಭಗವಂತನಲ್ಲಿ ಪ್ರಾರ್ಥಿಸಿ ನಿಮ್ಮ ಪ್ರಾರ್ಥನೆ ಒತ್ತಾಯದಿಂದ ಆದರೂ ನನ್ನ ಮುದ್ದು ಕಂದಮ್ಮನನ್ನು ಭಗವಂತ ಮರಲಿ ಕಳುಹಿಸಿ ಬಿಡಲಿ. ನಾನು ಗರ್ಭದಲ್ಲಿ ಜೋಪಾನಮಾಡಿ ಕಾಪಾಡಿಕೊಳ್ಳುವ ದಯಮಾಡಿ ಈ ತಾಯಿಯ ಕರೆಗೆ ಕೈ ಜೋಡಿಸಿ ಸಮನ್ವಿಯ ಪುನಃ ಬರುವಿಕೆಗಾಗಿ ಸಹಾಯ ಮಾಡಿ ಪ್ರಾರ್ಥಿಸಿ ಅವಳೇ ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ ದಯವಿಟ್ಟು ಈ ಒಂದು ಕೋರಿಕೆಯನ್ನು ನೆರವೇರಿಸಿ. ಈ ರೀತಿಯಾಗಿ ನಟಿ ಅಮೃತ ನಾಯ್ಡು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಆದಂತಹ ವಾಟ್ಸಪ್ ಇನ್ಸ್ಟಾಗ್ರಾಮ್ ಗಳಲ್ಲಿ ಬರೆದುಕೊಂಡಿದ್ದಾರೆ ಇದನ್ನು ನೋಡಿದ ಅಭಿಮಾನಿಗಳು ತುಂಬಾನೇ ಸಂಕಟವನ್ನೂ ವ್ಯಕ್ತಪಡಿಸಿದ್ದಾರೆ.