ಶ್ರೀ ಸಿದ್ದೇಶ್ವರ ಶ್ರೀಗಳು ಹುಟ್ಟಿ ಬೆಳೆದ ಮನೆಯಲ್ಲಿದೆ ಹಲವು ವಿಶೇಷತೆಗಳು ..ಜ್ಞಾನಯೋಗಿಯ ಮನೆ ಎಷ್ಟು ಸುಂದರ ನೋಡಿ » Karnataka's Best News Portal

ಶ್ರೀ ಸಿದ್ದೇಶ್ವರ ಶ್ರೀಗಳು ಹುಟ್ಟಿ ಬೆಳೆದ ಮನೆಯಲ್ಲಿದೆ ಹಲವು ವಿಶೇಷತೆಗಳು ..ಜ್ಞಾನಯೋಗಿಯ ಮನೆ ಎಷ್ಟು ಸುಂದರ ನೋಡಿ

ಶ್ರೀಗಳು ಹುಟ್ಟಿ ಬೆಳೆದ ಮನೆಯಲ್ಲಿದೆ ಹಲವು ವಿಶೇಷತೆ||
ಕಳೆದ ಒಂದು ದಿನಗಳ ಹಿಂದೆ ನಮಗೆಲ್ಲರಿಗೂ ತಿಳಿದಿ ರುವಂತೆ ಶ್ರೀ ಸಿದ್ದೇಶ್ವರ ಸ್ವಾಮಿಗಳು ಭೂಲೋಕವನ್ನು ತ್ಯಜಿಸಿದ್ದಾರೆ ಸಿದ್ದೇಶ್ವರ ಶ್ರೀಗಳನ್ನು ಕಳೆದುಕೊಂಡು ಪ್ರತಿಯೊಬ್ಬರೂ ಕೂಡ ಅನಾಥರಾಗಿದ್ದಾರೆ ಅದರಲ್ಲೂ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ವಿಜಯಪುರ ಜಿಲ್ಲೆಯ ತಿಕ್ಕೋಟ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ರುವoತಹ ಪ್ರತಿಯೊಬ್ಬರೂ ಕೂಡ ಅವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ.

WhatsApp Group Join Now
Telegram Group Join Now

ಅವರನ್ನು ಕಳೆದುಕೊಂಡು ಅವರ ಗ್ರಾಮಸ್ಥರು ಅನಾ ಥರಾಗಿದ್ದಾರೆ ಎಂದೇ ಹೇಳಬಹುದು ಹೌದು ಶ್ರೀಗಳು ತಮ್ಮ ಬಾಲ್ಯದ ದಿನಗಳನ್ನು ಬಿಜ್ಜರಗಿ ಗ್ರಾಮದಲ್ಲಿಯೇ ಕಳೆದಿದ್ದು ಅವರು ನಾಲ್ಕನೇ ತರಗತಿಯ ತನಕ ಗ್ರಾಮದಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿದರು ನಂತರದ ದಿನಗಳಲ್ಲಿ ಅವರು ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿ ಆಧ್ಯಾತ್ಮದ ಕಡೆಗೆ ಹೋದರು ಶ್ರೀ ಸಿದ್ದೇಶ್ವರ ಅವರಿಗೆ ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿ ಬರಲು ಕಾರಣ ಯಾರು ಎಂದರೆ ಶ್ರೀ ಮಲ್ಲಿಕಾರ್ಜುನ ಶ್ರೀಗಳು.

ಹೌದು ಮಲ್ಲಿಕಾರ್ಜುನ ಶ್ರೀಗಳು ತಮ್ಮ ಜೀವನದಲ್ಲಿ ಈಗಾಗಲೇ ಅಧ್ಯಾತ್ಮದ ಬಗ್ಗೆ ಆಧ್ಯಾತ್ಮಿಕ ವಿಷಯದ ಬಗ್ಗೆ ಜನರಿಗೆ ಬೋಧನೆಯನ್ನು ಮಾಡುತ್ತಿದ್ದರು ಇವರು ಮಾಡುವಂತಹ ಸ್ಥಳಗಳಿಗೆಲ್ಲ ಶ್ರೀ ಸಿದ್ದೇಶ್ವರ ಶ್ರೀಗಳನ್ನು ಕರೆದುಕೊಂಡು ಹೋಗುತ್ತಿದ್ದರು ಇದರಿಂದ ಅವರು ಇನ್ನೂ ಹೆಚ್ಚು ಆಧ್ಯಾತ್ಮದ ಕಡೆಗೆ ವಾಲಲು ಪ್ರಮುಖ ವಾದಂತಹ ಕಾರಣವಾಯಿತು ಎಂದೇ ಹೇಳಬಹುದು.

ಅದರಂತೆ ಶ್ರೀ ಸಿದ್ದೇಶ್ವರರು ಕೇವಲ 4ನೇ ತರಗತಿ ಯನ್ನು ಓದಿ ಮಲ್ಲಿಕಾರ್ಜುನ ಶ್ರೀಗಳ ಬಳಿ ಸೇರಿದ್ದರು ಆದರೆ ಮಲ್ಲಿಕಾರ್ಜುನ ಶ್ರೀಗಳು ಸಿದ್ದೇಶ್ವರ ಸ್ವಾಮಿಗಳಿಗೆ ವಿದ್ಯಾಭ್ಯಾಸದಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಅವರಿಗೆ ಅವರ ಜೊತೆಯಲ್ಲಿಯೇ ಇಟ್ಟುಕೊಂಡು ವಿದ್ಯಾಭ್ಯಾಸವನ್ನು ಕೂಡ ಕೊಡಿಸುವುದರ ಮುಖಾಂತರ ಆಧ್ಯಾತ್ಮದ ವಿಚಾರಗಳನ್ನು ಕೂಡ ಹೇಳಿಕೊಡುತ್ತಿದ್ದರು ಇದರಿಂದ ಶ್ರೀ ಸಿದ್ದೇಶ್ವರರು ತಮ್ಮ ಪದವಿ ಶಿಕ್ಷಣವನ್ನು ಕೂಡ ಅತ್ಯದ್ಭುತವಾಗಿ ಮುಗಿಸಿದರು.

See also  ವಿಜಯಲಕ್ಷ್ಮಿ ಶಿಬರೂರು ಅವರ ನಿಜವಾದ ಸ್ಟೋರಿ ಇಲ್ಲಿದೆ ನೋಡಿ ಇವರ ವಿದ್ಯೆ,ಅಪ್ಪ ಅಮ್ಮ,ಸ್ವಂತ ಊರು ಮುಂಚೆ ಏನ್ಮಾಡ್ತಾ ಇದ್ರು ನೋಡಿ

ಇದರಿಂದ ಶ್ರೀ ಸಿದ್ದೇಶ್ವರರು ಮಲ್ಲಿಕಾರ್ಜುನ ಶ್ರೀಗಳ ಆಶೀರ್ವಾದದಂತೆ ಎಲ್ಲ ವೇದ ಉಪನಿಷತ್ತುಗಳನ್ನು ಹಾಗೂ ತಮ್ಮ ವಿದ್ಯಾಭ್ಯಾಸದಲ್ಲಿಯೂ ಕೂಡ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿ ಅವರು ತಮ್ಮದೇ ಆದಂತಹ ಅಧ್ಯಾತ್ಮದ ಚಿಂತನೆಯಲ್ಲಿ ಜನರಿಗೆ ಬೋಧನೆಯನ್ನು ಕೊಡಲು ಪ್ರಾರಂಭಿಸಿದರು ಇವರ ಮಾತುಗಳಿಗೆ ಹಾಗೂ ಇವರು ಹೇಳುವಂತಹ ಎಲ್ಲಾ ನುಡಿಗಳಿಗೆ ಜನರು ಹೆಚ್ಚಾಗಿ ಮನಸ್ಸೋತರು ಇದರಿಂದ ಶ್ರೀ ಸಿದ್ದೇಶ್ವರ ಸ್ವಾಮಿಗಳನ್ನು ಕಂಡರೆ ಜನರಿಗೆ ಅಪಾರ ಭಕ್ತಿ ಮತ್ತು ನಂಬಿಕೆ ಗೌರವ ಹೆಚ್ಚಾಯಿತು.

ಹಾಗೂ ಶ್ರೀ ಸಿದ್ದೇಶ್ವರ ಶ್ರೀಗಳು ತಮ್ಮ ಬಾಲ್ಯದ ದಿನಗ ಳನ್ನು ಅವರ ಗ್ರಾಮ ವಾದಂತಹ ಬಿಜ್ಜರಗಿ ಗ್ರಾಮದಲ್ಲಿ ಕಳೆದಿದ್ದು ಶ್ರೀಗಳಿಗೆ ಅವರ ಬಿಜ್ಜರಗಿಯಲ್ಲಿರುವಂತಹ ಮನೆ ಎಂದರೆ ತುಂಬಾ ಇಷ್ಟ ಅಲ್ಲಿ ಅವರು ಕಾಲ ಕಳೆದಿದ್ದಂತಹ ಹಾಗೂ ಅವರ ಅಲ್ಲಿ ನೆನಪುಗಳು ಎಂದರೆ ಅವರಿಗೆ ತುಂಬಾ ಇಷ್ಟ ಎಂದು ಸ್ವತಹ ಶ್ರೀಗಳೆ ಹೇಳುತ್ತಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">