ನಾನು ಯಾಕೆ ಮಾಡನ್ ಬಟ್ಟೆಗಳನ್ನು ಧರಿಸುವುದಿಲ್ಲ ಸುಧಾಮೂರ್ತಿಯವರ ಒಂದೊಳ್ಳೆ ಮಾತು ಕೇಳಿ.ನಮಸ್ತೆ ಸ್ನೇಹಿತರೆ, ಸುಧಾಮೂರ್ತಿ. ಈ ಹೆಸರು ಕೇಳಿದರೆ ಸಾಕು ಎಂಥವರಿಗಾದರೂ ಅವರ ಮೇಲಿನ ಗೌರವ ಹೆಚ್ಚುವುದು. ಅವರ ವ್ಯಕ್ತಿತ್ವವೇ ಅಂಥದ್ದು ಇನ್ಫೋಸಿಸ್ ಎಂಬ ಸಂಸ್ಥೆಯನ್ನು ಅವರ ಪತಿ ನಾರಾಯಣ ಮೂರ್ತಿಯವರು ಕಟ್ಟಿದರೆ ಅವರು ಕಂಪನಿ ಸ್ಥಾಪಿಸಲು ನೆರವಾದರು ಸುಧಾಮೂರ್ತಿ. ಲೇಖಕಿ, ಚಿಂತಕಿ, ಸಮಾಜ ಸೇವಕಿಯಾಗಿರುವ ಸುಧಾಮೂರ್ತಿಗಳು ಮಾತುಗಳು ಜನರ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ, ಏಕೆಂದರೆ ಆ ಮಾತುಗಳು ಸತ್ಯಕ್ಕೆ ಅಷ್ಟೊಂದು ಹತ್ತಿರವಾಗಿರುತ್ತದೆ, ಹೇಗೆ ಬದುಕಬೇಕೆಂದು ತಿಳಿ ಹೇಳುವಂತಿರುತ್ತದೆ. ಕೋಟ್ಯಾಂತರ ರುಪಾಯಿ ವ್ಯವಹಾರ ನಡೆಸುವ ಕಂಪನಿಯ ಒಡತಿಯಾದರೂ ಯಾವುದೇ ಆಡಂಭರವಿಲ್ಲದ. ನೋಡಿದರೆ ಮಧ್ಯಮ ವರ್ಗದ ಗೃಹಿಣಿಯಂತೆ ಕಾಣುವ ಸುಧಾಮೂರ್ತಿ ಅವರ ಬದುಕಿನ ಬಗ್ಗೆ ಹೇಳುವ ಪಾಠಗಳು.ಅವರು ನಡೆದುಕೊಳ್ಳುವ ರೀತಿ ಅನೇಕ ಜನರಿಗೆ ಹೇಗೆ ಬದುಕಬೇಕೆಂಬ ಮಾರ್ಗದರ್ಶನ ನೀಡುವಂತಿರುತ್ತದೆ. ತಾವು ತುಂಬಾ ಸರಳವಾಗಿರುವುದು ಮಾತ್ರವಲ್ಲ.
ತಮ್ಮ ಮಕ್ಕಳನ್ನು ತುಂಬಾ ಸರಳವಾಗಿ ಬೆಳೆಸಿದ ತಾಯಿ. ಒಂದು ರುಪಾಯಿ ಹಣವನ್ನು ಸುಮ್ಮನೆ ವ್ಯರ್ಥ ಮಾಡುವುದಿಲ್ಲ, ಹೀಗೆ ಇರುವ ಸುಧಾ ಮೂರ್ತಿಯವರು ಹೀಗೆ ಒಂದು ಬಾರಿ ನಡೆದ ಸಂದರ್ಶನದಲ್ಲಿ ಒಬ್ಬ ವ್ಯಕ್ತಿಯು ಸುಧಾ ಮೂರ್ತಿ ಅವರಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಉತ್ತರ ನೀಡಿದ ಸುಧಾಮೂರ್ತಿಯವರು ಏನು ಹೇಳುತ್ತಾರೆ ಎಂದು ತಿಳಿಯೋಣ ಬನ್ನಿ. ನಮ್ಮ ಭವ್ಯ ಭಾರತಕ್ಕೆ ಒಂದು ಇತಿಹಾಸ ಹಾಗೆ ಗೌರವ ಸಹ ಇದೆ. ಇವತ್ತಿನ ಸಮಾಜ ಮತ್ತು ಯುವ ಸಮೂಹ ಮಾಡ್ರನ್ ಹೆಸರಿನಲ್ಲಿ ತಮ್ಮ ಉಡುಪುಗಳ ಆಗಲಿ ಅಥವಾ ಜೀವನಶೈಲಿಯ ಆಗಲಿ ತಮ್ಮದೇ ಆದ ದಾರಿಗಳಲ್ಲಿ ನಡೆಯುತ್ತಿದ್ದಾರೆ.
ಆದ್ದರಿಂದ ಇಂದಿನ ಯುವ ಸಮುದಾಯಕ್ಕೆ ಟೆಕ್ನಾಲಜಿ ಜೀವನ ನಡೆಸುವುದಕ್ಕೆ ನಿಮ್ಮ ಒಂದು ಮಾರ್ಗದರ್ಶನ ನೀಡಿ. ಎಂದು ಒಬ್ಬ ವ್ಯಕ್ತಿಯು ಸುಧಾ ಮೂರ್ತಿ ಅವರಿಗೆ ಪ್ರಶ್ನೆಯನ್ನು ಕೇಳುತ್ತಾನೆ. ಆಗ ಉತ್ತರಿಸಿದ ಸುಧಾಮೂರ್ತಿಯವರು ಸಂದೇಶ ನೀಡಲು ನಾನು ಗುರು ಏನಪ್ಪಾ ಎಂದು ಸರಳವಾಗಿ ನುಡಿದರು. ಆಗ ಆ ವ್ಯಕ್ತಿಯು ನಿಮ್ಮ ಅನುಭವದ ಮೇಲೆ ಕೆಲವು ಮಾತುಗಳನ್ನು ಹೇಳಿ ಎಂದು ಕೇಳುತ್ತಾನೆ. ಆಗ ಉತ್ತರಿಸಿದ ಸುಧಾಮೂರ್ತಿಯವರು ನಾನು ಕೆಲವು ದಿನಗಳ ಹಿಂದೆ ಇದರ ಬಗ್ಗೆ ಯೋಚಿಸುತ್ತಿದ್ದೆ. there is effect of soft skill ನಾನು ಕೂಡ ಹಾದಿಯನ್ನು ತುಳಿದು ಬಂದಿದ್ದೇನೆ ಇಲ್ಲಿರುವ ಎಷ್ಟು ಜನ ಹುಡುಗಿಯರು ತಮ್ಮ ತಮ್ಮ ಕಚೇರಿಗೆ ಸೀರೆ ಉಟ್ಟುಕೊಂಡು ಹೋಗುತ್ತೀರಾ ಪ್ರಾಮಾಣಿಕವಾಗಿ ಹೇಳಿ ಎಂದು ಹೇಳಿದರು.