ಎಲ್ಲರಲ್ಲಿಯೂ ಕ್ಷಮೆ ಕೇಳಿದ ಲಾಯರ್ ಜಗದೀಶ್. ಹೇಗೆ ಕೇಳದ ಕಾರಣವೇನೆಂದು ನೀವೇ ನೋಡಿ.ಲಾಯರ್ ಜಗದೀಶ್ ಇತ್ತೀಚಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ತುಂಬ ಸಕ್ರಿಯವಾಗಿರುವ ಫೇಮಸ್ ಲಾಯರ್. ಸಾಮಾಜಿಕ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ಇವರು ದೊಡ್ಡ ದೊಡ್ಡ ವ್ಯಕ್ತಿಗಳ ಕೇಸನ್ನು ತೆಗೆದುಕೊಂಡು ಅವರುಗಳ ವಿರುದ್ಧ ನೊಂದಯವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಕಳೆದ ವರ್ಷ ಸಿಡಿ ಲೇಡಿಯ ವಿಷಯದಲ್ಲಿ ಅವರಿಗೆ ತುಂಬಾ ಸಪೋರ್ಟಿವ್ ಆಗಿದ್ದ ಲಾಯರ್ ಜಗದೀಶ್ ಅವರು ಅವಾಗ್ಲಿಂದ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದರು. ಇದರಿಂದಲೇ ಕರ್ನಾಟಕದ ಜನತೆಗೆ ಫೇಸ್ಬುಕ್ ಲೈವ್ ಗಳಿಂದಲೇ ಚಿರಪರಿಚಿತರು ಎಂದೇ ಹೇಳಬಹುದು. ಇತ್ತೀಚೆಗೆ ಕಳೆದ ತಿಂಗಳಿಂದ ಅವರು ರವಿ ಡಿ ಚೆನ್ನಣ್ಣನವರ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಇದೆ ಎಂದು ಹೇಳಿದ್ದರು ಈ ವಿಷಯ ಪ್ರಸ್ತಾಪವಾದಾಗ ರವಿ ಡಿ ಚನ್ನಣ್ಣನವರ್ ಅವರ ಅಭಿಮಾನಿಗಳು ಹಾಗೂ ಜಗದೀಶ್ ನಡುವೆ ಒಂದು ರೀತಿಯ ಮಾತಿನ ಚಕಮಕಿ ಫೇಸ್ಬುಕ್ನಲ್ಲಿ ನಡೆಯುತ್ತಿದೆ ಎಂದು ಹೇಳಬಹುದು.
ಹಲವಾರು ಅಭಿಮಾನಿಗಳು ಜಗದೀಶ್ ಅವರಿಗೂ ಸಹ ಇದ್ದಾರೆ. ಅವರುಗಳು ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಿರುವ ಜಗದೀಶ್ ಅವರಿಗೆ ಬೆಂಬಲವಾಗಿದ್ದಾರೆ. ನೆನ್ನೆ ಬೆಳಗ್ಗೆ ಕೋರ್ಟ್ ಆವರಣದಲ್ಲಿ ಅದ ಗಲಾಟೆಯಲ್ಲಿ ಕೆಲವು ಜಗದೀಶ್ ಅವರ ವಿರುದ್ಧ ಇರುವ ಅಡ್ವಕೇಟ್ ಗಳು ಜಗದೀಶ್ ಅವರ ಮಗನಿಗೆ ಹೊಡೆದಿದ್ದಾರೆ. ಇದರಿಂದ ಬೇಸರಗೊಂಡ ಅವರು ಫೇಸ್ಬುಕ್ ಲೈವ್ ಬಂದು ತೊಂದರೆಕೊಟ್ಟ ಅಡ್ವೋಕೇಟ್ ಗಳ ವಿರುದ್ಧ ಕೆಟ್ಟ ಭಾಷೆಯನ್ನು ಬಳಸಿ ನಿಂದಿಸಿದ್ದಾರೆ ಹಾಗೂ ಕೋರ್ಟ್ ಆವರಣದಲ್ಲಿ ಶಾಂತಿಯನ್ನು ಕಾಪಾಡದ ಆಡಳಿತಾಧಿಕಾರಿ ವಿರುದ್ಧ ಕೂಡ ಕೋಪಗೊಂಡಿದ್ದಾರೆ. ಹಾಗೂ ಇದಕ್ಕೆ ಸಂಬಂಧಪಟ್ಟ ಹಾಗೆ ಎಲ್ಲಾ ಸಾಕ್ಷಿಗಳನ್ನು ತೆಗೆದುಕೊಂಡು ಚೀಫ್ ಜಸ್ಟಿಸ್ ಅವರ ಬಳಿ ದೂರು ದಾಖಲಿಸಿದ್ದಾರೆ.
ಇದರ ಸಂಬಂಧವಾಗಿ ಬೆಳಿಗ್ಗೆ ಮತ್ತೆ ಲೈವ್ಗೆ ಬಂದ ಅವರು ನಡೆದುಕೊಂಡ ರೀತಿಯ ಬಗ್ಗೆ ಹಾಗೂ ಅವರು ಬಳಸಿದ ಪದ ಬಳಕೆ ಬಗ್ಗೆ ಸ್ವತಃ ಅವರೇ ಬೇಸರಗೊಂಡಿದ್ದಾರೆ.ಅವರ ಮಗನೊಂದಿಗೆ ಕೋರ್ಟ್ ಆವರಣದಲ್ಲಿ ಅಡ್ವಕೇಟ್ಗಳು, ಪೊಲೀಸರು ನಡೆದುಕೊಂಡ ವರ್ತನೆಯ ಬಗ್ಗೆ ಬೇಸರಗೊಂಡು ಈ ರೀತಿ ನಡೆದುಕೊಂಡೆ ನಾನು ಆರು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಇದ್ದೆ ಆದರೆ ಯಾವತ್ತಿಗೂ ಈ ರೀತಿ ಮಾತನಾಡಿರಲಿಲ್ಲ. ಇದರಿಂದ ನನ್ನ ಅಭಿಮಾನಿಗಳಿಗೆ ಬೇಸರವಾಗಿದ್ದರೆ ಕ್ಷಮಿಸಿ ಮತ್ತು ಅದರಿಂದಾದ ಮುಂದಿನ ಬೆಳವಣಿಗೆಗಳ ಬಗ್ಗೆ ಹೇಳಿಕೊಂಡಿದ್ದಾರೆ.ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.