ನಟಿ ಅಮೂಲ್ಯ ಅವರ ಸೀಮಂತ ಶಾಸ್ತ್ರದ ಅದ್ದೂರಿ ಫೋಟೋಗಳು ನೋಡಿ ಎಷ್ಟು ಚೆನ್ನಾಗಿದೆ…ನಟಿ ಅಮೂಲ್ಯ ಅವರು 2017 ರಲ್ಲಿ ಜಗದೀಶ್ ಎಂಬುವವರನ್ನು ಮದುವೆಯಾದರು ಕೆಲವು ತಿಂಗಳ ಹಿಂದೆಯಷ್ಟೇ ತಾವು ತಾಯಿಯಾಗುತ್ತಿರುವಂತಹ ಸಿಹಿ ಸುದ್ದಿಯನ್ನು ಫೋಟೋ ಶೂಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದರು. ಇಂದು ಕುಟುಂಬದವರು ಹಾಗೂ ಸ್ನೇಹಿತರು ಹಾಗೂ ತಮ್ಮ ಆಪ್ತರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರವು ನಡೆದಿದೆ. ನಟಿ ಅಮೂಲ್ಯ ಅವರು ಚೆಲುವಿನ ಚಿತ್ತಾರ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದರು. ಇದಕ್ಕೂ ಮೊದಲು ನಟಿ ಅಮೂಲ್ಯ ಅವರು ಬಾಲನಟಿಯಾಗಿ ಹಲವಾರು ಸಿನಿಮಾಗಳಲ್ಲಿ ಅಭಿನಯ ಮಾಡಿದರು. ಆದರೆ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ ಅಂದರೆ ಅದು ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಯಕನಟನಾಗಿ ಅಭಿನಯಿಸಿದ ಚೆಲುವಿನ ಚಿತ್ತಾರ ಅಂತಾನೆ ಹೇಳಬಹುದು. ಈ ಒಂದು ಸಿನಿಮಾದಲ್ಲಿ ನಟನೆ ಮಾಡಿದ ನಂತರ ಸಿನಿಮಾರಂಗದಲ್ಲಿ ಹಲವಾರು ಅವಕಾಶಗಳು ದೊರೆಯುತ್ತವೆ. ಸಿನಿಮಾಗಳಲ್ಲಿ ಇವರು ನಾಯಕ ನಟಿಯಾಗಿ ಮಿಂಚುತ್ತಾರೆ.
ತದನಂತರ ಜಗದೀಶ್ ಎಂಬುವವರನ್ನು ಮದುವೆಯಾಗುತ್ತಾರೆ ಮದುವೆಯಾದ ನಂತರ ಅವರು ಯಾವುದೇ ಸಿನಿಮಾದಲ್ಲಿ ಕೂಡ ಭಾಗವಹಿಸುವುದಿಲ್ಲ. ಸಂಪೂರ್ಣವಾಗಿ ತಮ್ಮ ಕುಟುಂಬದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಮದುವೆಯಾದ ನಾಲ್ಕು ವರ್ಷದಿಂದ ಯಾವುದೇ ರೀತಿಯಾದಂತಹ ಸಿಹಿಸುದ್ದಿಯನ್ನು ನೀಡಿರಲಿಲ್ಲ. ಆದರೆ ಕಳೆದ ತಿಂಗಳಷ್ಟೇ ತಾವು ತಾಯಿಯಾಗುತ್ತಿರುವಂತಹ ಸಿಹಿಸುದ್ದಿಯನ್ನು ಮಾಧ್ಯಮದವರಿಗೆ ಹಾಗೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ನೋಡಿದಂತಹ ಅಭಿಮಾನಿಗಳು ತುಂಬಾನೇ ಸಂತಸವನ್ನು ವ್ಯಕ್ತಪಡಿಸಿದ್ದರು. ಇದೀಗ ಅದ್ದೂರಿಯಾಗಿ ಶಾಸ್ತ್ರವನ್ನು ಮಾಡಿಕೊಂಡಿದ್ದಾರೆ ಇದನ್ನು ನೋಡಿದ ಅಭಿಮಾನಿಗಳು ಅಮೂಲ್ಯ ಅವರಿಗೆ ಹಾಗೂ ಅವರ ಹೊಟ್ಟೆಯಲ್ಲಿ ಇರುವಂತಹ ಮಗುವಿಗೆ ಶುಭವನ್ನು ಹಾರೈಸಿದರು. ಸದ್ಯಕ್ಕೆ ಅಮೂಲ್ಯ ಅವರ ಸೀಮಂತ ಶಾಸ್ತ್ರದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.