ರಶ್ಮಿಕರನ್ನು ಕನ್ನಡಿಗರು ದ್ವೇಷಿಸಲು ಇರುವ ನಿಜವಾದ ಕಾರಣಗಳು ಇವೇ ನೋಡಿ||ನಟಿ ರಶ್ಮಿಕ ಮಂದಣ್ಣ ಇವರನ್ನು ಕನ್ನಡ ಚಿತ್ರರಂಗ ದಿಂದ ಬ್ಯಾನ್ ಮಾಡಬೇಕು ಎಂದು ಎಲ್ಲಾ ಕಡೆ ಯಿಂದಲೂ ಕೂಡ ಜನಾಗ್ರಹ ವ್ಯಕ್ತವಾಗುತ್ತಿದೆ ಜನ ರಶ್ಮಿಕ ಮಂದಣ್ಣ ಅವರ ನಡೆನುಡಿಯಿಂದ ಬಹಳ ಬೇಸರ ಗೊಂಡಿದ್ದಾರೆ ರಶ್ಮಿಕಾ ತಮ್ಮ ನಾಡು ನುಡಿಯ ಕಡೆ ನಿರ್ಲಕ್ಷದಿಂದಾಗಿ ದಿನೇ ದಿನೇ ಕನ್ನಡಿಗರ ವಿರೋಧ ವನ್ನು ಕಟ್ಟಿಕೊಳ್ಳುತ್ತಿದ್ದಾರೆ ಹಾಗಾದರೆ ಅವರನ್ನು ಇದೊಂದೇ ಕಾರಣದಿಂದ ಚಿತ್ರರಂಗದಿಂದ ಬ್ಯಾನ್ ಮಾಡಲು ಸಾಧ್ಯನಾ ಹೀಗೆ ಕಲಾವಿದರೊಬ್ಬರನ್ನು ಕೇವಲ ಜನಾಗ್ರಹದ ಮುಖಾಂತರ ಬ್ಯಾನ್ ಮಾಡಲು ಸಾಧ್ಯ ಇದೆಯಾ ಈ ಮುನ್ನ ಇದೇ ರೀತಿಯಾಗಿ ಯಾರನ್ನಾದರೂ ಜನಾಗ್ರಹದಿಂದ ಚಿತ್ರರಂಗ ಬ್ಯಾನ್ ಮಾಡಿತ್ತ ಎಂದು ನೋಡುವುದಾದರೆ ಅತ್ತ ತಮಿಳಿನ ದೊಡ್ಡ ಹಾಸ್ಯ ನಟರಾಗಿದ್ದಂತಹ ವಡಿವೇಲ್ ಅವರನ್ನು ಕೆಲವು ವರ್ಷ ಗಳ ಹಿಂದೆ ಕಾಲಿವುಡ್ ಇಂಡಸ್ಟ್ರಿ ಬ್ಯಾನ್ ಮಾಡಿತ್ತು.
ಆದರೆ ಅಲ್ಲಿದ್ದ ಕಾರಣಗಳೇ ಬೇರೆ ಅವರಿಂದ ನಿರ್ಮಾ ಪಕರಿಗೆ ಬಹಳ ವಂಚನೆ ನಡೆದಿತ್ತು ಈ ಬಗ್ಗೆ ವಡಿವೇಲ್ ಅವರಿಗೆ ಎಷ್ಟೇ ನೋಟಿಸ್ ಕೊಟ್ಟರು ಕೂಡ ರೆಸ್ಪಾನ್ಸ್ ಮಾಡದೆ ಹೋದಾಗ ಅಲ್ಲಿಯ ಚೇಂಬರ್ ಅವರಿಗೆ ಬ್ಯಾನ್ ಮಾಡಲು ನಿರ್ಧಾರ ಮಾಡಿತ್ತು ಆದರೆ ಇಲ್ಲಿ ರಶ್ಮಿಕ ಅವರ ವಿಷಯದಲ್ಲಿ ಆಗಿರುವುದೇ ಬೇರೆ ಅವರಿಂದ ಯಾವುದೇ ಒಬ್ಬ ನಿರ್ಮಾಪಕರಿಗಾಗಲಿ ನಿರ್ದೇಶಕರಿಗಾಗಲಿ ಮೋಸ ಆಗಿಲ್ಲ ಬದಲಾಗಿ ಕೆಲವು ಅವರ ವರ್ತನೆಗಳಿಂದ ಕನ್ನಡಿಗರಿಗೆ ಹಾಗೂ ಜನಸಾ ಮಾನ್ಯರಿಗೆ ಬೇಸರವಾಗಿದೆ ಹಾಗೂ ರಶ್ಮಿಕ ಅವರನ್ನು ಕೈ ಬಿಡುವಂತೆ ಜನ ಒತ್ತಾಯ ಮಾಡುತ್ತಿದ್ದಾರೆ ಈ ಒಂದೇ ಕಾರಣದಿಂದಾಗಿ ಯಾವ ಕಲಾವಿದ ಅಥವಾ ಕಲಾವಿದೆಯನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಇನ್ನು ಜನ ರಶ್ಮಿಕಾ ಅವರ ಮೇಲೆ ಈ ರೀತಿ ತಿರುಗಿ ಬೀಳಲು ಕಾರಣವೇನು ಎಂದು ತಿಳಿಯುತ್ತಾ ಹೋಗೋಣ.
ಇತ್ತೀಚೆಗೆ ನಡೆದಂತಹ ಒಂದು ಸಂದರ್ಶನದಲ್ಲಿ ತಾವು ನಡೆದು ಬಂದ ಸಿನಿ ಜರ್ನಿ ಬಗ್ಗೆ ಹೇಳುತ್ತಾ ತಮಗೆ ಮೊಟ್ಟ ಮೊದಲು ಚಾನ್ಸ್ ಕೊಟ್ಟಂತಹ ಪರಂ ಹೌಸ್ ಸ್ಟುಡಿಯೋ ಹೆಸರು ಹೇಳದೆ ಕೇವಲ ಕೈ ಸನ್ನೆ ಮೂಲಕ ಅದನ್ನು ದಿಸ್ ಪ್ರೊಡಕ್ಷನ್ ಹೌಸ್ ಎಂದು ಹೇಳುವು ದರ ಮೂಲಕ ಕನ್ನಡಿಗರ ಬೇಸರಕ್ಕೆ ಸಾಕ್ಷಿಯಾಗಿದ್ದರು ಇದರಿಂದಾಗಿ ರಶ್ಮಿಕ ಅವರಿಗೆ ಈ ನೆಲದ ಮೇಲೆ ವಿಶ್ವಾಸವಿಲ್ಲ ತನಗೆ ಮೊದಲು ಚಾನ್ಸ್ ನೀಡಿದಂತಹ ಪ್ರೊಡಕ್ಷನ್ ಹೌಸ್ ಹೆಸರು ಹೇಳುವುದಕ್ಕೂ ಕೂಡ ಅವಳಿಗೆ ನಿಯತ್ತು ಇಲ್ಲ ಎಂದು ಟ್ರೊಲ್ ಮಾಡಿದ್ದರು ಈಗ ಈ ಒಂದು ವಿಷಯವೇ ಅವರನ್ನು ಚಿತ್ರರಂಗ ದಿಂದ ಬ್ಯಾನ್ ಮಾಡಬೇಕು ಎಂದು ಜನಾಗ್ರಹಕ್ಕೆ ಕಾರಣವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವೀಕ್ಷಿಸಿ.