11 ದಿನ ಒಂದು ಗ್ಲಾಸ್ ಈ ನೀರನ್ನು ಕುಡಿದರೆ ಸಾಕು 65 ವರ್ಷವಾದರೂ 25 ವರ್ಷದ ಯುವಕರಂತೆಆರೋಗ್ಯಯುತವಾಗಿ ಇರುತ್ತಿರ ಗ್ಯಾಸ್ಟಿಕ್ ಅಸಿಡಿಟಿ ಅಜೀರ್ಣ ಸಮಸ್ಯೆ ಸಂಪೂರ್ಣ ದೂರವಾಗುತ್ತದೆ.ಅಮೃತಕ್ಕೆ ಸಮನಾಗಿರುವ ಈ ನೀರನ್ನು ಕುಡಿದರೆ ನೀವು ಜೀವನ ಪರ್ಯಂತ ಆರೋಗ್ಯಯುತವಾಗಿ ಇರುತ್ತೀರ ಅಷ್ಟೇ ಅಲ್ಲದೆ ನೂರು ವರ್ಷವಾದರೂ ಕೂಡ 25 ವರ್ಷದ ಯುವಕರಂತೆ ಶಕ್ತಿಯುತವಾಗಿ ಇರುತ್ತಿರ. ಈಗಂತೂ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ ಈ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಮಾತ್ರೆಗಳನ್ನು ಸೇವಿಸುತ್ತಾರೆ. ಈ ರೀತಿ ಮಾಡುವುದರಿಂದ ದೇಹಕ್ಕೆ ನಾನಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತದೆ ಹಾಗಾಗಿ ನಿಮ್ಮ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳುವಂತಹ ಒಂದು ಅದ್ಭುತವಾದ ಅಮೃತಕ್ಕೆ ಸಮನಾದಂತಹ ಪಾನೀಯವನ್ನು ತಿಳಿಸುತ್ತಿದ್ದೇವೆ. ಈ ಪಾನೀಯವನ್ನು ನೀವು ಸೇವನೆ ಮಾಡಿದರೆ ಖಂಡಿತವಾಗಿಯೂ ಕೂಡ ಎಲ್ಲ ರೀತಿಯಾದಂತಹ ಸಮಸ್ಯೆಗಳು ದೂರಾಗಿ ಸದೃಢವಾದಂತಹ ದೇಹವನ್ನು ಹೊಂದಿರುತ್ತೀರಾ. ಸುಸ್ತು, ಆಯಾಸ, ಬೆನ್ನು ನೋವು, ಕೈಕಾಲು ನೋವು, ಮಂಡಿ ನೋವು, ಈ ರೀತಿ ಕೀಲುಗಳಿಗೆ ಸಂಬಂಧಪಟ್ಟಂತಹ ಎಲ್ಲ ನೋವುಗಳು ಕೂಡ ನಿವಾರಣೆಯಾಗುತ್ತದೆ.
ಹಾಗಾದರೆ ಆ ಮನೆ ಮದ್ದು ಯಾವುದು ಮತ್ತು ಮನೆ ಮದ್ದನ್ನು ತಯಾರಿಸುವ ವಿಧಾನ ಮತ್ತು ಇದನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ಮೊದಲಿಗೆ ಈ ಮನೆ ಮದ್ದು ತಯಾರಿಸುವುದಕ್ಕೆ ನಿಮಗೆ ಬೇಕಾಗುವಂತಹ ಪದಾರ್ಥ ಜೀರಿಗೆ ಜೀರಿಗೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಇರುತ್ತದೆ. ಈ ಜೀರಿಗೆಯಲ್ಲಿ ಇರುವಂತಹ ಸತ್ವಗಳನ್ನು ಕೇಳಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯ ಅನ್ನಿಸಬಹುದು ಆದರೂ ಕೂಡ ಇದು ಸತ್ಯ. ಜೀರಿಗೆಯಲ್ಲಿ ಹಲವರು ವಿಟಮಿನ್ಸ್ ಫೈಬರ್ ಕ್ಯಾಲ್ಸಿಯಂ ಅಂಶಗಳು ಇದೆ ಹೊಟ್ಟೆಗೆ ಸಂಬಂಧ ಪಟ್ಟಂತಹ ನಾನಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ಅದ್ಭುತ ಗುಣಗಳು ಇದರಲ್ಲಿ ಇದೆ.
ಹಾಗಾಗಿ ಪ್ರತಿನಿತ್ಯ ರಾತ್ರಿ ಮಲಗುವುದಕ್ಕಿಂತ ಮುಂಚೆ ಒಂದು ಗ್ಲಾಸ್ ನೀರಿಗೆ ಒಂದು ಟೇಬಲ್ ಸ್ಪೂನ್ ಜೀರಿಗೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದನ್ನು ರಾತ್ರಿ ಪೂರ್ತಿ ನೆನೆಯಲು ಬಿಡಬೇಕು ತದನಂತರ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ದೇಹಕ್ಕೆ ತಂಪು ದೊರೆಯುತ್ತದೆ ಅಷ್ಟೇ ಅಲ್ಲದೆ ಕೈಕಾಲು ನೋವು ಸೊಂಟ ನೋವು ಮಂಡಿ ನೋವು ತಲೆ ನೋವು ಸುಸ್ತು ಆಯಾಸ ಪಿತ್ತ ಇವೆಲ್ಲದಕ್ಕೂ ಕೂಡ ಉಪಶಮನ ಎಂಬುದು ದೊರೆಯುತ್ತದೆ. ಮಳೆಗಾಲ ಅಥವಾ ಚಳಿಗಾಲದಲ್ಲಿ ಜೀರಿಗೆ ನೀರನ್ನು ಹಾಗೆ ಕುಡಿಯುವುದಕ್ಕಿಂತ ಎರಡರಿಂದ ಮೂರು ನಿಮಿಷ ಚೆನ್ನಾಗಿ ಕುದಿಸಿ ಉಗುರು ಬೆಚ್ಚಗೆ ಇರುವಾಗ ಸೇವನೆ ಮಾಡಿ.