ರಾಘವೇಂದ್ರ ರಾಯರ ನಾಲ್ಕು ಅಕ್ಷರದ ಅದ್ಭುತ ಮಹಿಮೆ ಭಕ್ತರು ತಿಳಿಯಬೇಕಾದದ್ದು.ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತಿಯಿಂದ ಮನಸಲ್ಲಿ ನೆನೆಸಿದರೆ ಸಾಕು ನಿಮ್ಮ ಕಷ್ಟಗಳೆಲ್ಲವು ಸಹ ಕರೆಗೆ ಹೋಗುತ್ತದೆ. ರಾಘವೇಂದ್ರ ಸ್ವಾಮಿಗಳ 4 ಅಕ್ಷರದಲ್ಲಿ ಅದ್ಭುತವಾದಂತಹ ಮಹತ್ವವೂ ಅಡಗಿದೆ. ರಾ ಅಂದರೆ ರಾ ಮಾತ್ರದೊಳು ರಾಶಿ ರಾಶಿ ದೋಷಗಳನ್ನು ಕಳೆಯುವುದು ಎಂದು ಅರ್ಥ. ಘಾ ಎಂದೊಡನೆ ಸ್ಥಿರವಾಗಿ ಘನ ಭಕುತಿಯನ್ನು ನೀಡುವುದು ಎಂದು ಅರ್ಥ. ವೇಂ ಎಂದೊಡನೆಯೇ ವೇಗದಿಂದ ಕೊನೆಗಾಣದ ಜನನ ಮರಣ ವನ್ನು ಶೀಘ್ರದಿಂದ ದೂರ ಮಾಡುವುದು ಎಂದು ಅರ್ಥ, ದ್ರಾ ಎಂದೆನಲು ದ್ರವಿನಾರ್ಥ ಕೊಟ್ಟು ಸಲಹುವ ಚತುರ್ವಿಧ ಪುರುಷಾರ್ಥ ಕೊಡುವುದು ಎಂದು ಅರ್ಥ. ರಾಘವೇಂದ್ರ ನಿಮ್ಮ ಅರ್ಥಪೂರ್ಣವಾದ ಹೆಸರಿನ ಮರ್ಮವನ್ನು ಭಕ್ತರು ಅರಿಯದಿದ್ದರೆ ನಿಮ್ಮನ್ನು ಭಕ್ತಿಯಿಂದ ನೆನೆಯುವುದಾದರೂ ಹೇಗೆ.
ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ ಉಚಿತ ಭವಿಷ್ಯ ಖಚಿತ ಪರಿಹಾರ.9901600331
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಪಾಪಗಳೆಲ್ಲವೂ ರಾಶಿರಾಶಿ ಹತ್ತಿಗೆ ಒಂದು ಕಿಡಿ ಬೆಂಕಿ ಹಿಡಿದರೆ ಹೇಗೆ ಸುಟ್ಟು ಭಸ್ಮವಾಗುತ್ತದೆ ಅದೇ ತರಹ ಸಕಲ ದೋಷಗಳಿಗೆ ಒಂದೇ ಅಕ್ಷರ ರಾ. ಮನಸ್ಸಿಗೆ ಬಂದಂತೆ ಆರಾಧಿಸುತ್ತೇವೆ ಸೇವೆ ಮಾಡುತ್ತೇವೆ ಭಕ್ತಿಯ ವಿಶೇಷ ಜ್ಞಾನವೇ ಗೊತ್ತಿಲ್ಲ ಭಕ್ತಿಯೆಂದರೆ ಏನೂ ತಿಳಿಯದ ನಮ್ಮನ್ನು ಭಕ್ತಿಯ ಮನೆಗೆ ತಂದು ಕೂರಿಸಿ ಅದರ ಸಾಕ್ಷಾತ್ಕಾರವನ್ನು ತಿಳಿಸಿಕೊಟ್ಟು ಧನವಾಗಿ ಕಲ್ಲಿನಂತೆ ವಜ್ರದಂತೆ ಕಠಿಣವಾಗಿ, ದೃಢವಾಗಿ ಧನ್ಯವಾದ ಭಕ್ತಿಯನ್ನು ತೋರಿಸುವಾಗ ಘ ಎನ್ನುವ ಮತ್ತೊಂದು ಅಕ್ಷರ. ಮುಂದೆ ಬದುಕುತ್ತೇವೆ ಉಸಿರಾಡುತ್ತೇವೆ ಬಾಳುತ್ತೇವೆ ನೋವು ಅನುಭವಿಸುತ್ತೇವೆ ಸುಖದ ಗುಂಗಿನಲ್ಲಿ ಕಷ್ಟದ ಹಾಸಿಗೆಯಲ್ಲಿ ಒದ್ದಾಡಿ ನಿದ್ದೆ ಬರದೆ ಕಂಗೆಟ್ಟು ಅಂದರೆ ಜನನ, ಮರಣ ಯಾವಕ್ಷಣ ಎಂದು ಅರಿಯದೆ ಪರಿತಪಿಸುತ್ತೇವೆ.
ಅಂತಹ ಜನನ, ಮರಣದ ಬಾಧೆಯನ್ನು ಪರಿಹರಿಸಿ ಶಾಶ್ವತವಾದ ಮುಕ್ತಿಯನ್ನು ಅನುಗ್ರಹಿಸುವ ದಾರಿತೋರಿಸುವ ನಮ್ಮ ಗುರುಗಳು ರಾಯರು ವೇಂ ಎಂದು ಕರೆಸಿಕೊಳ್ಳುತ್ತಾರೆ. ಧರ್ಮ, ಅರ್ಥ, ಕಾಮ, ಮೋಕ್ಷ ಚತುರ್ವಿಧ ಪುರುಷಾರ್ಥ ಧರ್ಮದಿಂದ ಅರ್ಥವನ್ನು ಕೊಟ್ಟು ಇಚ್ಛೆಯಿಂದ ಮೋಕ್ಷವನ್ನು ಕರುಣಿಸಿ ವಾಸ್ತವ ಜೀವನದಲ್ಲಿ ರಾಯರು ಕನಕರಿಗೆ ಮೋಕ್ಷದ ಹಾದಿಯನ್ನು ತೋರಿಸಿಕೊಟ್ಟವರು ಶ್ರೀ ರಾಯರ ನಾಮಧೇಯದಲ್ಲಿ ಇಷ್ಟೊಂದು ಮಹತ್ವ ವಾದಂತಹ ಒಂದು ವಿಶೇಷ ಗುಣಗಳು ಅಡಗಿಕೊಂಡಿದೆ. ರಾಘವೇಂದ್ರ ಸ್ವಾಮಿಗಳನ್ನು ಭಕ್ತಿಯಿಂದ ಆರಾಧನೆ ಮಾಡಿದರೆ ಸಾಕು ಎಲ್ಲ ನಮ್ಮ ಜೀವನದ ಎಲ್ಲಾ ಪಾಪ ನಿವಾರಣೆಯಾಗುತ್ತದೆ.