ಭೂಗರ್ಭದಲ್ಲಿ ಅಡಗಿದೆ ಈ ನಿಗೂಢ ಬೃಂದಾವನ.ಶ್ರೀ ಗುರು ರಾಘವೇಂದ್ರ ಸ್ವಾಮಿ ಬೃಂದಾವನಗಳ ಅತಿ ದೊಡ್ಡ ರಹಸ್ಯ..!

ಈ ಬೃಂದಾವನ ದರ್ಶನ ಪಡೆಯಲು ಭೂಮಿಯ ಕೆಳಗೆ ಹೋಗಬೇಕು…!!ನಮಸ್ತೆ ಸ್ನೇಹಿತರೆ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಇರುವುದು ಮಂತ್ರಾಲಯ ಮಂತ್ರಾಲಯವೂ ಹಿಂದೂ ಧಾರ್ಮಿಕ ಸ್ಥಳವಾಗಿದ್ದು ಇಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನ ಇದೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಹಿಂದೂ ಧರ್ಮದಲ್ಲಿ ಪ್ರಭಾವಿ ಸಂತರಾಗಿದ್ದು ಅವರ ವೈಷ್ಣವ ಧರ್ಮವನ್ನು ಮತ್ತು ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ತತ್ವ ಶಾಸ್ತ್ರವನ್ನು ಪ್ರತಿಪಾದಿಸಿದ್ದಾರೆ ಅಂದಹಾಗೆ ಮೂಲ ಬೃಂದಾವನ ಇರುವ ಮಂತ್ರಾ ಲಯವೂ ಆಂಧ್ರಪ್ರದೇಶ ರಾಜ್ಯದ ಕಾರ್ನೋಲ್ ಜಿಲ್ಲೆಯಿಂದ 74km ದೂರದಲ್ಲಿದೆ ಕರ್ನಾಟಕಕ್ಕೆ ಅತೀ ಹತ್ತಿರವಾದಂತಹ ಬೃಂದಾವನ ಆಗಿದೆ ರಾಯಚೂರಿನಿಂದ ಕೇವಲ 44km ದೂರದಲ್ಲಿದೆ ಈ ಮಂತ್ರಾಲಯ ಮಂತ್ರಾಲಯ ಹೊರತಾಗಿ ದಕ್ಷಿಣ ಭಾರತದಲ್ಲಿ ಕೆಲವು ಅನನ್ಯವಾದ ಹಾಗೂ ವಿಶಿಷ್ಠವಾದ ರಾಘವೇಂದ್ರ ಸನ್ನಿಧಿಗಳನ್ನು ನೀವೂ ಕಾಣಬಹುದು ಆ ಕ್ಷೇತ್ರಗಳು ಸಹ ಸಾಕಷ್ಟು ಪವಿತ್ರತೆಯುಳ್ಳ ಗುರುರಾಯರ ಸನ್ನಿಧಾನಗಳಾಗಿವೆ ಎಂದು ಹೇಳಲಾಗಿದೆ ಹಾಗಾದರೆ ಆ ಎರಡನೇ ಮಂತ್ರಾಲಯ ಯಾವುದು ಎಂದು ಈಗ ನಾವು ತಿಳಿಯೋಣ ಈ ಎರಡನೇ ಮಂತ್ರಾಲಯವನ್ನು ದ್ವೀತಿಯ ಮಂತ್ರಾ ಲಯವೆಂದೇ ಭಕ್ತಾದಿಗಳು ಕರೆಯುತ್ತಾರೆ ಸ್ವತಃ ಗುರುರಾಯರೇ ಇಲ್ಲಿ ಆಗಮಿಸಿ ಬೃಂದಾವನ ಪ್ರತಿಷ್ಟಾಪಿಸಿದರೆಂಬ ಪ್ರತೀತಿ ಇದೆ ಒಂದೊಮ್ಮೆ ಭಕ್ತರು

ಮಂತ್ರಾಲಯ ಬೃಂದಾವನದಿಂದ ಮಣ್ಣನ್ನು ತಂದು ಇಲ್ಲಿ ರಾಯರ ಮಠ ನಿರ್ಮಿಸುತ್ತಿದ್ದಾಗ ಸಂತ ವೇಷಧಾರಿಯಲ್ಲಿ ಒಬ್ಬ ಒಳ ಪ್ರವೇಶಿಸುತ್ತಾನೆ ಹೀಗೆ ಒಳಪ್ರವೇಶಿಸಿದ ಆ ಸಂತ ಎಂದಿಗೂ ಹೊರ ಬರುವುದಿಲ್ಲ ನಂತರ ತಿಳಿದ ವಿಷಯವೇನೆಂದರೆ ಅದು ಸ್ವತಃ ಗುರು ರಾಘವೇಂದ್ರ ರಾಯರೇ ಆಗಿದ್ದರೂ ಎಂದು ಇಂದಿಗೂ ಅವರು ತಂದಿದ್ದ ಒಂದು ಪಾತ್ರೆ ಹಾಗೂ ಹನುಮನ ವಿಗ್ರಹವನ್ನು ಇಲ್ಲಿ ಸಂರಕ್ಷಿಸಲಾಗಿದೆ ಇದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿದೆ .ನೆಲದಡಿಯ ರಾಘವೇಂದ್ರ ಸನ್ನಿಧಾನ ಇದು ಸಹ ವಿಶಿಷ್ಠವಾದ ರಾಘವೇಂದ್ರ ಸನ್ನಿಧಾನವಾಗಿದೆ ಇಲ್ಲಿಯ ಬೃಂದಾವನವೂ ಬೇರೆಲ್ಲಾ ಬೃಂದಾವನಗಳಿಗಿಂತ ವಿಶೇಷವಾಗಿದೆ ಯಾಕೆಂದರೆ ಇದು ಭೂಮಿಯ ಒಳಗೆ ಭೂಗರ್ಭದಲ್ಲಿ ನೆಲದಡಿ ಯಲ್ಲಿ ಸ್ಥಿತವಿದ್ದು ನೀವೂ ಈ ಬೃಂದಾವನವನ್ನು ನೋಡಬೇಕೆಂದರೆ 23ಮೆಟ್ಟಿಲು ಗಳನ್ನು ಇಳಿದು ಇಲ್ಲಿಗೆ ತಲುಪಬೇಕು ಈ ಮಠವು ವಿಜಯಪುರ ಪಟ್ಟಣದ ಬಬಲೇಶ್ವರ ರಸ್ತೆಯಲ್ಲಿರುವ ಜೋರಾಪುರ ಪೇಟೆಯಲ್ಲಿ ಸ್ಥಿತವಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ….

WhatsApp Group Join Now
Telegram Group Join Now