ಟೋಪಿ ಅಮ್ಮನ ರಹಸ್ಯ ಈ ಟೋಪಿ ಅಮ್ಮನಿಗೆ ಇರುವ ಶಕ್ತಿ ಎಂತದ್ದು…??ಹಿಂದೂ ಧರ್ಮಗಳ ನಂಬಿಕೆಯ ಪ್ರಕಾರ ಇಡೀ ಬ್ರಹ್ಮಾಂಡವೇ ಪಂಚಭೂತಗಳಿಂದ ಆಗಿವೆ ಅದುವೇ ಪಂಚಭೂತಗಳೆಂಬ ಐದು ಮೂಲ ವಸ್ತುಗಳಿಂದಾಗಿ ಹಾಗಾಗಿ ಈ 5 ಮೂಲ ವಸ್ತುಗಳನ್ನು ನಾವು ದೇವ ರೆಂದು ಪೂಜಿಸುತ್ತೇವೆ ಅದು ಭೂಮಿ ಜಲ ಅಗ್ನಿ ವಾಯು ಮತ್ತು ಆಕಾಶ ನಮ್ಮ ದೇಶದಲ್ಲಿ ಪಂಚಭೂತ ಗಳಿಗೆ ಮೀಸಲಾದ ಐದು ದೇವಸ್ಥಾನಗಳು ಇದೆ ಈ ದೇವಸ್ಥಾನಗಳನ್ನು ನಾವು ಪಂಚಭೂತ ಕ್ಷೇತ್ರಗಳೆಂದು ಕರೆಯುತ್ತೇವೆ ಇಲ್ಲಿ ನಮ್ಮ 5 ಪಂಚಭೂತಗಳಿಗೆ ವಿಶೇಷವಾದ ಸ್ಥಾನಮಾನಗಳು ಇದೆ ಹಾಗಾದರೆ ಪಂಚ ಭೂತಗಳಿಗೆ ಹೆಸರಾಗಿರುವಂತಹ ದೇವಾಲಯಗಳ ಹೆಸರು ಯಾವುದು ಎಂದು ಈ ಕೆಳಗಿನಂತೆ ತಿಳಿಯೋಣ ಶ್ರೀ ಕಾಳಾಸ್ತ್ರಿ ಇದು ವಾಯು ದೇವರಿಗೆ ಸಂಬಂಧಿಸಿದೆ ಚಿದಂಬರ ನಟರಾಜನ ದೇವಸ್ಥಾನ ಇದು ಆಕಾಶ ತತ್ವಕ್ಕೆ ಸಂಬಂಧಿಸಿದೆ.
ಕಂಚೆ ಪುರದ ಏಕಾಂಬೇಶ್ವರ ದೇವಸ್ಥಾನ ಇದು ಭೂಮಿ ತತ್ವಕ್ಕೆ ಸಂಬಂಧಿಸಿದೆ ತಿರುಚಿನಾಪಳ್ಳಿಯ ತಿರುವೈನಕ ದೇವಸ್ಥಾನ ಜಲ ತತ್ವಕ್ಕೆ ಸಂಬಂಧಿಸಿದೆ ಹಾಗೆಯೇ ತಿರುವನ ಮಲೈ ನ ಅರುಣಾಚಲ ಕ್ಷೇತ್ರವು ಅಗ್ನಿಗೆ ಸಂಬಂಧಿಸಿದೆ ಈ 5 ದೇವಸ್ಥಾನಗಳಲ್ಲಿ ಶಿವನನ್ನು ಬೇರೆ ಬೇರೆ ರೂಪದಲ್ಲಿ ಪೂಜಿಸಲಾಗುತ್ತದೆ ತಿರುವಣ ಮಲೈ ಇದು ಅರುಣಾಚಲೇಶ್ವರನ ದೇವಸ್ಥಾನ 9ನೇ ಶತಮಾನದಲ್ಲಿ ಇದನ್ನು ಕಟ್ಟಿಸಿದ್ದಾರೆ ಈ ದೇವಸ್ಥಾನವು ನಾನು ಮೊದಲೇ ಹೇಳಿರುವ ಹಾಗೆ ಶಿವನಿಗೆ ಸಮರ್ಪಿತವಾದ ದೇವಸ್ಥಾನವಾಗಿದೆ ಸ್ಮರಣೆಯಿಂದಲೇ ಮುಕ್ತಿಯನ್ನು ಕರುಣಿಸುವ ದೇವಸ್ಥಾನ ಎಂದರೆ ಅದು ತಿರುವಣ ಮಲೈನ ಅಲ್ಲಿನ ಅರುಣಾಚಲೇಶ್ವರನ ದೇವಸ್ಥಾನ ಅರುಣಾಚಲನನ್ನು ತಿರುವಣಮಲೈ ಎಂದು ಕೂಡ ಕರೆಯುತ್ತೇವೆ ಈ ಅರುಣಾಚಲಂ ನಲ್ಲಿ ದೇವಸ್ಥಾನ ಪ್ರದಕ್ಷಿಣೆ ಮಾಡುವಾಗ ಯೋಗಿಗಳನ್ನು ಅವಧೂತರನ್ನು ನಾವು ಕಾಣಬಹುದು ಈ ಅರುಣಾಚಲಂ ನಲ್ಲಿ ಹೆಜ್ಜೆ ಇಟ್ಟ ತಕ್ಷಣ ನಮಗೆ ಏನೋ ಒಂದು.
ಅಂದರೆ ನಮ್ಮ ಮನಸ್ಸಿಗೆ ನೆಮ್ಮದಿ ಒಂದು ರೀತಿಯ ಒಳ್ಳೆಯ ಅನುಭವ ಆಗುತ್ತದೆ ಈ ಅನುಭವವನ್ನು ಮಾತಿನಲ್ಲಿ ಹೇಳಲು ಆಗುವುದಿಲ್ಲ ಯಾಕೆ ಎಂದರೆ ಕೆಲವು ಸ್ಥಳಗಳಿಗೆ ನಾವು ಹೋಗಿ ಬಂದ ನಂತರ ಆ ಸ್ಥಳದ ಬಗ್ಗೆ ನಮ್ಮ ಮನಸ್ಸು ಯೋಚಿಸುತ್ತಿರುತ್ತದೆ ದೈಹಿಕವಾಗಿ ನಾವು ಮನೆಯಲ್ಲೇ ಇದ್ದರೂ ಸಹ ನಮ್ಮ ಮನಸ್ಸು ಮಾತ್ರ ಅಲ್ಲೇ ಇರುತ್ತದೆ ಅಷ್ಟಕ್ಕೂ ಅರುಣಾಚಲಂ ನಲ್ಲಿ ಇರುವಂತಹ ಮಾಹಿಮೆಯನ್ನು ನೋಡೋಣ ಅಷ್ಟಕ್ಕೂ ಟೋಪಿ ಅಮ್ಮ ಎಂದರೆ ಯಾರು ಇವರು ಒಬ್ಬ ಅವಧೂತರು ಟೋಪಿ ಅಮ್ಮ ಅವರು ದಿನಕ್ಕೆ ಎರಡು ಬಾರಿ ಗಿರಿ ಪ್ರದಕ್ಷಿಣೆಯನ್ನು ಹಾಕುತ್ತಾರೆ ಇಷ್ಟಕ್ಕೂ ಟೋಪಿ ಅಮ್ಮ ಯಾರು ಎಂದರೆ ಕನ್ಯಾಕುಮಾರಿಯಲ್ಲಿ ಮರಣಿಸಿದಂತಹ ಮಾಯಮ್ಮನೆ ಈ ಅರುಣಾಚಲಂ ನಲ್ಲಿ ಜನಿಸಿರುವಂತಹ ಟೋಪಿ ಅಮ್ಮ ಎಂದು ಎಲ್ಲರೂ ನಂಬುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.