ಸೂರ್ಯ ಗ್ರಹಣ -ದೀಪಾವಳಿ – ಅಮಾವಾಸ್ಯೆ ಅಕ್ಟೋಬರ್ 25- ಗ್ರಹಣ ರಾಶಿ ಫಲ ಪರಿಹಾರ!!ಈ ದಿನ ನಾವು ಸೂರ್ಯಗ್ರಹಣದ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.ಈ ವರ್ಷದಲ್ಲಿ ಎರಡು ವಿಶೇಷ ವಾದಂತಹ ಗ್ರಹಗಳು ನಮ್ಮ ಮೇಲೆ ಪ್ರಭಾವವನ್ನು ಬೀರಲಿದೆ ಹಾಗೂ ಅದು ಈಗ ದೀಪಾವಳಿ ಅಮಾವಾಸ್ಯೆಗೆ ಸೂರ್ಯ ಗ್ರಹಣ ಸಂಭವಿಸುತ್ತಿದ್ದು ಅಂದರೆ ದೀಪಾವಳಿಯ ಹಬ್ಬದ ದಿನದಂದು ಸಂಭವಿಸುವಂತಹ ಈ ಸೂರ್ಯ ಗ್ರಹಣವು ಗ್ರಸ್ತಾಸ್ಥ ಕೇತು ಗ್ರಸ್ತ ಸೂರ್ಯಗ್ರಹಣವಾಗಿದ್ದು ಇದು ಬಹಳ ವಿಶಿಷ್ಟವಾದಂತಹ ವಿಶೇಷವಾದಂತಹ ವಿದ್ಯಾಮಾನ ಎಂದು ಹೇಳಬಹುದಾಗಿದೆ ಹಾಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಗಳಿಗೆ ಬಹಳ ಮಹತ್ತರವಾದಂತಹ ಸ್ಥಾನವನ್ನು ಕೊಟ್ಟಿದ್ದಾರೆ.ಅದರಲ್ಲಿ ಹಿಂದೆ ನಡೆದಂತಹ ಪೌರಾಣಿಕ ಘಟನೆಗಳು ಇರಬಹುದು ಐತಿಹಾಸಿಕ ಘಟನೆಗಳಿರಬಹುದು ಅಗ್ನಿ ಗ್ರಹಣದ ಬಳಿಕ ನಡೆದಂತಹ ಘಟನೆಗಳಿರಬಹುದು ಇದನ್ನು ಋಷಿ ಮುನಿಗಳು ಅಥವಾ ಶಾಸ್ತ್ರ ಪುರಾಣಕಾರರು ಉಲ್ಲೇಖಿಸಿದ್ದಾರೆ ಅಂದರೆ ಒಂದೊಂದು ಯುದ್ಧಗಳು ಮತ್ತು ಪ್ರಾಕೃತಿಕ ವೈಫಲ್ಯಗಳು ಅಥವಾ ಇನ್ನಿತರ ಸಂಗ್ರಾಮಗಳು ನಡೆದಾಗ ಅಲ್ಲಿ ಗ್ರಹಣ ಆದ ಬಳಿಕ ನಡೆದಂತಹ ವಿಚಾರವನ್ನು ಅಲ್ಲಿ ಪ್ರಸ್ತಾಪಿಸಿದ್ದಾರೆ.
ಅದು ಮಹಾಭಾರತದ ಕಾಲದಲ್ಲಾಗಿರಬಹುದು ಅಥವಾ ರಾಮಾಯಣದ ಕಾಲದಲ್ಲಾಗಿರಬಹುದು ಅಥವಾ ಇನ್ನಿತರ ಪುರಾಣ ಪ್ರವಚನಗಳಲ್ಲಾಗಿರ ಬಹುದು ಮತ್ತು ಕಥಾ ಸಂಗ್ರಹಗಳಲ್ಲಿಯೂ ಕೂಡ ಗ್ರಹಣದ ಉಲ್ಲೇಖ ಇದ್ದೇ ಇರುತ್ತದೆ ಹಾಗಾಗಿ ಗ್ರಹಣದಿಂದ ನಮ್ಮ ಭೂಮಿಯ ಮೇಲೆ ಬಹಳಷ್ಟು ಆಗು ಹೋಗುಗಳಲ್ಲಿ ಪರಿಣಾಮ ಬೀರಿದೆ ಈಗ ನಡೆಯುವಂತಹ ಸೂರ್ಯಗ್ರಹಣ ಅಕ್ಟೋಬರ್ 25 ಆಶ್ವೀಜ ಮಾಸದಂದು ಮಧ್ಯಾಹ್ನ 2 ಗಂಟೆ 28 ನಿಮಿಷಕ್ಕೆ ಸೂರ್ಯನಿಗೆ ಗ್ರಹಣ ಪ್ರಾರಂಭವಾಗಿ 6 ಗಂಟೆ 20 ನಿಮಿಷಕ್ಕೆ ಮುಕ್ತಾಯವಾಗಲಿದೆ ಇದನ್ನು ಕೇತು ಗ್ರಸ್ತ ಗ್ರಸ್ತಾಸ್ತ ಸೂರ್ಯಗ್ರಹಣ ಎಂದು ಕರೆಯುತ್ತಾರೆ ಇಲ್ಲಿ ಕೇತು ಸೂರ್ಯನ ಒಂದು ಛಾಯೆಗೆ ಅಡ್ಡಿ ಬರುತ್ತಾನೆ ಸೂರ್ಯನ ಬೆಳಕು ಬಾರದಂತೆ ಕೇತು ಮರೆಮಾಚುತ್ತಾನೆ.
ಹಾಗಾಗಿ ಈ ಬಾರಿ ಸಂಭವಿಸುತ್ತಿರುವoತಹ ಸೂರ್ಯ ಗ್ರಹಣ ಬಹಳ ಪ್ರಭಲಶಾಲಿಯಾಗಿದ್ದು ಇದರಿಂದ ಹಲವಾರು ಅಡೆತಡೆಗಳು ಕೂಡ ಸಂಭವಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಬಹಳ ಜಾಗರೂಕತೆ ಯಿಂದ ಇರುವುದು ಉತ್ತಮ ಅದರಲ್ಲಿಯೂ ಮುಖ್ಯವಾಗಿ ನಟನೆಯಲ್ಲಿ ಅಭಿನಯಿಸುತ್ತಿರುವಂತಹ ನಟರಿಗೆ ಅಂದರೆ ಸೆಲೆಬ್ರಿಟಿ ಗಳಿಗೆ ಮತ್ತು ಕ್ರೀಡಾಪಟು ಗಳಿಗೆ ಈ ಸೂರ್ಯ ಗ್ರಹಣವು ಬಹಳ ಪರಿಣಾಮಕಾರಿ ಯಾಗಿದ್ದು ಅವರು ಜಾಗರೂಕತೆಯಿಂದ ಇರುವುದು ಮುಖ್ಯವಾಗಿರುತ್ತದೆ ಇದರಿಂದ ಇವರೆಲ್ಲರಿಗೂ ಏನಾದರೂ ಕಷ್ಟಗಳು ಎದುರಾಗಬಹುದು ಮತ್ತು ಇವರ ಆರೋಗ್ಯದಲ್ಲಿಯೂ ಕೂಡ ಹಲವಾರು ಸಮಸ್ಯೆಯನ್ನು ಕಾಣಬಹುದು ಆದ್ದರಿಂದ ಬಹಳ ಜಾಗರೂಕತೆಯಿಂದ ಇರುವುದು ಉತ್ತಮ ಮತ್ತು ಬಹಳಷ್ಟು ಜನರಿಗೆ ಈ ಸೂರ್ಯ ಗ್ರಹಣದಿಂದ ತಮ್ಮ ವ್ಯಾಪಾರ ವ್ಯವಹಾರಗಳಲ್ಲಿಯೂ ಕೂಡ ಬಹಳಷ್ಟು ನಷ್ಟ ಸಂಭವಿಸಲಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.