ಅನುಬಂಧ ವೇದಿಕೆಯಲ್ಲಿ ಕಣ್ಣೀರು ಹಾಕಿದ ಪುಟ್ಟಗೌರಿ ಖ್ಯಾತಿಯ ರಂಜಿನಿ ರಾಘವನ್ ಕಾರಣವೇನು ಗೊತ್ತಾ ? ನಿಮಗೂ ಬೇಸರವಾಗುತ್ತೆ. » Karnataka's Best News Portal

ಅನುಬಂಧ ವೇದಿಕೆಯಲ್ಲಿ ಕಣ್ಣೀರು ಹಾಕಿದ ಪುಟ್ಟಗೌರಿ ಖ್ಯಾತಿಯ ರಂಜಿನಿ ರಾಘವನ್ ಕಾರಣವೇನು ಗೊತ್ತಾ ? ನಿಮಗೂ ಬೇಸರವಾಗುತ್ತೆ.

ಅನುಬಂಧ ಅವಾರ್ಡ್ಸ್ ನಲ್ಲಿ ಕಣ್ಣೀರು ಹಾಕಿದ ಪುಟ್ಟಗೌರಿ ಖ್ಯಾತಿಯ ರಂಜಿನಿ ರಾಘವನ್ ಕಾರಣ ಏನು ಗೊತ್ತಾ‌.
ಹಲವರಿಗೆ ರಂಜನಿ ರಾಘವನ್ ಎಂದು ಹೇಳಿದರೆ ಗೊತ್ತಾಗುವುದಿಲ್ಲ ಆದರೆ ಕನ್ನಡತಿ ಧಾರವಾಹಿಯ ಭುವನೇಶ್ವರಿ ಅಥವಾ ಭುವಿ ಎಂದು ಹೇಳಿದರೆ ಬೇಗ ಅರ್ಥವಾಗುತ್ತದೆ. ಅಷ್ಟರ ಮಟ್ಟಿಗೆ ಜನರನ್ನು ತಲುಪಿರುವಂತಹ ರಂಜನಿ ರಾಘವನ್ ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ. ಕಲರ್ಸ್ ಕನ್ನಡದ ಕನ್ನಡತಿ ಸೀರಿಯಲ್ ಮೂಲಕ ಕರ್ನಾಟಕದ ಮನೆಮನೆಯಲ್ಲೂ ಕೂಡ ಭುವಿ ಎಂದು ಕರೆಯಲ್ಪಡುವ ರಂಜನಿ ರಾಘವನ್ ಅವರು ಈ ಸಲದ ಅನುಬಂಧ ಅವಾರ್ಡ್ಸ್ 2022ರ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದು ಸ್ಟೇಜ್ ಮೇಲೆ ಬಿಕ್ಕಿಬಿಕ್ಕಿರುವಂತಹ ಕೆಲವೊಂದಷ್ಟು ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅನುಬಂಧ ಅವಾರ್ಡ್ಸ್ ನಲ್ಲಿ ಎರಡು ಬಾರಿ ಜನ ಮೆಚ್ಚಿದ ನಾಯಕಿ ಎನ್ನುವಂತಹ ಅವಾರ್ಡ್ ಅನ್ನು ಗಳಿಸಿಕೊಂಡ ರಂಜನಿ ರಾಘವನ್ ಈ ಬಾರಿ ಕೂಡ ಅವಾರ್ಡ್ ವಿನ್ ಆಗುತ್ತಾರೆ ಎನ್ನುವಂತಹ ಎಕ್ಸ್ಪೆಕ್ಟೇಶನ್ ಎಲ್ಲರಲ್ಲಿಯೂ ಇದೆ. ಇದೀಗ ಅನುಬಂಧ ಅವಾರ್ಡ್ಸ್ ನಲ್ಲಿ ಕಣ್ಣೀರಿಟ್ಟಿರುವಂತಹ ರಂಜನಿ ಅವರು ಕಣ್ಣೀರು ಹಾಕಿರುವಂತಹ ಫೋಟೋಗಳು ವೈರಲ್ ಆಗಿರುವುದರಿಂದ ಜನರಲ್ಲಿ ಕೆಲವೊಂದಷ್ಟು ಗೊಂದಲಗಳು ಸೃಷ್ಟಿಯಾಗಿದೆ.

ಇವರಿಗೆ ಈ ಬಾರಿ ಅವಾರ್ಡ್ ಸಿಕ್ಕಿಲ್ಲ ಆದ್ದರಿಂದ ಇವರು ಕಣ್ಣೀರು ಹಾಕಿದ್ದಾರೆ ಎಂದು ಹೇಳುತ್ತಿದ್ದರೆ ಇನ್ನೂ ಕೆಲವರು ಅವರಿಗೆ ಅವಾರ್ಡ್ ಸಿಕ್ಕಿರುವ ಸಂತೋಷದಲ್ಲಿ ಕಣ್ಣೀರು ಹಾಕಿದ್ದಾರೆ ಎನ್ನುವಂತಹ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ರಂಜಿನಿ ರಾಘವನ್ ಅವರು ಕಣ್ಣೀರು ಹಾಕಲು ಇದ್ಯಾವುದೂ ಸಹ ಕಾರಣವಲ್ಲ ರಂಜನಿ ಅವರು ವೇದಿಕೆ ಮೇಲೆ ಅಳಲು ಕಾರಣ ಏನೆಂದು ನಾವಿಲ್ಲಿ ತಿಳಿಸುತ್ತೇವೆ. ಅನುಬಂಧ ಅವಾರ್ಡ್ಸ್ 2022 ಈ ಒಂದು ಕಾರ್ಯಕ್ರಮವು ಈಗಾಗಲೇ ಶೂಟಿಂಗ್ ಮುಗಿದಿದ್ದು ಸದ್ಯದಲ್ಲಿಯೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ರಂಜನಿ ರಾಘವನ್ ಅವರು ಕನ್ನಡತಿ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲುವ ಮೊದಲು ಪುಟ್ಟಗೌರಿ ಎನ್ನುವಂತಹ ಧಾರವಾಹಿಯಲ್ಲಿ ಪುಟ್ಟಗೌರಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ಒಂದು ಧಾರಾವಾಹಿಯಲ್ಲಿ ಇವರಿಗೆ ಹೆಚ್ಚಿನ ಮನ್ನಣೆ ಸಿಕ್ಕಿತು ಹಾಗೆ ಅಭಿಮಾನಿಗಳು ಹೆಚ್ಚಾದರೂ ಸಿನಿಮಾಗಳಿಂದ ಆಫರ್ ಗಳು ಸಹ ಬಂದವು. ಆದರೆ ರಂಜನಿ ಅವರು ಕನ್ನಡತಿ ಸೀರಿಯಲ್ ನಲ್ಲಿ ಭುವಿಯಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು ಆಗಿನಿಂದಲೂ ಇವರ ಜನಪ್ರಿಯತೆ ಇನ್ನೂ ಸಹ ಹೆಚ್ಚಾಗುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಇವರ ಮೇಲೆ ಇರುವಂತಹ ಗೌರವ ಜನರಲ್ಲಿ ಇನ್ನಷ್ಟು ಹೆಚ್ಚುತ್ತದೆ ಏಕೆಂದರೆ ಈ ಒಂದು ಪಾತ್ರವೂ ಜನರ ಮನಸ್ಸನ್ನು ಮುಟ್ಟುವಂತಹ ಪಾತ್ರವಾಗಿದೆ. ಕನ್ನಡತಿ ಧಾರವಾಹಿಯಲ್ಲಿ ರಂಜನಿ ಅವರಿಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿದರು ಸಹ ಅವರಿಗೆ ಒಳ್ಳೆಯ ರೆಕಗ್ನೈಜೇಷನ್ ಕೊಟ್ಟಿದ್ದು ಪುಟ್ಟಗೌರಿ ಎಂಬ ಧಾರವಾಹಿ. ಈ ಸೀರಿಯಲ್ ಹಲವಾರು ವರ್ಷಗಳ ತನ್ನ ಎಪಿಸೋಡ್ ಗಳನ್ನು ಮಾಡಿದ್ದು ನಂತರ ಈ ಸೀರಿಯಲ್ ಮುಕ್ತಾಯಗೊಳಿಸಿ ಇದರ ಮುಂದುವರೆದ ಭಾಗವಾಗಿ ಮಂಗಳಗೌರಿ ಮದುವೆ ಸೀರಿಯಲ್ ಅನ್ನು ಆರಂಭಿಸಿದರು ಮಂಗಳ ಗೌರಿ ಮದುವೆ ಸೀರಿಯಲ್ ಈಗಾಗಲೇ 3000 ಎಪಿಸೋಡ್ ಗಳನ್ನು ಪೂರೈಸಿದ್ದು ಬರೋಬರಿ 10 ವರ್ಷಗಳನ್ನು ಸಕ್ಸೆಸ್ಫುಲ್ ಆಗಿ ಕಂಪ್ಲೀಟ್ ಮಾಡಿಕೊಂಡಿದ್ದಾರೆ. ಜೊತೆಗೆ ಈ ಒಂದು ಧಾರಾವಾಹಿ ಸದ್ಯದಲ್ಲಿಯೇ ಮುಕ್ತಾಯಗೊಳ್ಳಲಿದೆ. 10 ವರ್ಷಗಳು ಈ ಸೀರಿಯಲ್ ಪ್ರಸಾರವಾದ್ದರಿಂದ ಪುಟಗೌರಿ ಮದುವೆ ಮತ್ತು ಮಂಗಳ ಗೌರಿ ಮದುವೆ ಧಾರಾವಾಹಿಯನ್ನು ಸೇರಿಸಿ ವಿಶೇಷವಾದ ಒಂದು ಪ್ರಶಸ್ತಿಯನ್ನು ಕೊಡಲಾಯಿತು ಅದರಲ್ಲಿ ಪುಟ್ಟಗೌರಿ ಪಾತ್ರ ನಿರ್ವಹಿಸದ ರಂಜನಿ ಅವರಿಗೆ ಅವಾರ್ಡ್ ಕೊಟ್ಟರು ಆಗ ರಂಜನಿ ಅವರು ನನಗೆ ಕಿರುತೆರೆಯಲ್ಲಿ ಒಳ್ಳೆಯ ಅವಕಾಶವನ್ನು ಕೊಟ್ಟಂತಹ ಧಾರಾವಾಹಿ ಪುಟ್ಟಗೌರಿ ಮದುವೆ ಈ ತಂಡವನ್ನು ನೆನೆದು ಕಣ್ಣೀರು ಇಡುತ್ತಾರೆ.

[irp]


crossorigin="anonymous">