ಮಕರ ರಾಶಿ ಮಾರ್ಚ್ 2022 ಹಣಕಾಸು,ವೃತ್ತಿ ಜೀವನ,ಸಂಪೂರ್ಣ ರಾಶಿ ಭವಿಷ್ಯ ಶುಭ ಲಾಭ ಹೇಗಿರಲಿದೆ ನೋಡಿ.. » Karnataka's Best News Portal

ಮಕರ ರಾಶಿ ಮಾರ್ಚ್ 2022 ಹಣಕಾಸು,ವೃತ್ತಿ ಜೀವನ,ಸಂಪೂರ್ಣ ರಾಶಿ ಭವಿಷ್ಯ ಶುಭ ಲಾಭ ಹೇಗಿರಲಿದೆ ನೋಡಿ..

ಮಕರ ರಾಶಿಯವರ 2022 ಮಾರ್ಚ್ ತಿಂಗಳ ರಾಶಿಫಲ..ನಮಸ್ತೆ ಸ್ನೇಹಿತರೆ, ಮಕರ ರಾಶಿಯ ಮಾರ್ಚ್ ತಿಂಗಳ ರಾಶಿ ಭವಿಷ್ಯವನ್ನು ತಿಳಿಯೋಣ ಬನ್ನಿ. ಇದು ರಾಶಿಚಕ್ರದ ಹತ್ತನೆಯ ಜ್ಯೋತಿಷ್ಯ ಚಿನ್ಹೆ. ಉತ್ತರಾಷಾಡ ನಕ್ಷತ್ರದ 2 3 ಮತ್ತು 4ನೇ ಪಾದ ಗಳು, ಶ್ರವಣ ನಕ್ಷತ್ರದ 4 ಪಾದಗಳು, ಧನಿಷ್ಠ ನಕ್ಷತ್ರ 1 ಮತ್ತು 2ನೇ ಪಾದಗಳಲ್ಲಿ ಜನಿಸಿದವರು, ಮಕರ ರಾಶಿಯಲ್ಲಿ ಬರುತ್ತಾರೆ. ಶನಿ ಈ ರಾಶಿ ಅಧಿಪತಿಯಾಗಿರುತ್ತಾನೆ. ನಿಮ್ಮ ಕುಟುಂಬ ಮತ್ತು ಸಂಬಂಧ, ಮಕ್ಕಳ ಆರೋಗ್ಯ, ವಿಷಯಕ್ಕೆ ಸಂಬಂಧಿಸಿದಂತೆ ನೀವು ಗಮನ ಹರಿಸಬೇಕಾಗುತ್ತದೆ, ಇಲ್ಲವಾದರೆ ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಭಾವನೆಯನ್ನು ಅರಿತುಕೊಳ್ಳಿ, ನಿಮ್ಮ ಸಂಗಾತಿಗೆ ಜೀವನದಲ್ಲಿ ಅಂತರದ ಅವಶ್ಯಕತೆ ಇರುತ್ತದೆ. ಬಹಳ ದಿನಗಳಿಂದ ವಧು-ವರರ ಅನ್ವೇಷಣೆ ಯಲ್ಲಿ ಇರುವವರಿಗೆ ಶುಭ ಸುದ್ದಿ ಸಿಗಲಿದೆ. ಪೋಷಕರಿಗೆ ನಿಮ್ಮ ಸಹಾಯದ ಅವಶ್ಯಕತೆ ಇರುತ್ತದೆ.ಮಕರ ರಾಶಿಯವರು ಯಾವಾಗಲೂ ಶಾಂತವಾಗಿರಲು ಪ್ರಯತ್ನಿಸಿ ಕಾಳಜಿ ಮತ್ತು ಪ್ರೀತಿಯಿಂದ ಸನ್ನಿವೇಶಗಳನ್ನು ನಿಭಾಯಿಸಿ. ಈ ಮಾರ್ಚ್ ತಿಂಗಳು ಸಕಾರಾತ್ಮಕವಾಗಿದ್ದು ನೀವು ಸಮತೋಲನದಲ್ಲಿ ಇರುತ್ತೀರಾ. ಇನ್ನು ಆರೋಗ್ಯ ವಿಚಾರಕ್ಕೆ ಬಂದರೆ ನಿಮ್ಮ ಲಗ್ನದ ಮನೆಯಲ್ಲಿ ಗುರುಗ್ರಹ ಇರುವುದರಿಂದ ನೀವು ಶಕ್ತಿಯುತವಾಗಿರುತ್ತೀರಾ.

ಮತ್ತು ನಿಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೊಂದಿರುತ್ತೀರಿ, ದೈಹಿಕ ಅನಾರೋಗ್ಯದಿಂದ ಚೇತರಿಕೆ ಕಾಣಬಹುದಾಗಿದೆ. ಈ ತಿಂಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ಥಿರವಾಗಿರುತ್ತೀರಾ. ಈ ಮಾರ್ಚ್ ತಿಂಗಳು ಮಕರ ರಾಶಿಯಲ್ಲಿರುವ ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಎದುರಾಗಬಹುದು ಮತ್ತು ಕಲಿಕಾ ಸಾಮರ್ಥ್ಯ ಕಡಿಮೆಯಾಗಬಹುದು. ಶಿಕ್ಷಣದಲ್ಲಿ ಹಿಂದುಳಿಯಬಹುದು, ಆದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವವರಿಗೆ ಸ್ವಲ್ಪಮಟ್ಟಿಗೆ ಯಶಸ್ಸು ಕಾಣಬಹುದಾಗಿದೆ. ಆದರೆ ಸ್ಪರ್ಧೆ ತೀವ್ರ ಆಗುತ್ತಿರುವುದರಿಂದ ಕಠಿಣ ಪರಿಶ್ರಮ ಮಾಡಬೇಕು. ಈ ರಾಶಿಯವರು ವೃತ್ತಿ ಜೀವನದಲ್ಲಿ ಕೆಲಸದ ಒತ್ತಡವನ್ನು ಎದುರಿಸಬೇಕಾಗುತ್ತದೆ. ಆದರೆ ಈ ಒತ್ತಡದ ಕೆಲಸದಿಂದ ನೀವು ಕೊನೆಯಲ್ಲಿ ಲಾಭ ಪಡೆಯಬಹುದಾಗಿದೆ. ಆದರೆ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ರಹಸ್ಯವನ್ನು ಹೇಳಿಕೊಳ್ಳಬೇಡಿ ಮುಂದೊಂದು ದಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಬಹುಮೂಲದಿಂದ ಬರುವ ಆದಾಯದಿಂದ ನಿಮ್ಮ ಹಣಬಲ ಪ್ರಬಲವಾಗಿದೆ. ಆದರೆ ವೆಚ್ಚ ಸಹ ತ್ವರಿತವಾಗಿ ಇರುತ್ತದೆ ಇದನ್ನು ತಪ್ಪಿಸಲು ದುಂದುವೆಚ್ಚದ ಬಗ್ಗೆ ಗಮನಹರಿಸಬೇಕಾಗುತ್ತದೆ. ಈ ರಾಶಿಯವರು ಸ್ಥಿರಾಸ್ತಿಗಳ ಮೇಲೆ ಹೂಡಿಕೆ ಮಾಡಬಹುದು ಎಂದು ಹೇಳಬಹುದಾಗಿದೆ. ನಿಮ್ಮ ಕಷ್ಟ ಬಗೆಹರಿಯಲು ಸುಬ್ರಹ್ಮಣ್ಯ ಸ್ವಾಮಿ ಪೂಜೆ ಮಾಡಿ. ಮಂಗಳವಾರದಂದು ನಿಮ್ಮ ಮನೆ ದೇವರಿಗೆ ಸಿಹಿ ಪದಾರ್ಥವನ್ನು ನೈವೇದ್ಯ ನೀಡಿ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

WhatsApp Group Join Now
Telegram Group Join Now
[irp]


crossorigin="anonymous">