ಅಯ್ಯಪ್ಪನ ವ್ರತಗಳ ಹಿಂದಿನ ರಸ್ತೆಗಳು….. ಹಿಂದೂ ಧರ್ಮದ ಆಚರಣೆಗಳಲ್ಲಿ ಹಲವು ದೇವರುಗಳ ಆರಾಧನೆಗಳಿವೆ ಅದರಲ್ಲಿ ದಕ್ಷಿಣ ಭಾರತದ ಹಲವು ದೇವಸ್ಥಾನಗಳಲ್ಲಿ ಶಬರಿಮಲೆ ದೇವಸ್ಥಾನವು ಒಂದು,ಕೋಟ್ಯಂತರ ಭಕ್ತಾದಿಗಳನ್ನು ಹೊಂದಿರುವ ಅಯ್ಯಪ್ಪ ಸ್ವಾಮಿ ದೇಶ ವಿದೇಶಗಳಿಂದ ಶಬರಿಮಲೆಗೆ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ಬರುತ್ತಾರೆ.
ಅಯ್ಯಪ್ಪ ಸ್ವಾಮಿಯ ವ್ರತ ಆಚರಣೆಗಳು ಹಾಗೂ ಪೂಜಾ ವಿಧಾನಗಳು ವಿಶೇಷವಾಗಿವೆ ಅಯ್ಯಪ್ಪ ಸ್ವಾಮಿಯ ಭಕ್ತರು ಕಪ್ಪು ಬಟ್ಟೆಯನ್ನು ಯಾಕೆ ಹಾಕುತ್ತಾರೆ ಇರುಮುಡಿ ಕಟ್ಟುವ ಉದ್ದೇಶ ಏನು ಗುರುಸ್ವಾಮಿ ಅಂದರೆ ಯಾರು ಅಯ್ಯಪ್ಪ ಸ್ವಾಮಿ ವಿಶಿಷ್ಟ ಬಂಗಿಯಲ್ಲಿ ಕೂತು ಭಕ್ತರಿಗೆ ದರ್ಶನ ಯಾಕೆ ಕೊಡುತ್ತಿದ್ದಾನೆ.ಹೀಗೆ ಅಯ್ಯಪ್ಪ ಸ್ವಾಮಿಯ ವ್ರತ ಆಚರಣೆಗಳ ಇಂದಿನ ರಹಸ್ಯಗಳ ಬಗ್ಗೆ.
ನಾವು ಈ ದಿನ ತಿಳಿದುಕೊಳ್ಳೋಣ. ಶಬರಿಮಲೆ ಅಯ್ಯಪ್ಪ ಸ್ವಾಮಿಯು ಭಕ್ತರ ಉದ್ಧಾರಕ್ಕಾಗಿ ಬಂದು ನೆಲೆಸಿದ ಬೆಟ್ಟವೇ ಶಬರಿಮಲೆ ಬೆಟ್ಟ ಹಿಂದೆ ಈ ಬೆಟ್ಟದಲ್ಲಿ ಶಬರಿ ರಾಮನ ಬರುವಿಕೆಗಾಗಿ ಜೀವನವಿಡಿ ಕಾದು ಕುಳಿತಿದ್ದಳು ಹಾಗಾಗಿ ಶಬರಿಯೂ ಇದ್ದ ಬೆಟ್ಟವನ್ನು ಶಬರಿಮಲೆ ಎಂದು ಕರೆಯುತ್ತಾರೆ.ಮಲೆ ಎಂದರೆ ಬೆಟ್ಟ ಎಂದು ಅರ್ಥ.
14 ದಿನದ ವ್ರತದ ಇಂದಿನ ಪೌರಾಣಿಕ ಕಥೆ ಅಯ್ಯಪ್ಪ ಸ್ವಾಮಿ ಶನೇಶ್ವರನಿಗೆ ನೀನು ನನ್ನ ಭಕ್ತರನ್ನು ಕಾಡಬೇಡ ಎಂದು ಹೇಳುತ್ತಾನೆ ಆದರೆ ಶನೇಶ್ವರ ನಾನು ದೇವಾನುದೇವತೆಗಳನ್ನೇ ಬಿಟ್ಟಿಲ್ಲ ನನ್ನ ದೃಷ್ಟಿಗೆ ಬೀಳದವರೆ ಇಲ್ಲ ಹಾಗಾಗಿ ಇವರು ಸಹ ಏಳು ವರ್ಷ ತೊಂದರೆಯನ್ನು ಅನುಭವಿಸಲೇ ಬೇಕು ಎಂದು ಹೇಳುತ್ತಾರೆ ಹಾಗಾಗಿ ಅಯ್ಯಪ್ಪ ಸ್ವಾಮಿ.
ನೀನು ಏಳು ವರ್ಷ ಕೊಡುವ ತೊಂದರೆಯನ್ನ ನನ್ನ ಭಕ್ತರಿಗೆ 41 ದಿನಗಳ ವರೆಗೂ ನೀಡು ಎಂದು ಹೇಳುತ್ತಾರೆ ಅದಕ್ಕೆ ಶನೇಶ್ವರನು ಒಪ್ಪಿಕೊಳ್ಳುತ್ತಾನೆ.ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಕರಿಯ ವಸ್ತ್ರ ಏಕೆ ಧರಿಸುತ್ತಾರೆ ಅಯ್ಯಪ್ಪ ಸ್ವಾಮಿ ಮತ್ತು ಶನೇಶ್ವರನ ಒಪ್ಪಂದದ ಪ್ರಕಾರ ಶನೇಶ್ವರನಿಗೆ ಪ್ರಿಯವಾದ ಕಪ್ಪು ಬಣ್ಣದ ವಸ್ತ್ರ ವನ್ನ ವ್ರತದ ವೇಳೆ ಧರಿಸಬೇಕಾಗುತ್ತದೆ.
ಹಾಗೂ ಇದಕ್ಕೆ ವೈಜ್ಞಾನಿಕ ಹಿನ್ನೆಲೆ ಸಹ ಇದೆ ಅಯ್ಯಪ್ಪನ ವ್ರತ ಚಳಿಗಾಲದಲ್ಲಿ ಆರಂಭವಾಗುತ್ತದೆ ಈ ಕಾಲದಲ್ಲಿ ಕಪ್ಪುಬಣ್ಣದ ಬಟ್ಟೆಗಳನ್ನ ಧರಿಸುವುದರಿಂದ ದೇಹವನ್ನ ಬೆಚ್ಚಗೆ ಇಡುತ್ತದೆ ಅಂದರೆ ದೇಹದ ಉಷ್ಣತೆಯನ್ನ ಸಮತೋಲನವಾಗಿ ಕಾಪಾಡುತ್ತದೆ ಹಾಗೂ ರಕ್ತ ಸಂಚಲನ ಸಹ ಸರಾಗವಾಗಿ ಆಗುತ್ತದೆ.ಇರುಮುಡಿಯನ್ನು ಏಕೆ ಕಟ್ಟುತ್ತಾರೆ.
ಇದಕ್ಕೂ ಒಂದು ಪೌರಾಣಿಕ ಹಿನ್ನೆಲೆ ಇದೆ ಹಿಂದೆ ಅಯ್ಯಪ್ಪ ಸ್ವಾಮಿ ಹುಲಿ ಬೇಟೆಗೆ ಎಂದು ಕಾಡಿಗೆ ಹೋಗುವಾಗ ಒಂದೇ ಬಟ್ಟೆಯಲ್ಲಿ ಒಂದು ಗಂಟೆನಲ್ಲಿ ಪೂಜಾ ಸಾಮಗ್ರಿ ಗಳು ಇನ್ನೊಂದು ಗಂಟಿನಲ್ಲಿ ದಿನಬಳಕೆಯ ವಸ್ತುಗಳನ್ನ ಕಟ್ಟಿಕೊಂಡು ಹೋಗಿದ್ದರಂತೆ ಹಾಗಾಗಿ ಇರುಮುಡಿಯನ್ನ ಈ ರೀತಿ ಕಟ್ಟಿ ಅಯ್ಯಪ್ಪನ ಭಕ್ತರು ಒರುತ್ತಾರೆ ಎನ್ನುವ ನಂಬಿಕೆ ಇದೆ ಹಾಗೆ ವೈಜ್ಞಾನಿಕವಾಗಿ ಹೇಳುವುದಾದರೆ.
ಮನುಷ್ಯನ ದೇಹ ಮತ್ತು ಮಾನಸಿಕ ವರ್ತನೆಗಳು ವ್ಯಕ್ತಿಯ ಮೆದುಳಿನ ಮೇಲೆ ಅವಲಂಬಿತವಾಗಿರುತ್ತದೆ ನಮ್ಮಮೆದುಳಿನಲ್ಲಿ ತಲೆಯ ಮುಂದಿನ ಭಾಗದಲ್ಲಿ ಸೆರೆಬ್ರುಮ್ ಮತ್ತು ತಲೆಯ ಹಿಂದಿನ ಭಾಗದಲ್ಲಿ ಸೆರುಬೇಳ್ಳುಮ್ ಎಂಬ ಎರಡು ವ್ಯವಸ್ಥೆಗಳು ಇರುತ್ತವೆ ಇರುಮುಡಿ ಕಟ್ಟಿ ತಲೆಯ ಮೇಲೆ ಇಟ್ಟುಕೊಳ್ಳುವ ವಿಧಾನ ದಿಂದ ಈ ಎರಡು ಗ್ರಂಥಿಗಳು.
ಸರಿಯಾಗಿ ಕೆಲಸ ಮಾಡುತ್ತದೆ ಒಂದು ಗಂಟೆನಲ್ಲಿ ಅಕ್ಕಿ ಬರುವಂತೆ ಮಾಡಿ ಅದನ್ನು ತಲೆಯ ಮೇಲೆ ಇಡಲಾಗುತ್ತದೆ ಇನ್ನೊಂದು ಗಂಟಿನಲ್ಲಿ ಕಾಯಿ ಬರುವಂತೆ ಮಾಡಿ ಅದನ್ನ ತಲೆಯಿಂದ ಭುಜದ ಮೇಲೆ ಇಳಿಬಿಟ್ಟು ಕಟ್ಟಲಾಗುತ್ತದೆ ತುಂಬಾ ದಿನಗಳವರೆಗೆ.
ಯಾತ್ರೆಯಲ್ಲಿ ಇರುವುದರಿಂದ ಸರಿಯಾದ ಆಹಾರ ಸಿಗದೇ ಆರೋಗ್ಯ ಅದಗೆಡುವ ಸಾಧ್ಯತೆ ಇರುತ್ತದೆ ಈ ರೀತಿಯಲ್ಲಿ ಇರುಮುಡಿ ಕಟ್ಟುವುದರಿಂದ ಆರೋಗ್ಯ ಸಹ ಕಾಪಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ