ಅದ್ಭುತ ಪ್ರತಿಭೆ ಇದ್ದರು ಅದೃಷ್ಟ ಇಲ್ಲದ ನಟ ಆದಿತ್ಯ.. ಅವರ ಸಿನಿ ಜರ್ನಿ ಯಾಕೆ ಹೀಗಾಯಿತು…?ಸಿನಿಮಾ ಲೋಕ ಒಂದು ವಿಧದ ಜೂಜು ಎಂದು ಅನೇಕರು ಹೇಳುತ್ತಾರೆ ಹಲವರು ಇದನ್ನು ಹಲವು ಬಗೆಯ ಹಾವು ಏಣಿ ಆಟ ಯಾರು ಯಾವಾಗ ಸ್ಟಾರ್ ಆಗುತ್ತಾರೋ ಹಾಗೂ ಸ್ಟಾರ್ ಆದವರು ಯಾವಾಗ ಮೂಲೆ ಸೇರುತ್ತಾರೆ ಎಂದು ಹೇಳಲು ಆಗುವುದಿಲ್ಲ ಕನ್ನಡ ಚಿತ್ರರಂಗ ಈವರೆಗೂ ಎಷ್ಟೋ ಪ್ರತಿಭೆಗಳನ್ನು ಕಂಡಿದೆ ಹಾಗೂ ಎಷ್ಟೋ ಪ್ರತಿಭೆಗಳನ್ನು ಬೆಳೆಸಿದೆ ಈ ಹಿಂದೆ ಏನು ಅಲ್ಲದೆ ಇರುವಂತಹ ಕೆಲವೊಂದಷ್ಟು ಯುವಕರು ಇವತ್ತು ಗಗನದಷ್ಟು ಎತ್ತರಕ್ಕೆ ಏರಿದ್ದಾರೆ ಹಾಗೂ ಪ್ರತಿಭೆ ಇದ್ದರೂ ಕೂಡ ಒಂದಷ್ಟು ದಿನ ಮಾತ್ರ ಕೀರ್ತಿ ಹಾಗೂ ಯಶಸ್ಸನ್ನು ಕಂಡು ನಂತರ ಮೂಲೆಗೆ ಸೇರಿದ ನಟರು ಕೂಡ ಇದ್ದಾರೆ ಅಂತವರ ಪೈಕಿ ನಟ ಆದಿತ್ಯ ಸಿಂಗ್ ಕೂಡ ಒಬ್ಬರು.
ನಟ ಆದಿತ್ಯ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಅವರ ನಟನೆಯ ಡೆಡ್ಲಿ ಸೋಮ ಎದೆಗಾರಿಕೆ ಮುಂತಾದ ರಗಡ್ ಸಿನಿಮಾಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ ಕನ್ನಡದ ಹ್ಯಾಂಡ್ಸಮ್ ನಟರ ಪೈಕಿ ಈ ಆದಿತ್ಯ ಕೂಡ ಒಬ್ಬರು ತಮ್ಮ ಸಹಜ ನಟನೆಯಿಂದಾಗಿ ಒಂದಷ್ಟು ಕಾಲ ಭಾರಿ ಸುದ್ದಿಯಲ್ಲಿದ್ದವರು ಇನ್ನೇನು ನಟ ಆದಿತ್ಯ ಅವರು ಕನ್ನಡದ ಹೀರೋಗಳ ಪೈಕಿ ಪ್ರಧಾನ ಸ್ಥಾನವನ್ನು ಗಳಿಸಿದರು ಎನ್ನುವಷ್ಟರಲ್ಲಿಯೇ ಅವರ ಅಭಿನಯ ಕುಗ್ಗುತ್ತಾ ಹೋಯಿತು ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ಯಾವುದೇ ಚಿತ್ರಗಳು ಕೂಡ ಗೆಲ್ಲಲಿಲ್ಲ ಇವರ ಸಿನಿ ಜರ್ನಿ ಹಾಗೂ ಅದು ತಕ್ಷಣವೇ ನಿಲ್ಲುವುದಕ್ಕೆ ಕಾರಣಗಳೇನು ಎಂದು ಯಾರಿಗೂ ಕೂಡ ತಿಳಿದಿಲ್ಲ ಹಾಗಾದರೆ ಅದಕ್ಕೆ ಕಾರಣಗಳನ್ನು ಈ ದಿನ ನಾವು ತಿಳಿದುಕೊಳ್ಳುತ್ತಾ ಹೋಗೋಣ.
ನಟ ಆದಿತ್ಯ ಅವರು ಕನ್ನಡದ ಫೇಮಸ್ ನಿರ್ದೇಶಕರಾದಂತಹ ರಾಜೇಂದ್ರ ಸಿಂಗ್ ಬಾಬು ಅವರ ಮಗ ಎನ್ನುವ ಸಂಗತಿ ಬಹುತೇಕರಿಗೆ ಗೊತ್ತೇ ಇದೆ ಇವರ ತಂದೆಯ ನಂತರ ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವಂತಹ ಲೆಜೆಂಡರಿ ನಿರ್ದೇಶಕರು ಅವರು ಅಂತ ಮುತ್ತಿನ ಹಾರ ಬಂಧನ ಮುಂಗಾರಿನ ಮಿಂಚು ನಾಗರಹೊಳೆ ಭೂಮಿ ತಾಯಿಯ ಚೊಚ್ಚಲ ಮಗ ಕುರಿಗಳು ಸಾರ್ ಕುರಿಗಳು ಕೋತಿಗಳು ಸಾರ್ ಕೋತಿಗಳು ಈ ರೀತಿ ಒಳ್ಳೆಯ ಚಿತ್ರಗಳನ್ನು ಕೊಟ್ಟು ಇವರ ಚಿತ್ರಗಳಿಗೆ ನ್ಯಾಷನಲ್ ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ ಇಂತಹ ರಾಜೇಂದ್ರ ಸಿಂಗ್ ಹಾಗೂ ಅನುರಾಧ ದಂಪತಿಗೆ ಜನಿಸಿದಂತಹ ಮಗನೇ ಈ ಆದಿತ್ಯ ಸಿಂಗ್ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.