ಶಂಖ ಪುಷ್ಪ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
ಶಂಖಪುಷ್ಪ ಈ ಹೂವನ್ನು ಗಿರಿಕನ್ನಿಕ ಪುಷ್ಪ ಎಂದು ಕೂಡ ಕರೆಯುತ್ತಾರೆ. ಗಿರಿ ಎಂದರೆ ಎತ್ತರವಾದ ಪ್ರದೇಶದಲ್ಲಿ ಬೆಳೆಯುತ್ತಿದ್ದ ದೇವ ಕನ್ನಿಕೆಯರು ಬಹಳ ಇಷ್ಟಪಡುತ್ತಿದ್ದ ಮತ್ತು ದೇವತೆಗಳಿಗೂ ಬಹಳ ಪ್ರಿಯವಾದ ಪುಷ್ಪ ಎಂದು ಅರ್ಥ. ಈ ಹೂವು ನೀಲಿ ಬಣ್ಣದಲ್ಲಿ ಇರುತ್ತದೆ. ನೀಲಿ ಬಣ್ಣವು ಅಪಾರ ಹಾಗೂ ಅಂತ್ಯವಿಲ್ಲದ ನಿಷ್ಕಲ್ಮಶ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಈ ಹೂವಿನ ಆಕಾರವು ಕನ್ಯೆಯರ ಮರ್ಮಾಂಗದ ಆಕಾರದಲ್ಲಿ ಇದೆ. ಆದ್ದರಿಂದ ಇದನ್ನು ದೇವಿ ಸ್ವರೂಪದ ಹೂವು ಎಂದು ಕರೆಯುತ್ತಾರೆ. ಎಲ್ಲಾ ದೇವತೆಯರಿಗೂ ಕೂಡ ಅರ್ಪಿಸಬಹುದಾಗಿದೆ. ಅದರಲ್ಲೂ ಸುಬ್ರಹ್ಮಣ್ಯ ಸ್ವಾಮಿಗೆ ಮಂಗಳವಾರದ ದಿನ ಈ ಹೂವಿನ ಹಾರವನ್ನು ಭಕ್ತಿಯಿಂದ ಅರ್ಪಿಸುವುದರಿಂದ ಆರ್ಥಿಕವಾಗಿ ಬಹಳ ನಷ್ಟ ಅನುಭವಿಸುತ್ತಾ ಇರುವವರಿಗೆ ಹಾಗೂ ಆರ್ಥಿಕ ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿರುವವರಿಗೆ ಅವರ ಸಮಸ್ಯೆಗಳು ಶೀಘ್ರವಾಗಿ ನಿವಾರಣೆ ಆಗುತ್ತದೆ.
ನಾರಾಯಣಸ್ವಾಮಿಗೂ ಕೂಡ ಈ ಹೂವಿನ ಹಾರವು ಬಹಳ ಪ್ರಿಯವಾಗಿದೆ ನಾರಾಯಣ ದೇವಾಲಯದಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿ ಈ ಹೂವನ್ನು ಅರ್ಪಿಸುವುದರಿಂದ ಅನೇಕ ದಿನದಿಂದ ತೊಂದರೆ ಕೊಡುತ್ತಿದ್ದ ದೀರ್ಘಾವಧಿ ಕಾಯಿಲೆಗಳು ಗುಣ ಆಗುತ್ತವೆ ಹಾಗೂ ಆರೋಗ್ಯ ಸುಧಾರಣೆ ಜೊತೆ ಜೀವನದಲ್ಲಿ ಉನ್ನತಿಯನ್ನು ಸಹ ಕಾಣುತ್ತೀರಿ, ಇದರೊಂದಿಗೆ ವಿಜ್ಞೇಶ್ವರ ನಿಗೂ ಕೂಡ ಈ ಹೂವಿನ ಹಾರವನ್ನು ಅರ್ಪಿಸಬಹುದು. ಇದರಿಂದ ವಿಘ್ನೇಶನು ಸಂತುಷ್ಟಿಗೊಂಡರೆ ನೀವು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲೂ ದಿಗ್ವಿಜಯ ಸಾಧಿಸುತ್ತೀರಿ. ರಾಜಕೀಯ ವ್ಯಕ್ತಿಗಳು ಈ ರೀತಿ ಜನ ಮನ್ನಣೆ ಗಳಿಸಲು ಮತ್ತು ತಮ್ಮ ಕೀರ್ತಿಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಬಹಳ ಶ್ರಮ ಪಡುತ್ತಾರೆ ಅಂತಹವರು ಹಾಗೂ ಅಂತಹ ಆಸೆ ಉಳ್ಳವರು ಈ ಪುಷ್ಪವನ್ನು ಪ್ರಥಮ ಪೂಜೆಯ ಅಧಿಪತಿ ವಿಘ್ನ ವಿನಾಶಕನಿಗೆ ಅರ್ಪಿಸುವುದರಿಂದ ಅವರ ಇಷ್ಟಾರ್ಥಗಳು ಸಿದ್ದಿ ಆಗುತ್ತವೆ.
ಈ ಗಿಡವನ್ನು ಮನೆಯಲ್ಲಿಯೇ ಸಣ್ಣ ಪಾಟ್ ಗಳಲ್ಲಿ ಬಳಸಲು ಕೂಡ ಸಾಧ್ಯವಿರುವ ಕಾರಣ ನಾವೇ ಗಿಡವನ್ನು ಬೆಳೆಸಿ ಆ ಹೂಗಳಿಂದ ದೇವರಿಗೆ ಪೂಜೆ ಮಾಡಿದರೆ ಇನ್ನು ವಿಶೇಷ ಫಲ ಸಿಗುತ್ತದೆ. ಕಾರಣ ಯಾವ ದೇವರು ಕೂಡ ಹಣ ಹೊನ್ನು ಯಾವುದನ್ನು ಬಯಸುವುದಿಲ್ಲ ಭಕ್ತಿಯಿಂದ ಕೊಡುವ ಹೂವು ಮತ್ತು ಹಣ್ಣುಗಳನ್ನು ಸ್ವೀಕರಿಸಿ ಪ್ರಸನ್ನರಾಗುತ್ತಾರೆ ಮತ್ತು ಈ ಮೂಲಕ ನಿಮ್ಮ ಇಷ್ಟಾರ್ಥಗಳು ಸಿದ್ದಿ ಆಗಲಿ ಎಂದು ಆಶೀರ್ವದಿಸುತ್ತಾರೆ. ಪೂಜೆಗೆ ಮಾತ್ರ ಅಲ್ಲದೆ ಆಯುರ್ವೇದದಲ್ಲಿ ಕೂಡ ಈ ಶಂಖಪುಷ್ಪಕ್ಕೆ ವಿಶೇಷ ಮಾನ್ಯತೆ ಇದೆ. ಶಂಖ ಪುಷ್ಪ ಹೂವಿನ ಕಷಾಯ ಸೇವಿಸುವುದರಿಂದ ಮತ್ತು ಶಂಖಪುಷ್ಪ ಹೂವನ್ನು ರಾತ್ರಿ ನೀರಿನಲ್ಲಿ ನೆನೆಸಿ ಅದು ನೀಲಿ ಬಣ್ಣ ಬಂದ ಬಳಿಕ ಬೆಳಗ್ಗೆ ಶೋಧಿಸಿ ಕುಡಿಯುವುದರಿಂದ ದೇಹಕ್ಕೆ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ.