ಪರೀಕ್ಷಾ ಸಮಯದಲ್ಲಿ ಮಕ್ಕಳ ನೆನಪಿನ ಶಕ್ತಿ ಮತ್ತು ದೈಹಿಕ ಶಕ್ತಿಗೆ ಇದು ರಾಮಬಾಣ||ಈ ದಿನ ನಾವು ಹೇಳುತ್ತಿರುವಂತಹ ಪದಾರ್ಥವನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಮಾಡಿಟ್ಟುಕೊಂಡರೆ ಬಹಳ ಒಳ್ಳೆಯದು ಹಾಗಾದರೆ ಆ ಪದಾರ್ಥ ಯಾವು ದು ಇದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯಾದಂತಹ ಪ್ರಯೋಜನಗಳು ನಮಗೆ ಸಿಗುತ್ತದೆ ಹಾಗೂ ಇದನ್ನು ಮಾಡುವುದಕ್ಕೆ ಯಾವುದೆಲ್ಲಾ ಪದಾರ್ಥಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ ಅದಕ್ಕೂ ಮೊದಲು ಎಲ್ಲರೂ ಕೂಡ ಗಮನಿಸಬೇಕಾದಂತಹ ಮುಖ್ಯ ಅಂಶ ಏನು ಎಂದರೆ ಪ್ರತಿಯೊಬ್ಬರಿಗೂ ಕೂಡ ಕೆಲಸ ಮಾಡಿದರೆ ಹೆಚ್ಚಾಗಿ ಸುಸ್ತು ಕೈಕಾಲು ನೋವು ಮಂಡಿ ನೋವು ಕುತ್ತಿಗೆ ನೋವು ಸೊಂಟ ನೋವು ಹೀಗೆ ಹಲವಾರು ರೀತಿಯಾದಂತಹ ತೊಂದರೆಗಳನ್ನು ಅನುಭವಿಸುತ್ತಿರುತ್ತೀರಿ ಹಾಗಾದರೆ ಅಂತಹವರು ಈ ದಿನ ನಾವು ಹೇಳುವಂತಹ ಈ ಒಂದು ಉಂಡೆಯನ್ನು ಮಾಡಿ ಸೇವನೆ ಮಾಡುವುದರಿಂದ ಈ ಎಲ್ಲಾ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಹಾಗಾದರೆ ಆ ಉಂಡೆಯನ್ನು ಮಾಡುವುದಕ್ಕೆ ಯಾವು ದೆಲ್ಲ ಪದಾರ್ಥಗಳು ಬೇಕು ಎಂದು ನೋಡುವುದಾದರೆ
1. ಬಾದಾಮಿ ಒಂದು ಕಪ್
2. ಗೋಡಂಬಿ ಕಾಲು ಕಪ್
3. ಒಣ ದ್ರಾಕ್ಷಿ ಕಾಲು ಕಪ್
4. ಕುಂಬಳಕಾಯಿ ಬೀಜ ಕಾಲು ಕಪ್
5. ಗಸಗಸೆ ಎರಡು ಚಮಚ
6. ಅಗಸೆ ಬೀಜ ಎರಡು ಚಮಚ
7. ಒಣ ಕೊಬ್ಬರಿ ಪುಡಿ ಒಂದು ಕಪ್
ಹೀಗೆ ಮೇಲೆ ಹೇಳಿದಂತಹ ಎಲ್ಲ ಪದಾರ್ಥಗಳನ್ನು ತುಪ್ಪದಲ್ಲಿ ಹುರಿದು ಒಂದು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.ಈ ಎಲ್ಲಾ ಪದಾರ್ಥಗಳು ನಮ್ಮ ದೇಹದ ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಹಾಗೂ ಬಾದಾಮಿಯು ಮಕ್ಕಳಿನ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಇಮ್ಯೂನಿಟಿ ಪವರ್ ಹೆಚ್ಚಾಗುವುದಕ್ಕೆ ಸಹಾಯಮಾಡುತ್ತದೆ.
ಹೀಗೆ ಎಲ್ಲವನ್ನೂ ಪುಡಿ ಮಾಡಿದ ಮಿಶ್ರಣಕ್ಕೆ ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ ಒಂದು ಪಾತ್ರೆಯಲ್ಲಿ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು ನಂತರ ಇದು ಬಿಸಿ ಇರುವಾಗಲೇ ಒಂದು ಚಮಚ ಏಲಕ್ಕಿ ಪುಡಿ ಸ್ವಲ್ಪ ಉಪ್ಪು ಕಾಲು ಚಮಚ ಕಪ್ಪು ಮೆಣಸಿನ ಪುಡಿ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳ ಬೇಕು ನಂತರ ಈ ಉಂಡೆಯನ್ನು ಪ್ರತಿದಿನ ಬೆಳಗಿನ ಸಮಯ ಸೇವನೆ ಮಾಡುತ್ತಾ ಬಂದರೆ ದೇಹದಲ್ಲಿ ಇರುವಂತಹ ನಿಶಕ್ತಿ ಸುಸ್ತು ಮೂಳೆಗಳ ನೋವು ಹೀಗೆ ಈ ಎಲ್ಲಾ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ ಅದರಲ್ಲಿಯೂ ಮುಖ್ಯವಾಗಿ ಮಕ್ಕಳಿಗೆ ಇದನ್ನು ಕೊಟ್ಟರೆ ಅವರಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದೇ ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.