ಅಪ್ಪು ಬದುಕಿದ್ದರೆ ಈಗ ಈತನಿಗೆ ಏನು ಮಾಡುತ್ತಿದ್ದರೋ.
ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾತಿನ ಪ್ರಕಾರ ಅಪ್ಪು ಅವರನ್ನು ನಾವು ಕಳೆದುಕೊಂಡು 9 ತಿಂಗಳಾಗಿದ್ದರೂ ಕೂಡ ಇನ್ನು ನಮ್ಮೊಂದಿಗೆ ಅಪ್ಪು ಜೀವಂತವಾಗಿದ್ದರೆ ಎಂಬ ಆಧಾರದ ಮೇಲೆ ಬದುಕನ್ನು ಸಾಗಿಸುತ್ತಿದ್ದೇವೆ. ಅಪ್ಪು ಅವರನ್ನು ಕಳೆದುಕೊಂಡಿದ್ದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರ್ನಾಟಕ ಜನತೆಗೆ ತುಂಬಲಾರದ ನಷ್ಟ ಅಂತಾನೆ ಹೇಳಬಹುದು. ಏಕೆಂದರೆ ಅಪ್ಪು ಅವರು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿ ಇರಲಿಲ್ಲ ಸಿನಿಮಾರಂಗವನ್ನು ಹೊರತುಪಡಿಸಿ ಸಾಮಾಜಿಕ ಕಳಕಳಿಯನ್ನು ಹೊಂದಿದಂತಹ ವ್ಯಕ್ತಿ ಸಮಾಜಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅದರಲ್ಲಿಯೂ ಕೂಡ ವಿದ್ಯಾರ್ಥಿಗಳಿಗೆ ಬಡವ ಮತ್ತು ಬಲ್ಲಿದ ವರ್ಗಕ್ಕೆ ಸಾಕಷ್ಟು ಧನ ಸಹಾಯ ಮಾಡಿದ್ದಾರೆ ಅಷ್ಟೇ ಅಲ್ಲದೆ ಶಕ್ತಿದಾಮ ಎಂಬ ಸಂಸ್ಥೆಯಲ್ಲಿ ಇರುವಂತಹ ಸುಮಾರು 1800ಕ್ಕೂ ಹೆಚ್ಚಿನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಒದಗಿಸುತ್ತಿದ್ದಾರೆ ಎಷ್ಟೋ ಅನಾಥಾಶ್ರಮಕ್ಕೆ ಮತ್ತು ಸರ್ಕಾರಿ ಶಾಲೆಗಳಿಗೆ ವೃದ್ಧಾಶ್ರಮಕ್ಕೆ ಸಹಾಯಧನ ಮಾಡುತ್ತಿದ್ದಾರೆ.
ಇವೆಲ್ಲವನ್ನೂ ನೋಡುತ್ತಿದ್ದರೆ ಅಪ್ಪು ಅವರು ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಂತಹ ಸರ್ವಶ್ರೇಷ್ಠ ವ್ಯಕ್ತಿ ಅಂತಾನೆ ಹೇಳಬಹುದು. ಈ ಕಾರಣಕ್ಕಾಗಿ ಅಪ್ಪು ಅವರನ್ನು ಕಳೆದುಕೊಂಡು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂಬ ಮಾತನ್ನು ಹೇಳುತ್ತಿರುವುದು. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರ ಶರೀರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಣ್ಣು ಮಾಡಲಾಗಿದೆ. ಪ್ರತಿ ತಿಂಗಳು ಕೂಡ ಅಪ್ಪು ಅವರ ಅಗಲಿದ ದಿನಾಂಕದಂದು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಡಾಕ್ಟರ್ ರಾಜಕುಮಾರ್ ಕುಟುಂಬ ವರ್ಗದವರು ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಇದರ ಜೊತೆಗೆ ಅಪ್ಪು ಅವರ ಸ್ಮಾರಕವನ್ನು ನೋಡುವಂತಹ ಅವಕಾಶವನ್ನು ಸಾರ್ವಜನಿಕರಿಗೆ ಒದಗಿಸಿ ಕೊಟ್ಟಿದ್ದಾರೆ.
ಪ್ರತಿನಿತ್ಯವೂ ಕೂಡ ಈ ಸ್ಮಾರಕಕ್ಕೆ ಸಾವಿರಾರು ಜನ ಅಭಿಮಾನಿಗಳು ಬಂದು ಹೋಗುತ್ತಾರೆ ಪ್ರತಿ ಬಾರಿಯೂ ಕೂಡ ಅಭಿಮಾನಿಗಳು ಬಂದಾಗ ಯಾವುದಾದರೂ ಒಂದು ವಿಶೇಷ ಬಗೆಯ ವಸ್ತುಗಳನ್ನು ತಂದು ಅಪ್ಪು ಅವರ ಸ್ಮಾರಕದ ಬಳಿ ಇಟ್ಟು ಹೋಗುವುದನ್ನು ನಾವು ಕಾಣಬಹುದು. ಅದೇ ರೀತಿ ಅಪ್ಪು ಅವರ ಒಂಬತ್ತನೇ ತಿಂಗಳ ಕಾರ್ಯದಂದು ಅಭಿಮಾನಿಯೊಬ್ಬರು ತಮ್ಮ ಮದುವೆಯ ಇನ್ವಿಟೇಶನ್ ಕಾರ್ಡ್ ಒಂದನ್ನು ಅಪ್ಪು ಅವರ ಸಮಾಧಿಯ ಮೇಲೆ ಇಟ್ಟು ಅವರ ಆಶೀರ್ವಾದವನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸಮಾಧಿಗೆ ಭಕ್ತಿಯಿಂದ ಕೈ ಮುಗಿದು ಬೇಡಿಕೊಂಡು ಹೋಗಿದ್ದಾರೆ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದರೆ ನಿಜಕ್ಕೂ ಒಂದು ರೀತಿಯಲ್ಲಿ ದುಃಖ ಆಗುತ್ತದೆ ಒಂದು ವೇಳೆ ಅಪ್ಪು ಬದುಕಿದ್ದರೆ ಈ ಅಭಿಮಾನಿಗೆ ಯಾವುದಾದರು ಒಂದು ಸಹಾಯ ಮಾಡುತ್ತಿದ್ದರು