ಗುರುವಾರ ಲಕ್ಷ್ಮಿ ಸ್ತೋತ್ರ ತಪ್ಪದೇ ಮಾರ್ಗಶಿರ ಮಾಸದ ಪ್ರತಿ ಗುರುವಾರ ಹೇಳಿ||ಹೆಣ್ಣು ಮಕ್ಕಳು ಯಾವುದೇ ಪೂಜೆ ವಿಧಾನಗಳನ್ನು ಮಾಡಬೇಕು ಎಂದರೆ ಆ ಪೂಜೆಯಲ್ಲಿ ಇರುವಂತಹ ಕೆಲವೊಂದು ನಿಯಮಗಳನ್ನು ಅನುಸರಿಸಲೇ ಬೇಕಾಗಿರುತ್ತದೆ ಏಕೆಂದರೆ ಯಾವುದೇ ರೀತಿಯ ಪೂಜೆಯನ್ನು ನೀವು ಮಾಡಿದರು ಅದನ್ನು ಶಾಸ್ತ್ರ ಬದ್ಧವಾಗಿ ಮಾಡಿದರೆ ಮಾತ್ರ ಆ ಒಂದು ಪೂಜೆಯಿಂದ ನಿಮಗೆ ಪ್ರತಿಫಲ ಸಿಗುತ್ತದೆ ಬದಲಾಗಿ ಸುಮ್ಮನೆ ಆ ಪೂಜೆಯನ್ನು ಮಾಡಲೇಬೇಕು ಎಂದು ಮಾಡಿದರೆ ಅದರಿಂದ ಯಾವುದೇ ರೀತಿಯ ಪ್ರತಿಫಲ ಸಿಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ನೀವು ಯಾವ ದೇವರನ್ನೇ ಪೂಜೆ ಮಾಡಿ ಆ ದೇವರ ಪೂಜೆಯನ್ನು ನಿಯಮವಾಗಿ ಶಾಸ್ತ್ರ ಬದ್ಧವಾಗಿ ಮಾಡುವುದನ್ನು ಕಲಿತು ಕೊಳ್ಳಬೇಕು ಆಗ ಮಾತ್ರ ಆ ದೇವಿಯ ಅನುಗ್ರಹ ನಮಗೆ ಸಿಗುತ್ತದೆ.
ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮಾರ್ಗಶಿರ ಮಾಸದಲ್ಲಿ ಯಾವ ರೀತಿಯಾಗಿ ಪೂಜೆಯನ್ನು ಮಾಡಬೇಕು ಹಾಗೂ ಆ ಒಂದು ತಿಂಗಳು ಯಾವ ಒಂದು ವಿಶೇಷತೆಯನ್ನು ಒಳ ಗೊಂಡಿದೆ ಹಾಗೂ ಆ ಮಾಸದಲ್ಲಿ ಯಾರು ಯಾರು ಭಕ್ತಿಯಿಂದ ಪೂಜೆ ಮಾಡಿದರೆ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದು ಹೀಗೆ ಮಾರ್ಗಶಿರ ಮಾಸಕ್ಕೆ ಸಂಬಂಧಪಟ್ಟಂತಹ ಹಲವಾರು ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ ಅದರಲ್ಲೂ ಮಾರ್ಗಶಿರ ಮಾಸದಲ್ಲಿ ಮನೆಯಲ್ಲಿ ಕಳಶವನ್ನು ವಾರಕ್ಕೆ ಒಮ್ಮೆಯಾದರೂ ಬದಲಾಯಿಸಬೇಕು ಅಂದರೆ ಪ್ರತಿ ಗುರುವಾರದ ದಿನ ನಿಮ್ಮ ಮನೆಯಲ್ಲಿ ಇರುವಂತಹ ಕಳಶವನ್ನು ಸ್ವಚ್ಛವಾಗಿ ತೊಳೆದು ಹೊಸದಾಗಿ ಪೂಜೆ ಮಾಡಿ ಅದಕ್ಕೆ ನೈವೇದ್ಯವನ್ನು ಅರ್ಪಿಸಬೇಕು ಇದರ ಜೊತೆಗೆ ಗುರವಾರದ ಸಮಯ ಈ ಒಂದು ಸ್ತೋತ್ರ ವನ್ನು ಹೇಳುವುದರಿಂದ ನಿಮ್ಮ ಎಲ್ಲ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದು ಜೊತೆಗೆ ನಿಮ್ಮ ಎಲ್ಲಾ ಕಷ್ಟ ದುಃಖ ನೋವುಗಳನ್ನು ದೂರ ಮಾಡಿಕೊಳ್ಳಬಹುದಾ ಗಿದೆ ಅಷ್ಟರಮಟ್ಟಿಗೆ ಈ ಒಂದು ಸ್ತೋತ್ರ ನಿಮಗೆ ಫಲವನ್ನು ಕೊಡುತ್ತದೆ.
ಅದರಲ್ಲೂ ಮಾರ್ಗಶಿರ ಮಾಸದಲ್ಲಿ ಲಕ್ಷ್ಮೀದೇವಿಯ ಪೂಜೆಯನ್ನು ಬಹಳ ಭಕ್ತಿಯಿಂದ ಮಾಡಬೇಕು ಅದರಲ್ಲೂ ಯಾವ ಸಮಯದಲ್ಲಿ ಮಾಡಬೇಕು ಎಂದು ನೋಡುವುದಾದರೆ ಗೋದೋಳಿ ಮುಹೂರ್ತ ಅಂದರೆ ಲಕ್ಷ್ಮಿ ಬರುವಂತಹ ಸಮಯ ಅಂದರೆ ಸೂರ್ಯ ಅಸ್ತಮ ವಾಗುವಂತಹ ಸಮಯದಲ್ಲಿ ಲಕ್ಷ್ಮಿ ಮನೆಯ ಒಳಗೆ ಬರುತ್ತಾಳೆ ಎಂಬಂತಹ ನಂಬಿಕೆ ಇದೆ ಆದ್ದರಿಂದ ಆ ಒಂದು ಸಮಯದಲ್ಲಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವುದು ಬಹಳ ಉತ್ತಮ ಹಾಗಾಗಿ ಆ ಸಮಯದಲ್ಲಿ ಪೂಜೆ ಮಾಡಿದರೆ ಆ ದೇವಿಯ ಪೂರ್ಣ ಫಲ ನಿಮಗೆ ಸಿಗುತ್ತದೆ.ಇದರ ಜೊತೆ ಈ ಪೂಜೆಯನ್ನು ಮಾಡುವ ತನಕ ಯಾವುದೇ ಕಾರಣ ಕ್ಕೂ ಬೇಯಿಸಿದ ಆಹಾರ ಪದಾರ್ಥವನ್ನು ಸೇವಿಸ ಬಾರದು ಬದಲಾಗಿ ಹಣ್ಣು ತಿನ್ನಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.