ಈ ಒಂದು ಮಂತ್ರ ಪ್ರತಿದಿನ ಹೇಳುವುದರಿಂದ ಮಾಟ ಮಂತ್ರ ಭೂತ ತೊಂದರೆಗಳು ಮಾಯವಾಗುತ್ತದೆಇತ್ತೀಚಿನ ದಿನಗಳಲ್ಲಿ ಜನಗಳು ಹಲವಾರು ತೊಂದರೆ ಗಳನ್ನು ಅನುಭವಿಸುತ್ತಿದ್ದಾರೆ ಅದೇ ಮುಖ್ಯವಾಗಿ ಈ ಮಾಟ ಮಂತ್ರ ಭೂತ ಪ್ರೇತ ತೊಂದರೆಗಳು ಆದರೆ ಇನ್ನೂ ಹಲವಾರು ಜನರು ಇವುಗಳನ್ನು ನಂಬುವುದಿಲ್ಲ ಇದು ಕೇವಲ ಬೂಟಾಟಿಕೆ ಮಾತ್ರ ಎಂದೇ ಹೇಳುತ್ತಾರೆ ಆದರೆ ಇವುಗಳು ಇರುವುದು ನಿಜಕ್ಕೂ ಸತ್ಯ ಎಂದೇ ಹಲವಾರು ಜನರು ನೇರವಾಗಿ ಅಂದರೆ ಪ್ರತ್ಯಕ್ಷವಾಗಿ ಉತ್ತರವನ್ನು ಸಹ ಕೊಟ್ಟಿರುವುದನ್ನು ನಾವು ನೋಡಿದ್ದೇವೆ ಆದರೂ ಸಹ ಇದನ್ನು ಹಲವಾರು ಜನ ನಂಬುವುದಿಲ್ಲ ಆದರೆ ಇನ್ನೂ ಹಲವಾರು ಜನ ಇಂತಹ ಸಮಸ್ಯೆಗಳಿಂದ ಕಷ್ಟವನ್ನು ಪಡುತ್ತಿದ್ದಾರೆ. ಈ ಒಂದು ವಿಶಿಷ್ಟ ಮಾಂತ್ರಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಜನರನ್ನು ಹಿಂಸಿಸುವ ಮತ್ತು ಅವರ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವುದು ಪ್ರಪಂಚದಾದ್ಯಂತ ಕಂಡು ಬರುವ ಎಲ್ಲಾ ಆದಿವಾಸಿಗಳಲ್ಲಿಯೂ ಇರುವ ಒಂದು ಸಾಂಪ್ರದಾಯ ಮತ್ತು ನಂಬಿಕೆಯಾಗಿದೆ.
ಧರ್ಮ ಮತ್ತು ಮಂತ್ರ ವಿದ್ಯೆ ಇವೆರಡರಲ್ಲಿಯೂ ಕೆಲವು ಸಮಾನ ಲಕ್ಷಣಗಳು ಇರುತ್ತದೆ ಹಾಗೂ ಇವೆರಡು ಅಗೋಚರವಾದ ಅಲೌಕಿಕ ಶಕ್ತಿಗಳನ್ನು ಮೂಲ ಬಂಡವಾಳವಾಗಿಸಿ ಕೊಂಡು ಕಾರ್ಯ ನಡೆಸುತ್ತವೆ ಧರ್ಮದ ಪ್ರತೀಕವಾಗಿ ಪುರೋಹಿತ ನಿಂತರೆ ಮಾಟ ಮಂತ್ರ ವಿದ್ಯೆಯ ಪ್ರತಿನಿಧಿಯಾಗಿ ಮಾಂತ್ರಿಕ ಅಥವಾ ಮಂತ್ರವಾದಿ ನಿಲ್ಲುತ್ತಾನೆ ಇಬ್ಬರ ಸಾಧನೆ ಒಂದೇ ಆದರೂ ಅವರಿಬ್ಬರೂ ಅನುಸರಿಸುವ ಮಾರ್ಗ ಬೇರೆ ಬೇರೆ ಆಗಿರುತ್ತದೆ. ಧರ್ಮ ಆಚರಣೆ ಗಳನ್ನು ಪೂರೋಹಿತನು ಬಹಳ ಭಕ್ತಿ ಶ್ರದ್ಧೆ ಗೌರವ ದಿಂದ ಮಾಡಿದರೆ ಈ ಮಾಂತ್ರಿಕ ದಬ್ಬಾಳಿಕೆಯಿಂದ ಕ್ರೂರ ರೀತಿಯಿಂದ ಸಾಧಿಸಲು ಪ್ರಯತ್ನಿಸುತ್ತಾನೆ ಧರ್ಮ ಮಾರ್ಗದಿಂದ ಮಾಡುವಂತಹ ಕೆಲಸ ಎಲ್ಲರ ಕಣ್ಣಿಗೂ ಕಾಣಿಸುವ ಮಾರ್ಗವಾದರೆ ಮಂತ್ರ ವಿದ್ಯೆ ರಹಸ್ಯ ಮಾರ್ಗ ವಾಗಿದೆ.
ದೆವ್ವ ಪಿಶಾಚಿಗಳಿಗೆ ಹೆದರಿ ಅಥವಾ ದೂರ ಇರಲಿ ಎಂಬ ಕಾರಣಕ್ಕಾಗಿ ಮನೆಯ ಮುಂದಿನ ಬಾಗಿಲಿಗೆ ಮೂರು ನಾಮ ಬಳಿಯುವುದಾಗಲಿ ತೆಂಗಿನಕಾಯಿ ಮಂತ್ರಿಸಿ ಕಟ್ಟುವುದಾಗಲಿ ಹಳೆಯ ಚಪ್ಪಲಿಗಳನ್ನು ಮನೆಯ ಹೊರ ಭಾಗದ ನಾಲ್ಕು ಮೂಲೆಗಳಲ್ಲಿಯೂ ಕಟ್ಟುವುದಾಗಲಿ ಹಳ್ಳಿಯ ಅನೇಕ ಮನೆಗಳಲ್ಲಿ ಕಂಡುಬರುವ ದೃಶ್ಯವಾಗಿದೆ ಹೀಗೆ ದೇವ್ವ ಪಿಶಾಚಿಗಳಿಗೆ ಹೆದರಿ ಹಲವಾರು ಜನ ಹಲವಾರು ಜನಗಳು ತಯಾರಿಸಿದಂತಹ ಕೆಲವು ಕಾಯಿಗಳನ್ನಾಗಲಿ ಅಥವಾ ಮಂತ್ರಿಸಿದಂತಹ ಹಲವಾರು ವಸ್ತುಗಳನ್ನು ತಂದು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಆದರೆ ಇವು ಸರಿಯೋ ತಪ್ಪೋ ಎಂಬುದು ಇಂದಿಗೂ ಸಹ ಕಂಡು ಹಿಡಿಯಲಾಗದಂತಹ ಪ್ರಶ್ನೆಯಾಗಿ ಉಳಿದಿದೆ ಆದ್ದರಿಂದ ಇವುಗಳನ್ನು ನಂಬುವುದರ ಬದಲು ದೇವರ ಪೂಜೆಯಲ್ಲಿ ಮತ್ತು ದೇವರು ಇದ್ದಾನೆ ಎಂಬ ನಂಬಿಕೆಯಲ್ಲಿ ಜೀವನವನ್ನು ಸಾಗಿಸುವುದು ಉತ್ತಮ ಎಂದೇ ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.